Sagara News ಸಾಗರ ತಾಲ್ಲೂಕಿನ ಆಚಾಪುರ ಗ್ರಾಮ ಪಂಚಾಯಿತಿಗೆ ಇಂದು ಸಂವಿಧಾನ ಜಾಗೃತಿ ಜಾಥಾವನ್ನು ಬರಮಾಡಿಕೊಳ್ಳಲಾಯಿತು.
Sagara News ಆಚಾಪುರ ಸರ್ಕಲ್ನಿಂದ ಮುರುಘಾಮಠದ ಸರ್ಕಲ್ವರೆಗೆ ಜಾಥಾವನ್ನು ನಡೆಸಿ, ಸಂವಿಧಾನ ಕುರಿತು ಅರಿವು ಮೂಡಿಸಲಾಯಿತು. ಪಂಚಾಯಿತಿ ಅಧ್ಯಕ್ಷರಾದ ಕಲೀಂ ಉಲ್ಲಾ ಖಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಶಿವಶಂಕರ್ ಉಪನ್ಯಾಸ ನೀಡಿದರು. ಗ್ರಾ.ಪಂ ಸದಸ್ಯರು, ಪಿಡಿಓ ರಂಗಸ್ವಾಮಿ, ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.