Wednesday, December 17, 2025
Wednesday, December 17, 2025

Hosanagara Gram Panchayat ಶಿಥಿಲಾವಸ್ಥೆಯಲ್ಲಿರುವ ಹೊಸನಗರದ ಅಂಗನವಾಡಿ‌‌ ಕಟ್ಟಡ

Date:

Hosanagara Gram Panchayat ಹೊಸನಗರದಲ್ಲಾ ಅಂಗನವಾಡಿ ಕೇಂದ್ರಯೊಂದು
ಶಿಥಿಲಾವಸ್ಥೆ ತಲುಪಿದೆ.

ಹೊಸನಗರದಲ್ಲಿ ಅಂಗನವಾಡಿಯ ಬಿರುಕು ಬಿಟ್ಟ ಗೋಡೆಗಳು ಈಗಲೂ ಆಗಲು ಬೀಳಬಹುದಾದಂತ ಮೇಲ್ಚಾವಣಿ ಒಡೆದು ಹಲವು ಚೂರುಗಳಾಗಿ ಅಂಗನವಾಡಿ ಕೇಂದ್ರ ಈಗಲೋ ಆಗಲೋ ಬೀಳುವಂತಾಗಿದೆ.

ಹೊಸನಗರ ತಾಲೂಕಿನ ಮೇಲಿನ ಬೇಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಸವೆ ಗ್ರಾಮದ ಸರ್ಕಾರಿ ಅಂಗನವಾಡಿ ಕೇಂದ್ರದ ಕಟ್ಟಡಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಭೇಟಿ ನೀಡಬೇಕೆಂದು ಒತ್ತಾಯಿಸಿದ್ದಾರೆ.

2010 11ನೇ ಸಾಲಿನ 12 ಮತ್ತು 13ನೇ ಹಣಕಾಸು ಸಾಲಿನಲ್ಲಿ ಮೂರು ಲಕ್ಷ ರೂ ಅನುದಾನದಲ್ಲಿ ಈ ಅಂಗನವಾಡಿ ಕಟ್ಟಡ ನಿರ್ಮಾಣ ಆಗಿದ್ದು ಈ ಭಾಗದ ಹಲವು ಗ್ರಾಮಗಳ ಮಕ್ಕಳು ತಮ್ಮ ವಿದ್ಯಾಭ್ಯಾಸಕ್ಕಾಗಿ ಈ ಅಂಗನವಾಡಿ ಕೇಂದ್ರಕ್ಕೆ ಮೊರೆ ಹೋಗಿದ್ದರು.

Hosanagara Gram Panchayat ಕಳೆದ ಎರಡು ವರ್ಷಗಳ ಈಚೆಗೆ ಕಟ್ಟಡದಲ್ಲಿ ವ್ಯಾಪಕ ಬದಲಾವಣೆ ಕಂಡು ಬಂದು ದುರಸ್ತಿ ಕಾರ್ಯಕ್ಕೆ ಮುಂದಾಗುವಂತೆ ಹಲವು ಬಾರಿ ಸಿಡಿಪಿಓ ಕಚೇರಿಗೆ ಗ್ರಾಮಸ್ಥರೇ ಮನವಿ ಸಲ್ಲಿಸಿದ್ದರು.

ಆದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮ ಪಂಚಾಯಿತಿ ಆಡಳಿತ ಸಹ ಕಟ್ಟಡ ದುರಸ್ತಿಗೆ ಸಂಬಂಧಪಟ್ಟಂತೆ ಇಲಾಖೆಗೆ ಪತ್ರ ಬರೆದು ಹಲವು ತಿಂಗಳು ಕಳೆದಿದೆ.

ಪ್ರಸಕ್ತ ಈ ಅಂಗನವಾಡಿಯು ಪಕ್ಕದ ಸರ್ಕಾರಿ ಶಾಲೆಯ ನಲಿ – ಕಲಿ ಕೇಂದ್ರಕ್ಕೆ ವರ್ಗಾವಣೆಗೊಂಡಿದ್ದು ನಾಲ್ಕೈದು ಮಕ್ಕಳು ವ್ಯಾಸಂಗ ನಿರತರಾಗಿದ್ದಾರೆ,ಹಳೆ ಅಂಗನವಾಡಿ ಕಟ್ಟಡವು ಶಿಥಿಲಾವಸ್ತೆ ತಲುಪಿರುವ ಕಾರಣ ಪೋಷಕರು ತಮ್ಮ ಮಕ್ಕಳ ಸುರಕ್ಷತೆ ಕುರಿತಂತೆ ಆತಂಕದಲ್ಲಿ ದಿನದೊಡುವಂತಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Scheduled Castes Welfare Department ಮಾನಿಸಿಕ ಒತ್ತಡ ನಿರ್ವಹಣೆ ಬಗ್ಗೆ ಆನ್ ಲೈನ್ ಪಾಡ್ ಕ್ಯಾಸ್ಟ್ ವಿಡಿಯೊ ಸಂವಾದ

Scheduled Castes Welfare Department ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ...

Karnataka Information Commission ಡಿಸೆಂಬರ್ 20. ರಾಜ್ಯ ಮಾಹಿತಿ ಆಯುಕ್ತರ ಶಿವಮೊಗ್ಗ ಜಿಲ್ಲಾ ಪ್ರವಾಸ ಮಾಹಿತಿ

Karnataka Information Commission ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ...

B.Y. Raghavendra ವೈಯಕ್ತಿಕವಾಗಿ ಕುಟುಂಬದ ಹಿರಿಯರನ್ನ ಕಳೆದುಕೊಂಡಂತಾಗಿದೆ, ಶಾಮನೂರು ನಿಧನಕ್ಕೆ ಬಿ.ವೈ.ರಾಘವೇಂದ್ರ ಕಂಬನಿ

B.Y. Raghavendra ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಹಿರಿಯ...