Sunday, December 7, 2025
Sunday, December 7, 2025

DC Shivamogga ಶಿವಮೊಗ್ಗ ವಿದ್ಯಾನಗರ ಕೆಳಸೇತುವೆ ನಿರ್ಮಾಣಕ್ಕೆ ಒತ್ತಾಯ

Date:

DC Shivamogga ವಿದ್ಯಾನಗರದ 14 ನೇ ವಾರ್ಡಿನಲ್ಲಿ ರೈಲ್ವೆ ಕೆಳ ಸೇತುವೆ ನಿರ್ಮಾಣ ಮಾಡಬೇಕು ಎಂದು ಮಹಾನಗರ ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ ಅವರ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

14ನೇ ವಾರ್ಡಿನ ವಿದ್ಯಾನಗರ ಹಾಗೂ ಹೊಳೆಹೊನ್ನೂರು ರಸ್ತೆ ಈ ಭಾಗದಲ್ಲಿ ಮೇಲೆತುವೆ ನಿರ್ಮಾಣವಾಗಿದೆ. ಆದರೆ, ಈ ಕಾಮಗಾರಿ ಟೆಂಡರ್‌ನಲ್ಲಿಯೇ ಶಾಂತಮ್ಮ ಬಡಾವಣೆ, ಹೊಳೆಹೊನ್ನೂರು ರಸ್ತೆ, ಗರುಡ ಲೇಔಟ್ ಈ ಭಾಗದ ಸ್ಥಳೀಯರಿಗೆ ದಿನನಿತ್ಯ ಓಡಾಟಕ್ಕೆ ಅನುಕೂಲವಾಗುವಂತೆ ಕೆಳ ಸೇತುವೆಯನ್ನು ಗುರುಪುರ, ನಿರ್ಮಾಣ ಮಾಡಬೇಕು ಎಂದು ಮನವಿದಾರರು ಆಗ್ರಹಿಸಿದರು.
ಕೆಳಸೇತುವೆಗೆ ಸಂಬಂಧಿಸಿದಂತೆ ಕಾಮಗಾರಿಗೆ ಅನುಮೋದನೆ ನೀಡಲಾಗಿತ್ತು. ಆದರೆ ರೈಲ್ವೆ ಇಲಾಖೆ ಈ ಕಾಮಗಾರಿಯನ್ನು ಕೈಬಿಟ್ಟಿದೆ. ಇದರಿಂದ ಈ ಭಾಗದ ಜನರಿಗೆ ದಿನನಿತ್ಯ ಸಂಚಾರಕ್ಕೆ ತುಂಬ ತೊಂದರೆಯಾಗುತ್ತದೆ. ಆದ್ದರಿಂದ ತಕ್ಷಣವೇ ಕೆಳಸೇತುವೆಯನ್ನು ನಿರ್ಮಾಣ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಸಂದರ್ಭದಲ್ಲಿ ಪ್ರಮುಖರಾದ ರಂಗೇಗೌಡ, ಸತೀಶ್, ವಾಹಬ್ ಸಾಬ್, ವೆಂಕಟೇಶ್, ಮೋಹನ್. ಅಲ್ತಾಬ್, ಸುರೇಶ್, ಸಿದ್ದಣ್ಣ, DC Shivamogga ಶಾಂತಮ್ಮ, ಸಲೀಮ್, ರಾಜಶೇಖರ್, ಸೈಯ್ಯದ್ ಅಹಮ್ಮದ್, ಬೇಬಿ, ರಾಜು, ವೆಂಕಟೇಶ, ಲಕ್ಷ್ಮೀಕಾಂತ್ ಸೇರಿದಂತೆ ಹಲವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ, ಸೀಎಂ ಸಿದ್ಧರಾಮಯ್ಯ ಖಂಡನೆ

CM Siddharamaiah ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ...

ಶಾಲಾ ಬಸ್ ಅತಿವೇಗ ಚಾಲನೆ, ಬೈಕಿಗೆ ಢಿಕ್ಕಿ‌ ಸವಾರನ ಸ್ಥಿತಿ ಗಂಭೀರ

ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ...

B.Y.Raghavendra ಆರ್.ಎಸ್.ಎಸ್. ಗೃಹ ಸಂಪರ್ಕ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಭಾಗಿ.

B.Y.Raghavendra ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು...