Ayodhya Ram Mandir ನ್ಯಾಯನಿಷ್ಟೆ, ತ್ಯಾಗ, ದುಷ್ಟಶಿಕ್ಷಣೆ,ಶಿಷ್ಟರಕ್ಷಣೆ,ಮೌಲ್ಯ ಪ್ರತಿಪಾದನೆ ಭಾರತೀಯ ಸಂಸ್ಕೃತಿಯಾಗಿದ್ದು ಇದರ ಅಸ್ಮಿತೆಯ ಸಂಕೇತವೇ ಶ್ರೀರಾಮಚಂದ್ರ ಎಂದು ಹಿರಿಯಪತ್ರಕರ್ತ ಎಚ್.ಬಿ.ಮಂಜುನಾಥ ಹೇಳಿದರು.
ದಾವಣಗೆರೆ ನಗರದ ಜಯದೇವ ವೃತ್ತದ ಅಧ್ಯಾತ್ಮ ಮಂದಿರದಲ್ಲಿ ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರನ ಹಾಗೂ ಅಯೋಧ್ಯೆಯ ಕುರಿತಾಗಿ ಭಜನಾಮಂಡಳಿಗಳ ಸದಸ್ಯೆಯರುಗಳನ್ನುದ್ದೇಶಿಸಿ ಉಪನ್ಯಾಸ ನೀಡುತ್ತಾ ಶ್ರೀರಾಮನ ಆದರ್ಶಗಳೇನು, ರಾಮರಾಜ್ಯದ ನಿಜವಾದ ಪರಿಕಲ್ಪನೆಗಳೇನು ಎಂಬುದನ್ನು ತಿಳಿಯಬೇಕೆಂದರೆ ಮಹರ್ಷಿ ವಾಲ್ಮೀಕಿ ವಿರಚಿತ ಮೂಲ ರಾಮಾಯಣದ ಪಾದುಕಾಪ್ರದಾನದ ಸಂದರ್ಭದಲ್ಲಿ ಭರತನಿಗೆ ಹೇಳಿದ ಮಾತುಗಳಿಂದ ವೇದ್ಯವಾಗುತ್ತದೆ, ಶ್ರೀರಾಮನ ಆದರ್ಶಗಳನ್ನು ಪಾಲಿಸುವುದೇ ಶ್ರೀರಾಮರಿಗೆ ನಾವು ಸಲ್ಲಿಸಬಹುದಾದ ನಿಜವಾದ ಭಕ್ತಿ ಎಂದರಲ್ಲದೇ ಶ್ರೀರಾಮನ ಕಾಲದ ಅಯೋಧ್ಯೆಯ ವಿಷೇಶತೆ, 1528ರಲ್ಲಿ ಅಯೋಧ್ಯೆಯ ಮೇಲಾದ ದಾಳಿ, ಪ್ರಸ್ತುತವಾಗಿ ಅಯೋಧ್ಯೆಯ ಪುಸರ್ ವೈಭವ ಪ್ರತಿಷ್ಠಾಪನೆಯ ಪ್ರಮುಖ ಘಟ್ಟಗಳನ್ನು ಸಂಕ್ಷಿಪ್ತವಾಗಿ ತಿಳಿಸಿದರು.
Ayodhya Ram Mandir ಖ್ಯಾತ ಶಾಸ್ತ್ರೀಯ ಸಂಗೀತ ಶಿಕ್ಷಕಿ,ವಿದುಷಿ ಶ್ರೀಮತಿ ಶೀಲಾ ನಟರಾಜ್ ಹಾಗೂ ಭಜನಾಮಂಡಳಿಗಳ ಸದಸ್ಯೆಯರು ಉಪಸ್ಥಿತರಿದ್ದರು.