Saturday, October 5, 2024
Saturday, October 5, 2024

Kerebete Movie ಮಲೆನಾಡಿನ ವಿಶೇಷತೆ ಬಿಂಬಿಸುವ ಸಿನಿಮಾ” ಕೆರೆಬೇಟೆ”

Date:

Kerebete Movie ಕೆರೆಬೇಟೆ ಮಾರ್ಚ್ 15ರಂದು ರಾಜ್ಯಾದ್ಯಂತ ಬಿಡುಗಡೆಗೊಂಡಿದೆ.

ಈಗಾಗಲೇ ಫಸ್ಟ್ ಲುಕ್ ಮತ್ತು ಟೀಸರ್ ಮೂಲಕ ಕುತೂಹಲ ಹೆಚ್ಚಿಸಿದೆ.

ಮಲೆನಾಡ ಬೊಂಬೆ ಪ್ರಾರಂಭವಾಗುವ ಈ ಹಾಡು ಅದ್ಭುತವಾಗಿ ಮೂಡಿ ಬಂದಿದೆ. ಹಾಡನ್ನು ನೋಡಿ ರಿಯಲ್ ಸ್ಟಾರ್ ಉಪೇಂದ್ರ ಕೂಡ ಫಿದಾ ಆಗಿದ್ದಾರೆ.

ಮಲೆನಾಡಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಹಾಡಿನ ಚಿತ್ರೀಕರಣ ಮಾಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಜೋಕಾಲಿ, ರಾಜಹಂಸ ಚಿತ್ರಗಳಲ್ಲಿ ನಾಯಕರಾಗಿ ನಟಿಸಿದ್ದ ಗೌರಿಶಂಕರ್ ಕೆರೆ ಬೇಟೆ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ.

ಇನ್ನು ಕೆರೆ ಬೇಟೆ ಸಿನಿಮಾದ ಬಗ್ಗೆ ಗೌರಿಶಂಕರ್ ಅವರು ತಮ್ಮ ಅಭಿಪ್ರಾಯವನ್ನು ಹೀಗೆ ವ್ಯಕ್ತಪಡಿಸಿದ್ದಾರೆ. ನನಗೆ ಸಿನಿಮಾ ಮಾಡಬೇಕೆಂಬ ಶ್ರದ್ದೆ ಬಹಳ ವರ್ಷಗಳಿಂದ ಇದೆ. ಜೋಕಾಲಿ ಹಾಗೂ ರಾಜಹಂಸ ಸಿನಿಮಾಗಳಲ್ಲಿ ನಾನು ಅಂದುಕೊಂಡ ಮಟ್ಟಿಗೆ ಯಶಸ್ಸು ಕಾಣಲಿಲ್ಲ. ಅದಾದ ನಂತರ ಒಳ್ಳೆಯ ಸಿನಿಮಾ ಮಾಡಬೇಕೆಂಬ ಆಲೋಚನೆ ನನ್ನಲ್ಲಿತ್ತು. ಆಗ ನನಗೆ ನನ್ನ ಸ್ನೇಹಿತರು ನಿರ್ದೇಶಕ ರಾಜಗುರು ಅವರನ್ನು ಪರಿಚಯ ಮಾಡಿಕೊಟ್ಟರು. ಅವರು ಈ ಕಥೆಯ ಒಂದು ಎಳೆ ಹೇಳಿದರು. ನನಗೆ ಈ ಕಥೆ ಕೇಳಿದ ನಂತರ ಈ ಚಿತ್ರವನ್ನು ಮಾಡಬೇಕು ಎಂದೆನಿಸಿತು. ನಂತರದಲ್ಲಿ ನಾನು ಈ ಚಿತ್ರಕ್ಕೆ ಬಂಡವಾಳ ಕೂಡ ಕೂಡಲು ಸಿದ್ದನಾದೆನು ಎಂದು ಹೇಳಿದ್ದಾರೆ.

Kerebete Movie ಕೆರೆ ಬೇಟೆ ಸಿನಿಮಾದಲ್ಲಿ ಮಲೆನಾಡಿನ ವಿಶೇಷತೆಯನ್ನ ಹೆಚ್ಚಾಗಿ ಪ್ರದರ್ಶಿಸಲಾಗಿದೆ. ಬಹಳ ಮುಖ್ಯವಾಗಿ ಮಲೆನಾಡಿನ ಸೊಬಗ ನ್ನು ವರ್ಣಿಸಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N.Chennabasappa ಬನ್ನಿ ಪೂಜೆಗೆ ಶಾಸಕ ಚೆನ್ನಿ ಅವರಿಂದ ಪೂರ್ವೋಚಿತ ಸಿದ್ಧತೆ

S.N.Chennabasappa ನವರಾತ್ರಿ ಉತ್ಸವದ ಕಡೆಯ ದಿನದಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ...

Shree Sigandur Chowdeshwari Temple ಸಿಗಂದೂರು ದೇವಿ ವೈಭವದ ನವರಾತ್ರಿ ಉತ್ಸವ

Shree Sigandur Chowdeshwari Temple ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ...

Madhu Bangarappa ಸಾರ್ವಜನಿಕರ ಅಹವಾಲುಗಳಿಗೆ ಸಕಾಲದಲ್ಲಿ ಅಗತ್ಯ ಸೌಲಭ್ಯ ಒದಗಿಸಿ- ಮಧು ಬಂಗಾರಪ್ಪ

Madhu Bangarappa ಸೌಲಭ್ಯ ಅರಸಿ ಕಚೇರಿಗೆ ಆಗಮಿಸುವ ಗ್ರಾಮೀಣ ಮತ್ತು...

CM Siddharamaiah ಚಾಮುಂಡೇಶ್ವರಿ ಆಶೀರ್ವಾದದಿಂದಲೇ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದೇನೆ- ಸಿದ್ಧರಾಮಯ್ಯ

CM Siddharamaiah ತಾಯಿ ಚಾಮುಂಡೇಶ್ವರಿ ಹಾಗೂ ಇಲ್ಲಿನ ಜನರ ಆಶೀರ್ವಾದದಿಂದಲೇ ಎರಡನೇ...