Wednesday, October 2, 2024
Wednesday, October 2, 2024

SP Mithun Kumar ಅಡಿಕೆ& ಇತರೆ ಕೃಷಿ ಉತ್ಪನ್ನ ಸಾಗಣೆಗೆ ಮೊದಲು ವಾಹನದ ಪೂರ್ವಾಪರ ಮಾಹಿತಿಯನ್ನ ವರ್ತಕರು ಅರಿತಿರಬೇಕು- ಮಿಥುನ್ ಕುಮಾರ್

Date:

SP Mithun Kumar ಅಡಿಕೆ ಮತ್ತು ಇತರೆ ಕೃಷಿ ಉತ್ಪನ್ನಗಳನ್ನು ಸಾಗಾಟ ಮಾಡುವಾಗ ಮುಂಚಿತವಾಗಿ ಸಾರಿಗೆ ಏಜೆನ್ಸಿಗಳು, ವಾಹನದ ಮಾಲೀಕರು, ವಾಹನದ ಚಾಲಕರು ಮತ್ತು ಸಹಾಯಕರ ಪೂರ್ವಾಪರಗಳನ್ನು ಪರಿಶೀಲಿಸಿ, ಅವರ ಮಾಹಿತಿಯನ್ನು ಪಡೆದು ಖಚಿತಪಡಿಸಿಕೊಂಡ ನಂತರವೇ ಸಾಗಾಟ ಮಾಡುವುದು ಸೂಕ್ತ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಮಿಥುನ್‌ಕುಮಾರ್ ಹೇಳಿದರು.
ಕರ್ನಾಟಕ ಹಸಿ ಶುಂಠಿ ಬೆಳೆಗಾರರು ಮತ್ತು ವರ್ತಕರ ಸಂಘದ ವತಿಯಿಂದ ಶಿರಾಳಕೊಪ್ಪದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಕುಂಸಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಶುಂಠಿ ಕಳ್ಳತನ ಪ್ರಕರಣದ ಆರೋಪಿ ಮತ್ತು ಮಾಲನ್ನು ಪತ್ತೆ ಮಾಡಿದ ಪೊಲೀಸರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಡಿಕೆ ಮತ್ತು ಕೃಷಿ ಉತ್ಪನ್ನಗಳ ಸಾಗಾಟ ಮಾಡುವ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಮಾಡಿಕೊಳ್ಳುವುದು ಅಥವಾ ಇದನÀÄ್ನ ಅಳವಡಿಸಿದ ವಾಹನಗಳಲ್ಲಿಯೇ ಸಾಗಾಟ ಮಾಡುವುದು ಉತ್ತಮ. ಎಲ್ಲಾ ರೈತರು ವರ್ತಕರು ಕಡ್ಡಾಯವಾಗಿ ಬೆಳೆ ಮತ್ತು ದಾಸ್ತಾನಿಗೆ ವಿಮೆ ಮಾಡಿಸಿಕೊಂಡಲ್ಲಿ ಇದರಿಂದ ಬೆಳೆಹಾನಿ ಮತ್ತು ಕಳ್ಳತನದಂತಹ ಸಂದರ್ಭದಲ್ಲಿ ಕಾನೂನಿನ ಚೌಕಟ್ಟಿನ ಒಳಗೆ ಶೀಘ್ರವಾಗಿ SP Mithun Kumar ಆರ್ಥಿಕವಾಗಿ ಪರಿಹಾರ ಸಿಗಲಿದೆ. ವರ್ತಕರು ಹೊರ ರಾಜ್ಯಗಳಿಗೆ ಮತ್ತು ದೂರದ ಪ್ರದೇಶಕ್ಕೆ ತಮ್ಮ ದಾಸ್ತಾನು ಸಾಗಾಟ ಮಾಡುವಾಗ ಕಡ್ಡಾಯವಾಗಿ ವಿಮೆ ಮಾಡಿಸಿಕೊಳ್ಳಿ ಎಂದ ಸಲಹೆ ನೀಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...