Friday, March 20, 2026
Friday, March 20, 2026

Bramayugam Movie ಸೃಜನಶೀಲ ಪ್ರತಿಭಾನ್ವಿತ ಚಿತ್ರ” ಭ್ರಮಯುಗಂ”

Date:

ಲೇ: ತುಳಸೀರಾಂ.
ಮೈಸೂರು

Bramayugam Movie ಭ್ರಮಯುಗಂ ಇದೊಂದು ಮಲೆಯಾಳಂ ಭಾಷೆಯ ಚಲನಚಿತ್ರ. ಪ್ರಖ್ಯಾತ ಚಿತ್ರನಟ ಮುಮ್ಮುಟ್ಟಿ ಅಭಿನಯದ ಚಿತ್ರ.
ಹಸಿರು ದಟ್ಟ ಕಾಡಿನ ನಡುವೆ ಒಬ್ಬ ದಿಕ್ಕು ತಪ್ಪಿದ ಆಗಂತುಕ ನಿಂದ ಪ್ರಯಾಣ ಆರಂಭವಾಗುತ್ತದೆ. ದಿಕ್ಕುಗೆಟ್ಟು ಅರಣ್ಯದಲ್ಲಿ ದಾರಿ ಕಾಣದೆ ಯಾವುದೊ ಪಾಳುಬಿದ್ದ ಗುಡಿಯ ಕಡೆ ಬರುತ್ತಾನೆ. ಅಲ್ಲಿದ್ದ ಒಬ್ಬ ವ್ಯಕ್ತಿ ತನ್ನ ರೂಪು ಕಾಣಿಸದೆ ಧನಿ ಮಾತ್ರದಲ್ಲಿ ” ನೀನು ಯಾರು ? ” ಎಂಬ ಸಹಜ ಪ್ರಶ್ನೆ ಕೇಳುತ್ತಾನೆ. ಆಗಂತುಕ ತಬ್ಬಿಬ್ಬಾಗುತ್ತಾನೆ. ಉತ್ತರ ಹೊಳೆಯುವುದಿಲ್ಲ. ಉತ್ತರ ಹುಡುಕುತ್ತಾ ಆ ಅರಣ್ಯದಲ್ಲಿಯೆ ಗತಿ ಕಾಣದೆ ಉಳಿಯುತ್ತಾನೆ. ಆದರೆ ಅವನಿಗೆ ಪ್ರತಿ ನಿತ್ಯ ಗುಹೆ ಹೊಕ್ಕಂತೆ, ಸೆರೆ ಸಿಕ್ಕಂತೆ, ಗುಡಿ ಸೇರಿದಂತೆ ಭಾಸವಾಗುತ್ತದೆ.


ಮತ್ತೊಂದು ಹಂತದಲ್ಲಿ ಅದೇ ಗುಹೆ ಯಲ್ಲಿದ್ದ ಮತ್ತೊಬ್ಬ ಹಿರಿಯ ಆ ಆಗಂತುಕನ ಜೊತೆ ಮಾತನಾಡುತ್ತಾ ಹೋಗುವಾಗ ” ದೇವರು ನಮಗೆ ಕೊಟ್ಟಿರುವ ವರ ಯಾವುದು? ಎಂದು ಕೇಳುತ್ತಾನೆ. ಆಗಂತುಕ ಯೋಚಿಸ ತೊಡಗುತ್ತಾನೆ- ನಮ್ಮ ಸುತ್ತಲಿರುವ ಪ್ರಕೃತಿಯೇ? – ನಾವು ನಿರ್ಮಿಸಿಕೊಂಡ ಅರಮನೆಯೇ? ಗಳಿಸಿದ ಐಶ್ವರ್ಯವೇ? ಇವೆನೂ ಅಲ್ಲ !
ಆ ಹಿರಿಯ ಆಗಂತುಕನಿಗೆ ತಿಳಿ ಸುತ್ತಾನೆ-” ಅದು ಸಮಯ ” ಎಂದು. ಕಾಲ ಮುಂದೆ ಚಲಿಸಿದರೆ ಬರುವುದೇ ಇಲ್ಲವಲ್ಲ.!.
ಅರಣ್ಯವಾಸಿ ಹಿರಿಯ ಅರೆಬೆಂದ ಮಾಂಸವನ್ನು ಅಗಿದಗಿದು ನುಂಗಿದರೆ, ಆಗಂತುಕ ಮಡಕೆಯಲ್ಲಿದ್ದ ಗಂಜಿಯನ್ನು ಶತಮಾನಗಳಿಂದ ಹಸಿದವನಂತೆ ಗಪ ಗಪ ಎಂದು ಬಾಯಿಗಿಟ್ಟು ಸುರಿದು ಕೊಂಡು ಹಸಿವು ನೀಗಿಸಿಕೊಳ್ಳುತ್ತಾನೆ.
ಹಿರಿಯ ಹೇಳುತ್ತಾನೆ – ನೋಡು , ಮನುಷ್ಯನಿಗೆ ದೇವರು ಕೊಟ್ಟಿರುವುದು ಎರಡೇ, ಅದು ” ಅನ್ನ ಮತ್ತು ಸಮಯ “.
ಒಂಟಿತನ , ಏಕಾಂತ, ಸಮಸ್ಯೆಗಳಲ್ಲದವಕ್ಕೆ ಅನಗತ್ಯವಾಗಿ ಸಿಕ್ಕಿಹಾಕಿಕೊಳ್ಳುವುದು, ತಪ್ಪಿಸಿ ಕೊಳ್ಳುವುದು , ಸ್ವಾಭಾವಿಕ ಎಂದು ಚಿತ್ರ ನಿರೂಪಿಸುತ್ತ ಹೋಗುತ್ತದೆ.
ಅಂತ್ಯದಲ್ಲಿ – ಡಚ್ಚರ ಸೈನ್ಯ ಹೊಳೆ ದಾಟಿ ಬರುವ, ಹೊಳೆಯಲ್ಲಿ ತೇಲಿ ಹೋಗುವ ಹೆಣದ ದೃಶ್ಯ- ನಮ್ಮ ಅಂತರಂಗ ಬಹಿರಂಗದ Bramayugam Movie ಬದುಕಿನ ಚಿತ್ರಣವೇನೊ ಅನಿಸಿಬಿಡುತ್ತದೆ.
ಸೃಜನಶೀಲ ಪ್ರತಿಭಾನ್ವಿತ ಚಿತ್ರ ” ಭ್ರಮಯುಗಂ” .

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...