Wednesday, October 2, 2024
Wednesday, October 2, 2024

Shakhahaari Movie  ಶಾಖಾಹಾರಿ ಜನಮೆಚ್ಚುಗೆ ಗಳಿಸುತ್ತಿದ್ದರೂ ಚಿತ್ರಮಂದಿರದಿಂದ ಸಡನ್ ಕೊಕ್, ಚಿತ್ರತಂಡದ ಬೇಸರ

Date:

Shakhahaari Movie  ಕನ್ನಡದ ಥ್ರಿಲ್ಲರ್ ಚಿತ್ರ ಶಾಖಾಹಾರಿ ಸಿನಿಮಾವು 4 ನೇ ವಾರಕ್ಕೆ ತಲುಪಿದೆ. ಆದರೆ ನಿನ್ನೆ ಸಂಜೆ ಶಾಖಾಹಾರಿ ಸಿನಿಮಾದ ನಿರ್ಮಾಪಕರು, ನಿರ್ದೇಶಕರು ಫೇಸ್ ಬುಕ್ ನಲ್ಲಿ ಲೈವ್ ಬಂದು ಸಿನೆ ಪೊಲೀಸ್ ಮಲ್ಟಿಫ್ಲೆಕ್ಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಲಯಾಲಂ ಚಿತ್ರಕ್ಕೆ ನಮ್ಮ ಸಿನಿಮಾವನ್ನು ಕೊಂದಿದ್ದಾರೆ ಎಂದು ಚಿತ್ರ ತಂಡವು ಆರೋಪಿಸಿದೆ.

ಅಭಿನಯಾಸುರ ರಂಗಾಯಣ ರಘು ಅವರು ಅಭಿನಯಿಸಿದ ಶಾಖಾಹಾರಿ ಚಿತ್ರವು ಫೆಬ್ರವರಿ ತಿಂಗಳಿನಲ್ಲಿ ರಾಜ್ಯಾದ್ಯಂತ ಸಿನಿಮಾ ಬಿಡುಗಡೆಗೊಂಡಿತ್ತು. ಈ ಸಿನಿಮಾವನ್ನು ಪ್ರೇಕ್ಷಕರು ವೀಕ್ಷಿಸಿ ಒಳ್ಳೆಯ ಪ್ರತಿಕ್ರಿಯೆ ಕೂಡ ದೊರೆತಿತ್ತು. ಈಗ ಶಾಖಾಹಾರಿ ಸಿನಿಮಾ 4 ನೇ ವಾರಕ್ಕೆ ತಲುಪಿದ್ದು, ಪ್ರೇಕ್ಷಕರು ಮೆಚ್ಚುಗೆ ಪಡೆದ ಚಿತ್ರವಾಗಿದ್ದರೂ ಕೂಡ ಚಿತ್ರ ಮಂದಿರದಲ್ಲಿ ಶಾಖಾಹಾರಿ ಸಿನಿಮಾ ಪ್ರದರ್ಶನಗೊಳ್ಳುತ್ತಿ ಲ್ಲ ಎಂದು ಚಿತ್ರ ತಂಡವು ಬೇಸರ ವ್ಯಕ್ತಪಡಿಸಿದೆ.

ನಿನ್ನೆ ಸಂಜೆ ಫೇಸ್ ಬುಕ್ ನಲ್ಲಿ ಸಿನಿಮಾ ನಿರ್ಮಾಕರು,ನಿರ್ದೇಶಕರು ಲೈವ್ ಬಂದು ತಮ್ಮ ಅಳಕನ್ನು ಹೇಳಿಕೊಂಡಿದ್ದಾರೆ. ಸಿನಿಮಾದ ನಿರ್ಮಾಪಕರಾದ ರಾಜೇಶ್ ಕೀಳಂಬಿಯವರು ನಮ್ಮ ಸಿನಿಮಾವು ಬೆಂಗಳೂರಿನ ಲುಲು ಮಾಲ್ ನಲ್ಲಿ ನಾಲ್ಕನೇ ವಾರ ಪ್ರದರ್ಶನ ಕಾಣುತ್ತಿತ್ತು. ವೀಕೆಂಡ್ ನಲ್ಲಿ ಶನಿವಾರ 111ಜನ ಸಿನಿಮಾ ವೀಕ್ಷಿಸಿದ್ದಾರೆ. ಭಾನುವಾರ 68 ಜನ ಸಿನಿಮಾ ನೋಡಿದ್ದಾರೆ. ಸೋಮವಾರ 22 ಜನ ಸಿನಿಮಾ ವೀಕ್ಷಿಸಿದ್ದಾರೆ. ಅಚಾನಕ್ಕಾಗಿ ಮಂಗಳವಾರ ನಮ್ಮ ಸಿನಿಮಾದ ಶೋ ಗಳು ರದ್ದಾಗಿದೆ. ನಮ್ಮ ಸಿನಿಮಾಡ ಬದಲು ಮಲಯಾಲಂ ಸಿನಿಮಾದ ಶೋ ಪ್ರದರ್ಶಿಸಲಾಗಿದೆ ಎಂದು ಹೇಳಿದ್ದಾರೆ.

Shakhahaari Movie  ಇತರೆ ಸಿನಿಮಾ ಗಳಿಗೆ ಹೋಲಿಸಿದರೆ ನಮ್ಮ ಸಿನಿಮಾ ವೀಕ್ಷಿಸುವ ಪ್ರೇಕ್ಷಕರು ಹೆಚ್ಚಾಗಿಯೇ ಇದ್ದರೂ ಆದರೂ ಸಹ ನಮ್ಮ ಸಿನಿಮಾ ಪ್ರದರ್ಶನ ರದ್ದು ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...