Friday, September 27, 2024
Friday, September 27, 2024

Valmiki Sangha ಎಲ್.ಜಿ.ಹಾವನೂರು ಪರಿಶಿಷ್ಠರು, ಹಿಂದುಳಿದ ವರ್ಗಗಳ ಪರ ಸದಾ ಹೋರಾಡಿದವರು: ಹೆಚ್.ಟಿ. ಬಳಿಗಾರ್

Date:

Valmiki Sangha ಮಾಜಿ ಸಚಿವ, ದಕ್ಷಿಣ ಆಫ್ರಿಕಾದ ಸಂವಿಧಾನ ಶಿಲ್ಪಿ ಎಲ್.ಜಿ.ಹಾವನೂರು ಅವರು ಕರ್ನಾಟಕದ ಹಿಂದುಳಿದ ವರ್ಗಗಳಿಗೆ ಮೀಸಲಾತಿ ದೊರಕಿಸಿಕೊಟ್ಟ ಮಹಾ ಚೇತನ ಆಗಿರುವುದರಿಂದ ಅವರನ್ನು ಈ ವರ್ಗಗಳು ಎಂದಿಗೂ ಮರೆಯಲು ಸಾಧ್ಯವಿಲ್ಲವೆಂದು ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರಾದ ಹೆಚ್.ಟಿ. ಬಳಿಗಾರ್ ಅವರು ಅಭಿಪ್ರಾಯ ಪಟ್ಟರು.

ಶಿವಮೊಗ್ಗ ನಗರ ಬಾಪೂಜಿ ನಗರದಲ್ಲಿರುವ ವಾಲ್ಮೀಕಿ ನಾಯಕ ಸಮಾಜದಲ್ಲಿ ನಡೆದ ಎಲ್.ಜಿ.ಹಾವನೂರು ಅವರ ೮೯ ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಅವರು ಎಲ್.ಜಿ.ಹಾವನೂರು ಅವರು ವಿಧ್ಯಾರ್ಥಿ ಜೀವನದಲ್ಲೆ ಸಾಕಷ್ಠು ಸಾಮಾಜಿಕ ಶೋಷಣೆ ಅನುಭವಿಸಿದ್ದರು. ಸಮಾಜದಲ್ಲಿಯ ಇಂತಹ ಶೋಷಣೆಗಳ ವಿರುದ್ದ ಹಾವನೂರು ಅವರು ಹೋರಾಡಿದ್ದರು ಎಂದು ಹೆಚ್.ಟಿ. ಬಳಿಗಾರ್ ಹೇಳಿದರು.
ಬಡ ಕುಟುಂಬದಲ್ಲಿ ಜನಿಸಿದ್ದರೂ ಕಠಿಣ ಪರಿಸ್ಥಿತಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ವಕೀಲರಾಗಿದ್ದ ಎಲ್.ಜಿ.ಹಾವನೂರು ಅವರು ಅಂದಿನ ದಿನಗಳಲ್ಲಿ ಕೆಳ ಹಂತದ ಮತ್ತು ಹೈಕೋರ್ಟ್ಗಳಲ್ಲಿ ಪ್ರಕರಣಗಳ ವಿಚಾರಣೆಯ ಸಂದರ್ಭದಲ್ಲಿ ಚಾಖಚಕ್ಯತೆಯಿಂದ ವಾದ ಮಂಡಿಸುತ್ತಿದ್ದನ್ನು ಹೇಗೋ ತಿಳಿದುಕೊಂಡಿದ್ದ ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಮತ್ತು ಹಿಂದುಳಿದ ವರ್ಗಗಳ ಮೇಲಿನ ಶೋಷಣೆ ತಪ್ಪಿಸಲು ಮತ್ತು ಈ ಜನಾಂಗಗಳು ಅಭಿವೃದ್ದಿಯ ದಿಕ್ಕಿನೆಡೆಗೆ ಕೊಂಡೊಯ್ಯುವ ದೃಷ್ಠಿಯಿಂದ ಎಲ್.ಜಿ. ಹಾವನೂರು ಅವರನ್ನು ಆಯೋಗಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು.

ಮುಂದೆ ಎಲ್.ಜಿ. ಹಾವನೂರು ಅವರು ಸರ್ಕಾರಕ್ಕೆ ಕೊಟ್ಟ ವರದಿಯೇ ಎಲ್.ಜಿ.ಹಾವನೂರು ವರದಿ ಎಂದು ಹೆಸರುವಾಸಿಯಾಗಿದೆ ಮತ್ತು ಪರಿಶಿಷ್ಠರಿಗೆ ಸರ್ಕಾರಿ ಹುದ್ದೆಯಲ್ಲಿ ಮುಂಬಡ್ತಿ ದೊರೆಯುವಂತೆ ಮಾಡಿದ್ದು ಇದೆ ಹಾವನೂರು ಅವರೆಂದು ಹೆಚ್.ಟಿ. ಬಳಿಗಾರ್ ಅವರು ಹೇಳಿದರು.

Valmiki Sangha ಸಮಾರಂಭದಲ್ಲಿ ನಿವೃತ್ತ ಪೌರಾಯುಕ್ತರಾದ ಮೂಕಪ್ಪ ಕರಭೀಮಣ್ಣನವರ್ ಸಂಘದ ಕಾರ್ಯದರ್ಶಿ ಎಂ.ಆರ್.ಮೋಹನ್, ಖಚಾಂಚಿ ಆರ್.ಹೆಚ್. ಗಿರೀಶ್, ವಾಲ್ಮೀಕಿ ನಾಯಕ ಸೊಸೈಟಿಯ ಅಧ್ಯಕ್ಷರಾದ ಟಿ.ಮಂಜಪ್ಪ, ಉಪಾಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ, ಖಜಾಂಚಿ ಬಿ.ರಾಮಪ್ಪ, ಸಂಘದ ನಿರ್ದೇಶಕರಾದ ವೈ.ಬಿ.ಚಂದ್ರಕಾಂತ್, ಎಸ್.ರಂಗಪ್ಪ, ನೀಲಪ್ಪ, ಬಿ.ಸಿ.ಚಂದ್ರಶೇಖರಪ್ಪ, ರಾಜಶೇಖರಪ್ಪ, ಪದಾಧಿಕಾರಿಗಳಾದ ಡಾಕ್ಟರ್ ಅಪ್ಪಣ್ಣ ಗಸ್ತಿ, ಪ್ರೋ ಹನುಮಂತಪ್ಪ, ಬಿ.ರಾಮಪ್ಪ, ವಿ.ಟಿ.ಸ್ವಾಮಿ, ಹೂವಿನ ಮಂಡಿ ಸುರೇಶ, ಎಂ.ಅಣ್ಣಪ್ಪ, ವಿದ್ಯಾನಗರ ಮೋಹನ್, ದುರ್ಗೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...

Chamber Of Commerce Shivamogga ರೈಲ್ವೆ ಸೌಕರ್ಯಗಳನ್ನು ಒದಗಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮನವಿ

Chamber Of Commerce Shivamogga ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ...