Thursday, March 19, 2026
Thursday, March 19, 2026

 Summer Camp ಏಪ್ರಿಲ್ 4 ರಿಂದ ಶಿವಮೊಗ್ಗದಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರ

Date:

 Summer Camp ಸಹ್ಯಾದ್ರಿ ಕಲಾ ತಂಡ, ಶಿವಮೊಗ್ಗ, ಕನ್ನಡ ವಿಭಾಗ ಹಾಗೂ ಸಹ್ಯಾದ್ರಿ ಕಲಾ ಕಾಲೇಜು, ಕಡೇಕೊಪ್ಪಲ ಪ್ರತಿಷ್ಠಾನ ಶಿವಮೊಗ್ಗ ವತಿಯಿಂದ ಎಪ್ರಿಲ್ 4 ರಿಂದ24 ರವರಗೆ ‘ಅಜ್ಜಿ ಅಂಗಳ ಅಜ್ಜನ ಜಗಲಿ’ 10ನೇ ವರ್ಷದ ಮಕ್ಕಳ ಬೇಸಿಗೆ ರಂಗಶಿಬಿರವನ್ನು ಸಹ್ಯಾದ್ರಿ ಕಲಾ ಕಾಲೇಜಿನ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ.
ರಂಗ ನಿರ್ದೇಶಕ ಹಾಗೂ ಕಾಲೇಜಿನ ಅಧ್ಯಾಪಕ ಡಾ.ಲವ ಜಿ.ಆರ್. ನಿರ್ದೇಶನದಲ್ಲಿ ಮತ್ತು ನಾಡಿನ ಪ್ರತಿಭಾವಂತರ ಮಾರ್ಗದರ್ಶನದಲ್ಲಿ ಶಿಬಿರ ನಡೆಯಲಿದೆ.


 Summer Camp
ರಂಗ ಚಟುವಟಿಕಗಳ ಮೂಲಕ ಮಕ್ಕಳ ಸಮಯವನ್ನು ಅಮೂಲ್ಯಗೊಳಿಸುವ ಕೆಲಸವನ್ನು ರಂಗ ಶಿಬಿರವು ಮಾಡುತ್ತದೆ. ಮಕ್ಕಳ ವಯಸ್ಸನ್ನು ದೊಡ್ಡವರಾಗುವ ತಯಾರಿಯ ಸಮಯವೆಂದೇ ಗಮನಿಸಲಾಗುತ್ತದೆ ಮತ್ತು ಆ ಬಗೆಯ ಬೆಳವಣಿಗೆಗೆ ಅಗತ್ಯವಾದ ಕಾಳಜಿಯನ್ನು ವಹಿಸಬೇಕಾಗುತ್ತದೆ.ಮಕ್ಕಳ ಮನೋಭೂಮಿಕೆಯ ಜೊತೆಗೆ ಸಮಾಜ ಮತ್ತುಪೋಷಕರು ಕೆಲವು ಕಾಳಜಿಯನ್ನು ಮಾಡಬೇಕಾಗುತ್ತದೆ. ಈ ನೆಲೆಯಲ್ಲಿ ಕಥೆ, ಹಾಡು, ಚಿತ್ರಕಲೆ, ಕ್ರಾಫ್ಟ್, ಯೋಗ, ಏರೋಬಿಕ್ಸ್, ಹಳ್ಳಿಯ ಆಟಗಳ ಮೂಲಕ ಮಾನವೀಯ ಮೌಲ್ಯ, ಬುದ್ಧಿ ಪ್ರಧಾನ, ಬೋಧ ಪ್ರಧಾನ ಕಲಿಕೆ, ಅನ್ವಯಿಕ ರಂಗಶಿಕ್ಷಣದ ಮೂಲಕ ನಾಟಕಗಳನ್ನು ಕಲಿಸಿ, ಸಿದ್ಧಪಡಿಸಿದ ನಾಟಕಗಳನ್ನು ಶಿಬಿರದ ಕೊನೆಯ ದಿನ ರಂಗಾಯಣ ಶಿವಮೊಗ್ಗ ಇಲ್ಲಿ ಪ್ರದರ್ಶಿಸಲಾಗುವುದು.
ಆಸಕ್ತರು ದೂರವಾಣಿ ಸಂಖ್ಯೆ.೯೪೪೯೨೦೧೯೧೯, ೮೮೮೪೮೧೮೫೨೯, ೭೬೧೯೪೨೨೬೭೯ ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...