Tuesday, October 1, 2024
Tuesday, October 1, 2024

Astronomy ಗ್ರಹಗಳು,ಭೂಮಿ,ಸೂರ್ಯಚಂದ್ರರ ಬಗ್ಗೆ ವಾಸ್ತವ& ವೈಜ್ಞಾನಿಕ ಮಾಹಿತಿ ತಿಳುವಳಿಕೆ ಅಗತ್ಯ- ಹರೋನಹಳ್ಳಿ ಸ್ವಾಮಿ

Date:

Astronomy ಪ್ರಾಚೀನ ಭಾರತದಲ್ಲಿ ಖಗೋಳಶಾಸ್ತ್ರವು ಆರ್ಯಭಟ, ಬ್ರಹ್ಮಗುಪ್ತ, ಭಾಸ್ಕರಚಾರ್ಯರಂತಹ ಶ್ರೇಷ್ಠ ಜ್ಞಾನಿಗಳ ಕೊಡುಗೆಯಿಂದ ಅಗ್ರಮಾನ್ಯತೆ ಪಡೆದಿತ್ತು ಎಂದು ಖಗೋಳ ವೀಕ್ಷಕ ಹರೋನಹಳ್ಳಿ ಸ್ವಾಮಿ ಅಭಿಪ್ರಾಯಪಟ್ಟರು.

ಸ್ವಾಮಿ ವಿವೇಕನಾಂದ ಬಡಾವಣೆಯ ಶ್ರೀನಾಗಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಟೆಲಿಸ್ಕೋಪ್ ಮೂಲಕ ಚಂದ್ರ, ನಕ್ಷತ ಪುಂಜಗಳ ಆಕಾಶ ವೀಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ದೇಶದ ಹೆಮ್ಮಯ ಜ್ಞಾನವನ್ನು ಆಕಾಶ ವೀಕ್ಷಣೆ ಮೂಲಕ, ವಿಶ್ವದ ಜ್ಞಾನ ತಿಳಿಯುವ ಮೂಲಕ ಅರಿತು ನಮ್ಮ ಚಿಂತನೆಗಳನ್ನು ವೃದ್ಧಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಗ್ರಹಗಳು, ಭೂಮಿ, ಸೂರ್ಯ, ಚಂದ್ರರ ಕುರಿತು ವಾಸ್ತವ ಮತ್ತು ವೈಜ್ಞಾನಿಕ ಮಾಹಿತಿಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕ. ಮೂಡನಂಬಿಕೆಗಳಿಂದ ಹೊರಬರಬೇಕು ಎಂದು ಸಲಹೆ ನೀಡಿದರು.

ಧಾರ್ಮಿಕ ಕಾರ್ಯಕ್ರಮದಲ್ಲಿ ವಿಜ್ಞಾನದ ಕಾರ್ಯಕ್ರಮ ಜತೆಯಾಗಿಸಿರುವುದು ಉತ್ತಮ ಸಂಗತಿ ಆಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಕಾಶ ವೀಕ್ಷಣೆ ಕಾರ್ಯಕ್ರಮಕ್ಕೆ ಆಗಮಿಸಿರುವುದು ಸಂತಸದ ಸಂಗತಿ. ಧರ್ಮ ಮತ್ತು ವಿಜ್ಞಾನ ಜತೆಗೂಡಿ ವೈಜ್ಞಾನಿಕ ಚಿಂತನೆಯೊಂದಿಗೆ ಜನರು ಜೀವನ ನಡೆಸಿದರೆ ಅನೇಕ ಸಮಸ್ಯೆಗಳಿಂದ ಹೊರಬರಬಹುದು ಎಂದರು.

Astronomy ಆಕಾಶ ವೀಕ್ಷಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಗೌರವಾಧ್ಯಕ್ಷ ಎಸ್.ಜ್ಞಾನೇಶ್ವರ್, ಅಧ್ಯಕ್ಷ ನಾಗರಾಜ್, ಶಾಂತಾ ಶೆಟ್ಟಿ, ಶಶಿಧರ್ ಮತ್ತಿತರರು ಹಾಜರಿದ್ದರು. ಟೆಲಿಸ್ಕೋಪ್ ಮೂಲಕ ಚಂದ್ರ, ಗುರು, ನಕ್ಷತ್ರಗಳನ್ನು ಹರೋನಹಳ್ಳಿ ಸ್ವಾಮಿ ಅವರು ಸಾರ್ವಜನಿಕರಿಗೆ ತೋರಿಸಿದರು. ವೈಜ್ಞಾನಿಕ ವಿವರಣೆಗಳನ್ನು ಸಾರ್ವಜನಿಕರಿಗೆ ನೀಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shakahari Film ಶಾಖಾಹಾರಿ ಚಿತ್ರಕ್ಕೆ ಕಾನೂನು ಜಯ

Shakahari Film ಶಿವಮೊಗ್ಗದ ಕೀಳಂಬಿ ಮೀಡಿಯಾ ಲ್ಯಾಬ್ ನಿರ್ಮಿಸಿದ್ದ ಶಾಖಾಹಾರಿ...

Mahatma Gandhi ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ, ಫಲಿತಾಂಶ ಪ್ರಕಟ

Mahatma Gandhi ರಾಷ್ಟ್ರಪಿತ ,ಮಹಾತ್ಮ ಗಾಂಧೀಜಿಯವರ 155 ನೇ ಜಯಂತಿ ಅಂಗವಾಗಿ...

Yaduveer Wadiyar ಶಿವಮೊಗ್ಗ ಹಬ್ಬ ಯಶಸ್ವಿಗೊಳಿಸಿ- ಸಂಸದ ಯದುವೀರ್

Yaduveer Wadiyar ಪ್ರವಾಸೋದ್ಯಮ ಹಾಗೂ ಜಿಲ್ಲೆಯ ಉದ್ಯಮಿಗಳ ಪ್ರೋತ್ಸಾಹಿಸುವ ದೃಷ್ಟಿಯಿಂದ...

Shivamogga Cycle Club ಸೈಕಲ್ ಅಭ್ಯಾಸವು ಜನಸಾಮಾನ್ಯರ ವ್ಯಾಯಾಮಶಾಲೆ- ಎನ್.ಗೋಪಿನಾಥ್

Shivamogga Cycle Club ಸೈಕಲ್ ಅಭ್ಯಾಸ ಮಾಡುವುದರಿಂದ ಹೃದಯ ಸಂಬಂಧಿ...