Gopal Krishna Belur ಯಾವುದೇ ನಿಗಮ- ಮಂಡಳಿ ನಿಭಾಯಿಸುವ ಶಕ್ತಿ ಬೇಳೂರು ಗೋಪಾಲಕೃಷ್ಣ ಗೆ ಇದೆ.
ನಿಗಮದ ಅಭಿವೃದ್ಧಿ ಬಗ್ಗೆ ಪ್ರಸ್ತಾವನೆ ಕೊಡಲು ಸಿಎಂ ತಿಳಿಸಿದ್ದಾರೆ.ನಿಗಮದ ವತಿಯಿಂದ ಎಲ್ಲೆಲ್ಲಿ ಅಗತ್ಯ ಇದೆಯೋ ಅಲ್ಲಿ ಕಾರ್ಖಾನೆ ಸ್ಥಾಪಿಸಲು ಅವಕಾಶ ಇದೆ.
ನಿಷ್ಕ್ರಿಯ ಗೊಂಡ ಕಾರ್ಖಾನೆಯನ್ನ ಬಲ ಪಡಿಸುತ್ತೇವೆ ಎಂದು ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಅವರು ಹೇಳಿದ್ದಾರೆ.
ಕೈಗಾರಿಕಾ ಉದ್ಯಮದ ಮಳಿಗೆ ಸ್ಥಾಪಿಸಲು ಅವಕಾಶ ಇದೆ.
ಇದರಿಂದ ಉದ್ಯೋಗ ಸೃಷ್ಟಿ ದಂತಾಗುತ್ತದೆ.ಅಭಿವೃದ್ಧಿ ಕೆಲಸದಲ್ಲಿ ನಾನು ತೊಡಗಿಕೊಳ್ಳುತ್ತೇನೆ.
ನಿಗಮ ಮಂಡಳಿಯನ್ನ ಗಂಜಿ ಕೇಂದ್ರ ಎಂದು ನಾನು ಹೇಳಲಾರೆ ಎಂದು ತಿಳಿಸಿದ್ದಾರೆ.
Gopal Krishna Belur ನನ್ನನ್ನ ಗುರುತಿಸಿ ಪಕ್ಷ ಈ ಜವಾಬ್ದಾರಿ ನೀಡಿದೆ.
ನನಗೆ ಟಿಕೆಟ್ ನೀಡಿದಕ್ಕೆ ನಾನು ಗೆದ್ದಿದ್ದೇನೆ.ನಾನು ನಿಗಮ ಮಂಡಳಿ ಕೇಳಿಲ್ಲ.
ನಿಗಮ ಮಂಡಳಿ ಕೊಟ್ಟಿದ್ದಾರೆ,ಅದನ್ನ ಸ್ವೀಕರಿಸಿದ್ದೇನೆ.
ನನಗೆ ಪಕ್ಷ ಕೊಟ್ಟಿದನೆಲ್ಲಾ ಸ್ವೀಕರಿಸುವುದೇ ಅಷ್ಟೇ ನನ್ನ ಕೆಲಸ, ಬೇರೆ ಏನು ಉದ್ದೇಶ ಇಲ್ಲ ಎಂದು ಬೇಳೂರು ಗೋಪಾಲಕೃಷ್ಣ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.