Saturday, September 28, 2024
Saturday, September 28, 2024

Klive Special ಜೀವಭಾವಗಳುದ್ಧರಿಸಿದ ಏಸುವಿನ ಜನ್ಮದಿನ-ಕವಿ ರಮೇಶ್ ಗುಬ್ಬಿ ಅವರ ಕವಿತೆ

Date:

Klive Special “ಸಮಸ್ತ ಅಕ್ಷರಬಂಧುಗಳಿಗೂ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಕಾಮನೆಗಳು. ನಮ್ಮೆಲ್ಲರ ನಲುಮೆಯ ಕ್ರೈಸ್ತ ಬಾಂಧವರಿಗೆ ಶುಭಾಶಯಗಳೊಂದಿಗೆ, ಒಲುಮೆಯ ಅಕ್ಷರಬಂಧುಗಳ ಪರವಾಗಿ ಹಬ್ಬದುಡುಗರೆಯಾಗಿ ಈ ಕಾವ್ಯ ಕಾಣಿಕೆ. ದೇವಮಾನವ ಯೇಸುಕ್ರಿಸ್ತನ ದಿವ್ಯ ಸಂದೇಶ ಜಗದಿ ಅನುಕ್ಷಣವೂ ಅನುರಣಿಸಲಿ. ಸಕಲ ಬದುಕುಗಳೂ ಕರುಣೆ-ಪ್ರೀತಿ-ಮಮತೆಗಳಿಂದ ಸಂತಸದಿ ನಳನಳಿಸಲಿ” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ಈ ದಿನ..!

ಪ್ರೀತಿ ಮಮಕಾರಗಳ ತತ್ವ
ಸಾರಲು ದೇವದೂತ ಕ್ರಿಸ್ತ
ಧರೆಗಿಳಿದು ಬಂದ ಸುದಿನ
ದಿವ್ಯಜ್ಯೋತಿ ಬುವಿಗಿಳಿದು
ಬೆಳಗಿತು ಅಗಣಿತ ಹೃನ್ಮನ.!

ಕರುಣೆ ಕ್ಷಮೆಗಳ ಮಹತ್ವ
ತೋರಲು ದೈವ ಯೇಸು
ಇಳೆಗವತರಿಸಿದ ಶುಭದಿನ
ಭವ್ಯಕಾಂತಿ ಜೀವತಳೆದು
ಮೊಳಗಿತು ನವ್ಯ ಕೀರ್ತನ.!

ಮಮತೆ ಸತ್ಯಗಳ ನಿಜಸತ್ವ
ಸಾಕ್ಷಿಕರಿಸಲು ದಯಾಮಯ
ಅವನಿಗಡಿಯಿಟ್ಟ ಪುಣ್ಯದಿನ
ಸುರದೀಪ್ತಿ ರೂಪ ಪಡೆದು
ಮಿನುಗಿತು ಅನನ್ಯ ಚೇತನ.!

Klive Special ಜೀವಗಳಿಗೆ ಹೊಸದು ದಿಕ್ಕು
ನೀಡಿದ ದೈವಾಂಶಸಂಭೂತ
ಜನಿಸಿದ ಪಾವನ ಪವಿತ್ರದಿನ
ಬಾಲಕ್ರಿಸ್ತನ ಮುಗುದ ನಗು
ಧರಣಿ ದೇದೀಪ್ಯವಾಗಿಸಿದ ದಿನ.!

ಬದುಕುಗಳ ಬೇಗುದಿ ಬಿಕ್ಕು
ಕಳೆದ ಬೆಳಕ ಕಾರುಣ್ಯದಾತ
ಹುಟ್ಟಿದ ಮಹಾ ಮಂಗಳದಿನ
ಜಗದ ಜೀವಭಾವಗಳುದ್ದರಿಸಿದ
ಯೇಸುದೇವನ ಜನುಮದಿನ.!

ಎ.ಎನ್.ರಮೇಶ್. ಗುಬ್ಬಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shikaripura News ಅಹಿಂದ ಸಂಘಟನೆ ಕರೆ ನೀಡಿದ್ದ ಶಿಕಾರಿಪುರ ಬಂದ್ ಯಶಸ್ವಿ

Shikaripura News ನಾಡಿನ ಅಹಿಂದ ವರ್ಗಕ್ಕೆ ಸೇರಿದ ಜನರ ಹಿತ ಕಾಯುವ...

New Delhi News ಅಪಹರಣಕ್ಕೊಳಗಾಗಿದ್ದ ಬಾಲಕನೇ ಇಂದು ವಕೀಲನಾಗಿ ಅದೇ ಕಿಡ್ನಾಪರ್ಸ್ ಗೆ ಶಿಕ್ಷೆ ಕೊಡಿಸಿದ

New Delhi News ಈ ಹಿಂದೆ 7 ವರ್ಷದವನಾಗಿದ್ದಾಗ ಅಪಹರಣಕ್ಕೊಳಗಾಗಿದ್ದ ಬಾಲಕ...

Kasturi Rangan Comittee Report ಕಸ್ತೂರಿ ರಂಗನ್ ವರದಿ ತಿರಸ್ಕಾರ: ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

Kasturi Rangan Comittee Report ಜುಲೈನಲ್ಲಿ ಕೇಂದ್ರ ಸರ್ಕಾರ 6ನೇ ಕರಡು...

Hosanagara News ಇಸ್ಪೀಟ್ ಅಡ್ಡೆಗೆ ಪೊಲೀಸರ ದಾಳಿ – 11 ಜನರ ಬಂಧನ 17,640 ರೂಪಾಯಿ ವಶ

Hosanagara News ಹೊಸನಗರ ತಾಲ್ಲೂಕು ಮಾರುತೀಪುರ ಗ್ರಾಮ ಪಂಚಾಯಿತಿಯ ಹಳೆಬಾಣಿಗ ರಸ್ತೆಯ...