Friday, September 27, 2024
Friday, September 27, 2024

Canara Bank Rural Self-Employment Training Institute ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಬೋಧಕ ಹುದ್ದೆಗೆ ಅರ್ಜಿ ಆಹ್ವಾನ

Date:

Canara Bank Rural Self-Employment Training Institute ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಹೊನ್ನಾಳಿ ರಸ್ತೆ ಹೊಳಲೂರು ಶಿವಮೊಗ್ಗದಲ್ಲಿರುವ ಸಂಸ್ಥೆಯಲ್ಲಿ 03 ವರ್ಷ ಗುತ್ತಿಗೆ ಆಧಾರಿತವಾಗಿ 1 ಬೋಧಕ (ಪ್ಯಾಕಲ್ಟಿ) ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಈ ಕೆಳಕಂಡ ಅರ್ಹತೆಗೆ ಅನುಗುಣವಾಗಿ ಈ ಕೆಳಕಂಡ ವಿಳಾಸಕ್ಕೆ ಭೇಟಿ ಮಾಡಿ ದಿನಾಂಕ : 10/01/2024 ರೊಳಗೆ ಅರ್ಜಿಯನ್ನು ಸಲ್ಲಿಸಬೇಕಾಗಿ ಈ ಮೂಲಕ ಕೋರಲಾಗಿದೆ.

ಅರ್ಹತೆ:1. ವಯಸ್ಸು : 22 ರಿಂದ 40 ವರ್ಷದೊಳಗಿನವರು (ಅನುಭವಹೊಂದಿದವರಿಗೆ 05 ವರ್ಷದ ಸಡಿಲಿಕೆಯ ಆದ್ಯತೆ ನೀಡಲಾಗುವುದು)

  1. ವಿದ್ಯಾಭ್ಯಾಸ : ಸರ್ಕಾರದಿಂದ ಮಾನ್ಯತೆ ಪಡೆದ ಮನೋವಿಜ್ಞಾನ / ಪತ್ರಿಕೋದ್ಯಮ / ಗ್ರಾಮೀಣ ಅಭಿವೃದ್ಧಿ / ಸಮಾಜಶಾಸ್ತ್ರದಲ್ಲಿ MA
    M.com / MSW
    ಅಥವಾ BBM/ BA / B.SC / B. COM ಹೆಚ್ಚುವರಿಯಾಗಿ B.ED / M.ED ವಿದ್ಯಾರ್ಹತೆಯನ್ನು ಹೋದಿರಬೇಕು.
  2. ಸಾಮಾನ್ಯ ಜ್ಞಾನ : ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುಲಲಿತವಾಗಿ ಓದಲು ಮತ್ತು ಬರೆಯಲು ಬರುವಂತವರಾಗಿರಬೇಕು ಹಾಗೂ ಹಿಂದಿ ಗೊತ್ತಿರುವವರಿಗೆ ಹೆಚ್ಚಿನ ಅರ್ಹತೆಯಾಗಿ ಪರಿಗಣಿಸಲಾಗುವುದು.
  3. ಸಂವಹನ ಕಲೆ : ಉತ್ತಮ ಸಂವಹನ ಕಲೆ ಹೊಂದಿದವರಿಗೆ ಆಧ್ಯತೆ ನೀಡಲಾಗುವುದು.
  4. ಕಂಪ್ಯೂಟರ್ ಜ್ಞಾನ : ಎಂ.ಎಸ್.ಆಫೀಸ್, ಇಂಟರ್‌ನೆಟ್ ತಿಳಿದಂತವರಾಗಿರಬೇಕು ಹಾಗೂ ಕನ್ನಡ ಮತ್ತು ಇಂಗ್ಲೀಷ್ ಟೈಪ್ ಮಾಡಲು ಬರಬೇಕು ಹಾಗೂ ಸಾಮಾನ್ಯ ಲೆಕ್ಕಚಾರ ಜ್ಞಾನ ತಿಳಿದಂತವರಾಗಿರಬೇಕು.

Canara Bank Rural Self-Employment Training Institute ಅರ್ಜಿಸಲ್ಲಿಸಲು ಆಸಕ್ತರಿರುವವರು ಸ್ವ-ವಿವರದ ಮಾಹಿತಿಯೊಂದಿಗೆ ಆಧಾರ್/ವಿಳಾಸದ ದಾಖಲೆ, ವಿದ್ಯಾಭ್ಯಾಸ ಮತ್ತು ಶೈಕ್ಷಣಿಕ ವಿದ್ಯಾರ್ಹತೆಯ ಅಂಕಪಟ್ಟಿಗಳ ಮತ್ತು ಅನುಭವದ ದಾಖಲೆಪತ್ರಗಳ ನಕಲು ಪ್ರತಿಯನ್ನು ಲಗತ್ತಿಸುವುದು.

ನೇರ ಸಂದರ್ಶನಕ್ಕೆ ಬರುವಾಗ ಮೂಲಪ್ರತಿಗಳನ್ನು ತರುವುದು.
ಉದ್ಯೋಗದ ಆಯ್ಕೆ : ನೇರ ಸಂದರ್ಶನ ಮತ್ತು ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ
ಹೊಳಲೂರಿನ ನಿರ್ದೇಶಕರು ತಿಳಿಸಿದ್ದಾರೆ.

ಶಿವಮೊಗ್ಗ ದೂರವಾಣಿ – 9481955721,
9743429595 ಅನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...

Chamber Of Commerce Shivamogga ರೈಲ್ವೆ ಸೌಕರ್ಯಗಳನ್ನು ಒದಗಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮನವಿ

Chamber Of Commerce Shivamogga ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ...