Tuesday, October 1, 2024
Tuesday, October 1, 2024

Klive Article ಹರಿಯೇ ಪರಮನೆಂದ ಶ್ರೀ ಮಧ್ವಾಚಾರ್ಯರು

Date:

Klive Article ಲೇ: ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ.

ಶ್ರೀಮಧ್ವನವಮಿಯ ಸಂದರ್ಭದಲ್ಲಿ
ಶ್ರೀಮಧ್ವಾಚಾರ್ಯರ ಪಾದ ಪದುಮಗಳಲ್ಲಿ
ಗೀತಾನಮನ ಸಮರ್ಪಣೆ


ಶ್ರೀಮಧ್ವರಾಯರು


ಮೊದಲವತಾರದಿ ಮುಖ್ಯ
ಪ್ರಾಣದೇವರು/
ಎರಡನೇ ಅವತಾರದಿ
ಭೀಮಸೇನ
ದೇವರು/
ಮೂರನೆಯ ಅವತಾರದಿ
ಮಧ್ವರಾಯರಾಗಿ
ಪಾಜಕದಲಿ ಧರೆಗೆಬಂದರು/
ಮಧ್ಯಗೇಹ ಭಟ್ಟರು
ವೇದಾವತಿ
ಬಾಯಿಯವರು/
ಹನ್ನೆರಡುವರ್ಷ ಉಡುಪಿಯ
ಅನಂತೇಶ್ವರನ
ಸೇವೆಗೈದರು./
ವಿಳಂಬಿ ಅಶ್ವಿನ
ವಿಜಯದಶಮಿ
ಪಾಜಕಾದಲ್ಲಿ ಅರಳಿತು
ದ್ವೈತ ಕಮಲ./
ವಾಸುದೇವ ಎಂದು
ಕರೆದರು
ತಂದೆತಾಯಿಯರು./
ಅಪ್ರತಿಮ ಬುದ್ಧಿಶಾಲಿಯಾದ
ವಾಸುದೇವ ಹಿಡಿದ
ಕಾವಿವಸ್ತ್ರ/
ಹೌಹಾರಿದರು ತಂದೆತಾಯಿಯರು/
ತಂದೆತಾಯಿಯರಿಗೆ
ವಂದಿಸಿ
ಅನಂತೇಶ್ವರನ ಸನ್ನಿಧಿಗೆ
ಹೊರಟ ವಾಸುದೇವ
ಹನ್ನೊಂದನೆ ವಯಸ್ಸಿಗೆ/
ವೈರಾಗ್ಯ ಮೂರ್ತಿಯಾದ ವಾಸುದೇವ
ಅಚ್ಯುತ ಪ್ರೇಕ್ಷಕರ ಕಣ್ಣಿಗೆ ಬಿದ್ದ/
ಬಿಡದೇ ವಾಸುದೇವನನ್ನು
ಹಿಡಿದೇ ಬಿಟ್ಟರು/
ಕಾವಿ ವಸ್ತ್ರ ಉಡಿಸಿಯೇ
ಬಿಟ್ಟರು/
ಸನ್ಯಾಸದೀಕ್ಷೆ ಬೋಧಿಸಿ
ಪೂರ್ಣಪ್ರಜ್ಞರೆಂದು
ಕರೆದರು./
Klive Article ವೇದಾಂತ ವಾದದಲ್ಲಿ ಗೆದ್ದ
ಪೂರ್ಣಪ್ರಜ್ಞರಿಗೆ
ವೇದಾಂತ
ಅಭಿಷೇಕಮಾಡಿ ಆನಂದ
ತೀರ್ಥರೆಂದರು ./
ಮಧ್ವ ಎಂಬ ಹೆಸರಿನಿಂದ
ಗ್ರಂಥ ಬರೆದು
ಮಧ್ವಾಚಾರ್ಯರಾದರು./
ಗೀತಾ ಭಾಷ್ಯ ಬರೆದರು
ಬದರಿಯಲ್ಲಿ ವೇದವ್ಯಾಸ
ಗುರುಗಳ ಪ್ರಶಂಸೆ
ಪಡೆದರು/
ಬದರಿಯಿಂದ ಬರುವಾಗ
ಶೋಭನಭಟ್ಟರು,ಶಾಮಾ
ಶಾಸ್ತ್ರಿಗಳು
ಸಿಕ್ಕರು./
ಇವರ ಜ್ಞಾನಪ್ರಭೆಗೆ
ತಲೆಬಾಗಿ ನಮಿಸಿ
ಶಿಷ್ಯರಾದರು.,/
ತ್ರಿವಿಕ್ರಮ
ಪಂಡಿತಾಚಾರ್ಯರು
ಹರಿವಾಯುಸ್ತುತಿ ಬರೆದು
ಆಚಾರ್ಯರಿಗೆ ನಮಿಸಿದರು/
ಭರತಖಂಡವನ್ನು ಎರಡು
ಬಾರಿ ಸುತ್ತಿದರು/
ಬಹಳ ಶಿಷ್ಯ ಸಂಪತ್ತು
ಗಳಿಸಿದರು./
ಮಹಾಭಾರತ ತಾತ್ಪರ್ಯ
ನಿರ್ಣಯ
ಸರ್ವಮೂಲಗ್ರಂಥ
ಬರೆದರು./
ದ್ವಾರಕೆಯಿಂದ ಬಂದ ಕೃಷ್ಣನನ್ನು
ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು./
ಅಷ್ಟಮಠದ ಯತಿಗಳಿಂದ ಕೃಷ್ಣನ ಪೂಜೆ
ನೆರವೇರುವಂತೆ ಮಾಡಿದರು/
ಕಳಸದ ಭದ್ರಾನದಿಯಲ್ಲಿ
ದೊಡ್ಡ ಬಂಡೆಯನ್ನಿಟ್ಟು
ನೀರಿನ ಹರಿವನ್ನುಸರಿಮಾಡಿದರು./
ಅಲ್ಲಿಯ ಜನರು
ಭಕ್ತಿಯಿಂದ ಮಧ್ವಾಚಾರ್ಯರಿಗೆ
ಜೈ ಎಂದರು./
ಹೀಗೆ ಬಹಳಷ್ಟು ಮಹಿಮೆಗಳು
ನಡೆದಿವೆ./
79ವರ್ಷಗಳ ಸಾರ್ಥಕ
ಜೀವನ ನಡೆಸಿದರು/
ಪಿಂಗಳ ಸಂವತ್ಸರ ಮಾಘ
ಶುದ್ಧ ನವಮಿಯಂದು
ಅದೃಶ್ಯರಾದರು ಉಡುಪಿಯ
ಅನಂತೇಶ್ವರನ
ಸನ್ನಿಧಿಯಿಂದ./
ಇದನ್ನು ಮಧ್ವನವಮಿ
ದಿನವನ್ನಾಗಿ ಆಚರಿಸುವರು/
ಭಕ್ತಿಯಿಂದ ನಮನ
ಸಲ್ಲಿಸಿದವರನು ಅನುಗ್ರಹಿಸುವರು
ಶ್ರೀಮಧ್ವಾಚಾರ್ಯರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...

Gandhi Jayanti ಸಾಗರ ತಾಲ್ಲೂಕಿನಲ್ಲಿ ಯಶಸ್ವಿಯಾಗಿ ನಡೆದ ಸ್ವಚ್ಛತಾ ಹಿ ಸೇವಾ ಚಟುವಟಿಕೆ

Gandhi Jayanti ಭಾರತ ಸರ್ಕಾರದ, ಯುವ ವ್ಯವಹಾರ ಮತ್ತು ಕ್ರೀಡಾ...

Karnataka State Farmers Association ಆನೆದಾಳಿಗೆ ಮೃತಪಟ್ಟ ಪುರದಾಳ್ ನಿವಾಸಿಗೆ ₹25 ಲಕ್ಷ ಪರಿಹಾರ ನೀಡಲು ಆಗ್ರಹ

Karnataka State Farmers Association ಶಿವಮೊಗ್ಗ ನಗರದ ಅಂಚಿನಲ್ಲಿರುವ ಪುರದಾಳ್...