Saturday, September 28, 2024
Saturday, September 28, 2024

K. S. Eshwarappa ಹಣಬಲ ಮತ್ತು ಧರ್ಮದ ನಡುವೆ ಯುದ್ಧ.ಅಂತಿಮವಾಗಿ ಧರ್ಮಕ್ಕೇ ಜಯ-ಕೆ.ಎಸ್. ಈಶ್ವರಪ್ಪ

Date:

K. S. Eshwarappa ನನ್ನ ಎದೆಯಲ್ಲಿ ಒಂದು ಕಡೆ ರಾಮ, ಮತ್ತೊಂದು ಕಡೆ ಮೋದಿ ಅವರಿದ್ದಾರೆ. ಮೋದಿ ನನಗೆ ಸ್ಫೂರ್ತಿ. ರಾಜ್ಯದಲ್ಲಿ ಯಡಿಯೂರಪ್ಪ ಮತ್ತವರ ಮಕ್ಕಳ ರಾಜಕಾರಣ ಅಂತ್ಯ ಆಗಬೇಕು ಎಂಬ ಆಸೆ ಅವರಿಗೂ, ಸಾವಿರಾರು ಹಿಂದೂ ಕಾರ್ಯಕರ್ತರ ಅಭಿಪ್ರಾಯವೂ ಇದೆ ಆಗಿದೆ. ಮೋದಿ ಅಮಿತ್ ಷಾ ಅವರೇ ನನ್ನನ್ನು ನಿಲ್ಲಿಸಿದ್ದಾರೆ ಎಂಬ ಅಭಿಪ್ರಾಯ ನನ್ನ ಬೆಂಬಲಿಸುತ್ತಿರುವವರಿಗೂ ಬಂದಿರಬಹುದು ಎಂದು ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಮಕ್ಕಳ ಕುಟುಂಬ ರಾಜಕಾರಣ ಮುಗಿಸಲು ಹೋರಾಟಕ್ಕಿಳಿದಿದ್ದೇನೆ. ಯಡಿಯೂರಪ್ಪನವರ ಜಾತಿ ಮತ್ತು º Àಣ ಬಲ ಮತ್ತು ಧರ್ಮದ ನಡುವೆ ಯುದ್ಧ ನಡೆಯುತ್ತಿದೆ. ಅಂತಿಮವಾಗಿ ಧರ್ಮ ಗೆಲ್ಲುತ್ತದೆ ಎಂದು ಈಶ್ವರಪ್ಪ ಹೇಳಿದರು.
ಪಕ್ಷ ಬಿಟ್ಟು ಹೋಗಿದ್ದ ಯಡಿಯೂರಪ್ಪ ಮೋಸ ಮಾಡಿರಲಿಲ್ಲವೇ? ಯಡಿಯೂರಪ್ಪನವರು ಯಾವ ಮುಖ ಇಟ್ಟುಕೊಂಡು ನನ್ನ ಜೊತೆ ಮಾತುಕತೆ ಗೆ ಬರುತ್ತಾರೆ? ಇಷ್ಟು ಮೋಸ ಮಾಡಿದ್ದೇನೆ ಎನ್ನುವುದು ಅವರ ಮನಸ್ಸಿನಲ್ಲಿದ್ದರೆ ನನ್ನ ಹತ್ತಿರ ಬರುವುದಿಲ್ಲ. ನಲವತ್ತು ವರ್ಷದಿಂದ ಸಂಘಟನೆಯಲ್ಲಿದ್ದೇನೆ. ಸಾಯುವವರೆಗೂ ಇರುತ್ತೇನೆ ಎಂದ ಅವರು, ಈಶ್ವರಪ್ಪನವರನ್ನು ಬೆಂಬಲಿಸುವ ಯಾವುದೇ ಮಠಾಧೀಶರಿಗೆ, ಬೆಂಬಲಿಗರಿಗೆ ಬೆದರಿಕೆ ಹಾಕಿಲ್ಲ, ಇಂತಹ ಆರೋಪ ಮಾಡುತ್ತಿರುವ ಈಶ್ವರಪ್ಪನವರು ಚಂದ್ರಗುತ್ತಿ ರೇಣುಕಾ ದೇವಿ ದೇವಸ್ಥಾನದಲ್ಲಿ ಬಂದು ಗಂಟೆ ಹೊಡೆದು ಪ್ರಮಾಣ ಮಾಡಲಿ ಎಂಬ ಬಿಜೆಪಿ ಲೋಕಸಭಾ ಅಭ್ಯರ್ಥಿ ಬಿ. ವೈ ರಾಘವೇಂದ್ರ ಅವರ ಆಹ್ವಾನಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ರಾಘವೇಂದ್ರ ಮತ್ತು ಅವರಪ್ಪನಿಗೆ (ಯಡಿಯೂರಪ್ಪ) ಸುಳ್ಳು ಹೇಳುವುದು ಅಭ್ಯಾಸವಾಗಿದೆ. ಯಡಿಯೂರಪ್ಪ ಹಾವೇರಿಯಲ್ಲಿ ಕಾಂತೇಶ್‌ಗೆ ಟಿಕೆಟ್ ಕೊಡಿಸುತ್ತೇನೆ, ನಾನೇ ಬಂದು ಕ್ಷೇತ್ರದಲ್ಲಿ K. S. Eshwarappa ಓಡಾಡಿ ಗೆಲ್ಲಿಸುತ್ತೇನೆ. ಅಂತ ಹೇಳಿರಲಿಲ್ಲ ಎಂದು ಯಡಿಯೂರಪ್ಪ ಅವರು ಗಂಟೆ ಹೊಡೆದು ಪ್ರಮಾಣ ಮಾಡುತ್ತಾರಾ? ಸಾಧುಸಂತರಿಗೆ ನೋವುಂಟು ಮಾಡಿಲ್ಲ, ಬೆದರಿಕೆ ಹಾಕಿಲ್ಲ ಎಂದು ರಾಘವೇಂದ್ರ ಗಂಟೆ ಹೊಡೆದು ಪ್ರಮಾಣ ಮಾಡುತ್ತಾರಾ ಎಂದು ಪ್ರಶ್ನಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...