Monday, February 2, 2026
Monday, February 2, 2026

Hanuman Chalisa Parayana ಇಂದು ನಾವೆಲ್ಲ ಸನಾತನಿಗಳಾಗಿರಲು ಶಂಕರಾಚಾರ್ಯರೇ ಕಾರಣ- ಹೊಸಪೇಟೆ ಚಿಂತಾಮಣಿಶ್ರೀ

Date:

Hanuman Chalisa Parayana 19 ಜನವರಿ 2024 ಹೊಸಪೇಟೆ ನಗರದಲ್ಲಿ ಅಖಂಡ “ಹನುಮಾನ್ ಚಾಲೀಸ ಪಾರಾಯಣ” ಕಾರ್ಯಕ್ರಮದ ಉದ್ಘಾಟನೆ ನಡೆಯಿತು.

ತನ್ನಿಮಿತ್ತ ವಿಜಯನಗರ ಮೈದಾನದಿಂದ ವೆಂಕಟೇಶ್ವರ ಕಲ್ಯಾಣ ಮಂಟಪಕ್ಕೆ ಶೋಭ ಯಾತ್ರೆಯಲ್ಲಿ ಜಗದ್ಗುರು ಶಂಕರಾಚಾರ್ಯ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳು, ಪರಮಪೂಜ್ಯ ದತ್ತಾವಧೂತ ಮಹಾರಾಜರು, ಪರಮಪೂಜ್ಯ ಬ್ರಹ್ಮಾನಂದ ತೀರ್ಥ ಭಿಕ್ಷು, ಪರಮ ಪೂಜನೀಯ ಶಿವಮಯಿ ಹಾಗೂ ಪ್ರಬೋಧಮಯಿ ಮಾತಾಜೀಯರು ಉಪಸ್ಥಿತಿಯಿದ್ದರು.

ಅಯೋಧ್ಯೆ ರಾಮಮಂದಿರದಂತೆಯೇ ಅಲಂಕಾರಗೊಂಡ ವೆಂಕಟೇಶ್ವರ ಛತ್ರಕ್ಕೆ ಬ್ರಹ್ಮಚೈತನ್ಯ ಮಹಾರಾಜರ ಹಾಗೂ ಬ್ರಹ್ಮಾನಂದ ಮಹಾರಾಜರ ಪಾದುಕೆಗಳನ್ನು ಮುಂದಿರಿಸಿಕೊಂಡು ಪ್ರವೇಶ ಮಾಡಲಾಯಿತು. ದೀಪ ಪ್ರಜ್ವಲನೆಯ ನಂತರ ಎಲ್ಲಾ ಸಂತರು ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದರು.

ಇಂದು ನಾವೆಲ್ಲ ಸನಾತನಿಗಳಾಗಿರುವುದಕ್ಕೆ ಕಾರಣ ಜಗದ್ಗುರು ಶಂಕರಾಚಾರ್ಯರು ಎಂದು ಹೇಳುತ್ತಾ, ಭಗವಾನ್ ಶ್ರೀಧರ ಸ್ವಾಮಿಗಳ ಸಾಧನೆಯನ್ನು ಸ್ಮರಿಸುತ್ತಾ., ಬ್ರಹ್ಮಚೈತನ್ಯ ಮಹಾರಾಜರಿಗೂ ಚಿಂತಾಮಣಿ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಮತ್ತು ಮಹಾರಾಜರೆಂದರೆ ಎಲ್ಲರಿಗಿಂತ ಹೆಮ್ಮೆ ಚಿಂತಾಮಣಿ ಮಠಕ್ಕೆ ಕಾರಣ, ಬ್ರಹ್ಮಚೈತನ್ಯ ಮಹಾರಾಜರು ತಮ್ಮ ಪೂರ್ವಾವತಾರದಲ್ಲಿ ಸಾಕ್ಷಾತ್ ಮಾರುತಿಯೇ ಆಗಿದ್ದರು.

Hanuman Chalisa Parayana ಅವರು ಮಾರುತಿಯಾದಾಗ ಮೊಟ್ಟಮೊದಲು ಶ್ರೀರಾಮಚಂದ್ರನನ್ನು ಭೇಟಿಯಾಗಿ ಮಾತನಾಡಿಸಿದ್ದು (ಆನೆಗುಂದಿ) “ಚಿಂತಾಮಣಿ ಮಠದ ರಾಮಗುಹೆ”ಯಲ್ಲಿ. ಹಾಗಾಗಿ ಶ್ರೀರಾಮ, ರಾಮನಾಮ, ಮಾರುತಿ, ಮಹಾರಾಜರು ಎಲ್ಲರೂ ಚಿಂತಾಮಣಿ ಮಠಕ್ಕೆ ಬಹಳ ಹತ್ತಿರದ ಸಂಬಂಧವುಳ್ಳವರು” ಎಂಬುವುದನ್ನು ಪ್ರೀತಿಯಿಂದ ಚಿಂತಾಮಣಿ ಸ್ವಾಮಿಗಳು ನುಡಿದರು.

ವರದಿ ಕೃಪೆ; ಮುರಳಿಧರ್ ನಾಡಿಗೇರ್

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...