Caste Census Report ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ್ ಹೆಗ್ಡೆ ಮತ್ತು ಸದಸ್ಯರು ನಡೆಸಿದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ-೨೦೧೫ ರ ವರದಿ ಯನ್ನು ಸರ್ಕಾರಕ್ಕೆ ಸಲ್ಲಿಸಿರುವುದಕ್ಕೆ ಶಿವಮೊಗ್ಗ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ವಿ. ರಾಜು ಅವರು ಮತ್ತು ಪದಾಧಿಕಾರಿಗಳು ಸ್ವಾಗತಿಸಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ವರದಿ ಸ್ವೀಕರಿಸಿರುವುದಕ್ಕೆ ಒಕ್ಕೂಟ ಕೃತಜ್ಞತೆ ಸಲ್ಲಿಸಿದೆ. ಸರ್ಕಾರ ಈ ವರದಿಯನ್ನು ಕುಡಲೆ ಪರಿಶೀಲಿಸಿ ಅಂಗೀಕರಿಸಿ ವರದಿಯಲ್ಲಿ ಇರುವ ಅಂಕಿ ಅಂಶಗಳ ಸಮೀಕ್ಷೆಯ ಅಧ್ಯಾಯನ ನಡೆಸಿ, ಸಾರ್ವಜನಿಕವಾಗಿ ಬಹಿರಂಗ ಪಡಿಸಿ ಚರ್ಚೆಗೆ ಅವಕಾಶ ಕಲ್ಪಿಸಿ ಹಲವು ವರ್ಷಗಳಿಂದ ಒಕ್ಕುಟವು ಈ ವಿಷಯವಾಗಿ ಸರ್ಕಾರಕ್ಕೆ ಹಾಗೂ ಆಯೋಗಕ್ಕೆ ವರದಿ ಸಲ್ಲಿಸಲು ಸರ್ಕಾರ ಸ್ವೀಕರಿಸಲು ಅನೇಕ ಹೋರಾಟಗಳನ್ನು ನಡೆಸಿ ಸರ್ಕಾರಕ್ಕೂ ಈವರೆಗೆ ಮನವಿಗಳನ್ನು ಸಲ್ಲಿಸುತ್ತ ಬಂದಿದ್ದುö, ಇದೀಗ ಸರ್ಕಾರ ಮಾನ್ಯತೆ ನೀಡಿರುವುದು ಸಂತಸದ ವಿಷಯ ವಾಗಿದೆ ಎಂದು ಒಕ್ಕೂಟ ತಿಳಿಸಿದೆ.
ಜನಗಣತಿ ಸಮೀಕ್ಷೆಯನ್ನು ಅದರ ವರದಿಯನ್ನು ನೋಡದೇ ಕೆಲವು ಸಮುದಾಯಗಳು ವಿರೋಧ ಮಾಡುವುದು ಸೂಕ್ತವಲ್ಲ. ಈ ವರದಿ ಸರ್ಕಾರ ಬಿಡುಗಡೆ ಮಾಡಿದ ಬಳಿಕ ಬಹಿರಂಗ ಚರ್ಚೆ ಮಾಡುವುದು ಸೂಕ್ತ. ಇದರಲ್ಲಿ ಯಾವುದೇ ಸಣ್ಣಪುಟ್ಟ ತಪ್ಪುಗಳಿದ್ದಲ್ಲಿ ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಅವಕಾಶವಿದೆ.
Caste Census Report ಇವೆಲ್ಲವನ್ನೂ ಪರಿಶೀಲಿಸಿ ಕೂಡಲೆ ಸರ್ಕಾರ ಸಾಮಾಜಿಕ, ಶೈಕ್ಷಣಿಕ ಜನಗಣತಿ ವರದಿಯನ್ನು ೨೦೧೫-೨೪ ಬಹಿರಂಗಪಡಿಸಬೇಕೆAದು ಜಿಲ್ಲಾ ಶಿವಮೊಗ್ಗ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷರಾದ ವಿ. ರಾಜು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
Caste Census Report ಜಾತಿ ಜನಗಣತಿ ವರದಿಯನ್ನ ಬಹಿರಂಗಗೊಳಿಸಿ- ವಿ.ರಾಜು
Date: