Tuesday, October 1, 2024
Tuesday, October 1, 2024

Klive Special ನೇರನುಡಿ

Date:

Klive Special ಮೋದಿ ಚರಿಷ್ಮಾ ಕುಂದಿಲ್ಲ
ಕಾಂಗ್ರೆಸ್ ,ತನ್ನ ಆಲೋಚನಾ ದಿಕ್ಕನ್ನ ಸುಧಾರಿಸಿಕೊಳ್ಳಬೇಕಿದೆ

ಲೇಖಕರು: ಪ್ರಭಾಕರ ಕಾರಂತ

ಪಂಚರಾಜ್ಯಗಳ ಚುನಾವಣೆಯ ಪಲಿತಾಂಶ ಹೊರಬರಲಾರಂಬಿಸಿದೆ. ಮಿಜೋರಾಂನಲ್ಲಿ ಯಾವ ಪಕ್ಷ ಸರ್ಕಾರ ರಚಿಸಿದರೂ ಅದು ಕೇಂದ್ರದ ಆಳುವ ಪಕ್ಷದ ಒಕ್ಕೂಟದಲ್ಲೇ ಇರುತ್ತದೆ.ತೆಲಂಗಾಣ ರಚನೆ ಆದ ನಂತರ ಹತ್ತು ವರ್ಷ ಕಳೆದ ಮೇಲೆ ಆ ರಾಜ್ಯದಲ್ಲಿ ಕಾಂಗ್ರೆಸ್ಸಿನ ಆಡಳಿತ ಬಂದಿದೆ.
ಆದರೆ ಉತ್ತರ ರಾಜ್ಯಗಳಾದ ಮದ್ಯಪ್ರದೇಶ, ರಾಜಸ್ಥಾನ ಮತ್ತು ಚತ್ತೀಸ್ ಗಡದ ಅದರ ಸೋಲು ಅದರ ವಿನಾಶದ ಸೂಚನೆ ಆಗಿದೆ.ಈ ಮೂರೂ ರಾಜ್ಯಗಳಲ್ಲಿ ಬಿಜೆಪಿಗೆ ಕಾಂಗ್ರೆಸ್ ಎದುರಾಳಿ.ವಿಶೇಷ ಎಂದರೆ ಮೋದಿ ಯುಗದಲ್ಲಿ ಈ ರಾಜ್ಯಗಳ ಚುನಾವಣೆಯ ಪಲಿತಾಂಶ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ. ವಾಜಪೇಯಿಯವರು ಪ್ರದಾನ ಮಂತ್ರಿಯಾಗಿದ್ದಾಗ ಈ ಮೂರೂ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತು.ಈ ಗೆಲುವಿನ ಆಧಾರದಲ್ಲೇ ಬಿಜೆಪಿ ಲೋಕಸಭಾ ಚುನಾವಣೆಯನ್ನು ಅವಧಿಗೆ ಮುಂಚೆ ಮಾಡಿತು. ಮತ್ತು ಲೋಕಸಭೆಯ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿತು.
ಮೋದಿಯವರನ್ನು 2013 ರಲ್ಲಿ ಬಿಜೆಪಿಯಿಂದ ಪ್ರದಾನ ಮಂತ್ರಿ ಅಭ್ಯರ್ಥಿಯಾಗಿ ಗೋಷಿಸಿದ ನಂತರ ನಡೆದ ಈ ಮೂರೂ ರಾಜ್ಯ ಚುನಾವಣೆಯಲ್ಲಿ ಬಿಜೆಪಿಯ ಗೆಲುವಾಯಿತು. ನಂತರ ಮೋದಿಯವರು ಲೋಕಸಭೆಯ ಚುನಾವಣೆಯಲ್ಲಿ ಬಿಜೆಪಿಯನ್ನು ಸ್ವಂತ ಭಲದ ಮೇಲೆ ಗೆಲ್ಲಿಸಿಕೊಟ್ಟರು. 2018 ರ ಚುನಾವಣೆಯಲ್ಲಿ ಬಿಜೆಪಿ ಈ ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ಎದುರು ಸೋಲೊಪ್ಪಿತು. ಆಗ ದೇಶ ಬಿಜೆಪಿ ಮುಕ್ತವಾಗುತ್ತಿದೆ ಎಂದು ಕೆಲವರು ಸಂಭ್ರಮಿಸಿದರು. ಆದರೆ 2019ರ ಲೋಕಸಭೆಯ ಚುನಾವಣೆಯಲ್ಲಿ ಈ ಮೂರೂ ರಾಜ್ಯಗಳಲ್ಲಿ ಬಿಜೆಪಿ ಬಹುತೇಕ ಎಲ್ಲಾ ಲೋಕಸಭಾ ಸ್ಥಾನ ಗೆದ್ದುಕೊಂಡಿತು. ರಾಜ್ಯ ಚುನಾವಣೆಯಲ್ಲಿ ಗಳಿಸುವ ಮತಗಳಿಗಿಂತ ಶೇಕಡ ಐದಕ್ಕೂ ಹೆಚ್ಚು ಮತ ಆ ಪಕ್ಷಕ್ಕೆ ಲೋಕಸಭೆಯ ಚುನಾವಣೆಯಲ್ಲಿ ದೊರಕುತ್ತದೆ. ಅದು ಮೋದಿಯವರ ಮೇಲೆ ದೇಶದ ಜನರಿಟ್ಟ ಭರವಸೆ.ಹೀಗಿದ್ದರೂ 2018 ರ ಮೂರೂ ರಾಜ್ಯಗಳ ಗೆಲುವು ಕಾಂಗ್ರೆಸ್ಸಿನ ಮನೋಬಲ ಹೆಚ್ಚಿಸಿದ್ದು ಸುಳ್ಳಲ್ಲ. ಅದು ದೇಶ ಮತ್ತೆ ಆಳುವ ಕನಸು ಕಾಣತೊಡಗಿತ್ತು. ರಾಹುಲ್ ಗಾಂಧಿಯವರಂತೂ ಲೋಕಸಭೆಯ ಚುನಾವಣೆಯ ನಂತರ ವಿವಿಧ ಪಕ್ಷಗಳ ನಾಯಕರನ್ನು ಸಂಪರ್ಕಿಸಿ ಕೇಂದ್ರ ಮಂತ್ರಿಮಂಡಲದಲ್ಲಿ ಖಾತೆ ಹಂಚಿಕೆ ಆರಂಭಿಸಿದ್ದರು. ತಮ್ಮ ಕುಟುಂಬದ ಸ್ವತ್ತಾದ ಪ್ರದಾನ ಮಂತ್ರಿಯ ಹುದ್ದೆ ಮರಳಿ ಗೆದ್ದ ಗತ್ತು ಗೈರತ್ತು ಅವರ ಹಾವಭಾವಗಳಲ್ಲಿ ವಿಜೃಂಭಿಸಿತ್ತು.
2024 ರ ಚುನಾವಣೆಯಲ್ಲಿ ಅಂತಹ ಕನಸು ಕಾಣುವುದೂ ಅಪಹಾಸ್ಯಕ್ಕೆ ಕಾರಣವಾಗುವ ಸನ್ನಿವೇಶದಲ್ಲಿ ಕಾಂಗ್ರೆಸ್ಸಿನ ಯುವರಾಜ ನಿಂತಿದ್ದಾನೆ. ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ಹಾಕಿದ್ದಾಗಿ ಗೋಸಿಸಿದ್ದೇ ಬಂತು. ಎದೆಯಲ್ಲಿ ಹೊಟ್ಟೆ ಕಿಚ್ಚು, ಅಸೂಯೆ, ಅಸಹನೆ ಇಟ್ಟುಕೊಂಡವರಿಗೆ ಪ್ರೀತಿ ಹಂಚುವುದು ಅಸಾಧ್ಯ. ಈ ಚುನಾವಣೆಯಲ್ಲಿ ಮೋದಿಯವರ ಕುರಿತು ಈ ರಾಹುಲ್ ಈ ಪ್ರಿಯಾಂಕ ಏನೆಲ್ಲಾ ಹೇಳಿದ್ದಾರೆ ಎಂದು ಒಮ್ಮೆ ಅವಲೋಕಿಸಿ. ವಿಶ್ವ ಕಪ್ ಕ್ರಿಕೆಟ್ ನಲ್ಲಿ ಭಾರತ ಅಂತಿಮ ಸ್ಪರ್ಧೆಯಲ್ಲಿ ಸೋಲುಂಡಿದ್ದೇ ನೆವವಾಗಿ ಆ ಪಂದ್ಯ ವೀಕ್ಷಣೆಗೆ ಮೋದಿ ಹೋಗಿದ್ದರಿಂದಲೇ ಭಾರತ ಸೋಲಬೇಕಾಯಿತು. ಆತ ಪನೌತಿ. ದೇಶಕ್ಕೆ ದುರದೃಷ್ಟ ತರುವಾತ ಎಂದು ರಾಹುಲ್ ಭಾಷಣ ಮಾಡಿದರು. ಚುನಾವಣೆಯ ಪ್ರಚಾರ ಸಭೆಗಳಲ್ಲಿ ಮೋದಿ ಪನೌತಿ ಗೋಷಣೆ ಮೊಳಗಿಸಲಾಯಿತು. ಕಿಸೆ ಗಳ್ಳರು ತಮ್ಮ ಕಸುಬು ಮಾಡುವಾಗ ಜನರ ಗಮನ ಬೇರೆಡೆ ಸೆಳೆಯುತ್ತಾರೆ. ಅದಾನಿ ಮತ್ತು ಮೋದಿ ಕಿಸೆಗಳ್ಳರು. ಇದು ರಾಹುಲ್ ವ್ಯಾಖ್ಯಾನವಾಗಿತ್ತು. ಮೋದಿ ಜನರ ಕಿಸೆ ಕಾಲಿ ಮಾಡಿ ಅದಾನಿ ಜೇಬು ತುಂಬಿಸುತ್ತಿದ್ದಾರೆ ಎಂದರು. ಭಾರತ ಆರ್ಥಿಕವಾಗಿ ಸೋಲುತ್ತಿದೆ.ದೇಶದ ಹೆಮ್ಮೆಯಾದ ಜೀವವಿಮಾ ನಿಗಮ ಮತ್ತು ಸ್ಟೇಟ್ ಬ್ಯಾಂಕ್ ಅದಾನಿಯಿಂದಾಗಿ ಮುಳುಗಿಹೋಗುತ್ತಿದೆ. ನಿರುದ್ಯೋಗ, ಬೆಲೆ ಏರಿಕೆ,ಹಣದುಬ್ಬರ ಮತ್ತು ಕಾನೂನು ಅವ್ಯವಸ್ಥೆಯ ಕಾರಣಕ್ಕೆ ದೇಶ ನಲಗುತ್ತಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಇಲ್ಲವಾಗಿದೆ. ಸರ್ವಾಧಿಕಾರ ತನ್ನ ಕದಂಬ ಬಾಹು ಎಲ್ಲೆಡೆ ಚಾಚಿ ದೇಶದ ಜನ ಉಸಿರಾಡಲೂ ಕಷ್ಟ ಪಡಬೇಕಾಗಿದೆ.ತನ್ನ ಮತ್ತು ವಿಪಕ್ಷಗಳ ಫೋನ್ ಕದ್ದಾಲಿಸಲಾಗುತ್ತಿದೆ. ಹೀಗೆ ಮನಸ್ಸಿಗೆ ಏನು ಬರುತ್ತದೋ ಅದನ್ನೇ ಈ ಜೋಡಿ ಬಡಬಡಾಯಿಸಿತು. ಪ್ರಿಯಾಂಕ ಅಂತೂ ದೇವಸ್ಥಾನಕ್ಕೆ ತೆರಳುವ ಮೋದಿ ಹುಂಡಿಯಲ್ಲಿ ಕಾಲೀ ಕವರ್ ಹಾಕುತ್ತಾರೆ ಎಂಬ ಸುಳ್ಳನ್ನು ಹಲವು ಪ್ರಚಾರ ಸಭೆಗಳಲ್ಲಿ ಹೇಳಿ ಬಾಡಿಗೆಗೆ ತಂದ ಜನರಿಂದ ಚಪ್ಪಾಳೆ ಗಿಟ್ಟಿಸಿದರು.ಮೋದಿಯವರ ವರ್ಚಸ್ಸನ್ನು ನಾಶಮಾಡುವ ಉತ್ಸಾಹದಲ್ಲಿ ಈ ಇಬ್ಬರು ಬಾಯಿ ಹರಿಯಬಿಟ್ಟಾಗ ಇಡೀ ಬಟ್ಟಂಗಿ ತಂಡ ಪೈಪೋಟಿಯಲ್ಲಿ ಮೋದಿ ನಿಂಧನೆಯಲ್ಲಿ ತೊಡಗಿದರು.ಟೀವಿ ಚರ್ಚೆಯಲ್ಲಿ ಇದು ಅತ್ಯಂತ ತಳಮಟ್ಟ ತಲುಪಿತು. ಕಾಂಗ್ರೆಸ್ಸಿನ ನಾಯಕರಲ್ಲಿ ಮೋದಿಯವರ ನಿಂಧನೆ ಸ್ಪರ್ಧೆ ಏರ್ಪಟ್ಟಿತು. ಮೋದಿ ನಿನ್ನ ಹೂಳುತ್ತೇವೆ ಎಂಬ ಗೋಷಣೆ ಕಾಂಗ್ರೆಸ್ ನಾಯಕರಿಗೆ ಆಪ್ಯಾಯಮಾನವಾಯಿತು. ಯಾವುದೇ ಆಧಾರವಿಲ್ಲದ ಪೆಗಾಸಸ್, ಹಿಂಡನ್ ಬರ್ಗ್, ಅಥವಾ ಎಕನಾಮಿಕ್ ಟೈಮ್ಮ್ ನಂತ ಪತ್ರಿಕಾ ವರದಿಯಷ್ಟೇ ಪರಮ ಸತ್ಯವಾಗಿ ಮೋದಿಯವರನ್ನ ನೇಣಿಗೇರಿಸುವ ಉತ್ಸಾಹ ತೋರಲಾಯಿತು. ಈ ಎಲ್ಲಾ ನಕಾರಾತ್ಮಕ ಪ್ರಚಾರದ ಒಟ್ಟೂ ಪರಿಣಾಮ ಚುನಾವಣೆಯಲ್ಲಿ ಫಲಿತಾಂಶದಲ್ಲಿ ಪ್ರಕಟವಾಗಿದೆ.ಕಾಂಗ್ರೆಸ್ ವಿಪಕ್ಷ ನಾಯಕನ ಸ್ಥಾನ ರಾಜ್ಯಸಭೆಯಲ್ಲಿ ಶೀಗ್ರ ಕಳೆದುಕೊಳ್ಳಲಿದೆ. ಕಾಂಗ್ರೆಸ್ ಐಎನ್ ಡಿಎ ನಾಯಕತ್ವ ಕಳೆದುಕೊಳ್ಳಲಿದೆ. ಯಾವ ವಿರೋಧ ಪಕ್ಷವೂ ಕಾಂಗ್ರೆಸ್ಸಿನ ನಾಯಕತ್ವ ಒಪ್ಪಿಕೊಳ್ಳುವುದಿಲ್ಲ.ಲಂಡನ್, ಅಮೆರಿಕ ಕಾರ್ಯಕ್ರಮ ಭಾರತ್ ಜೋಡೋ ಪ್ರಚಾರ ಪಡೆಯಲು ಮಾತ್ರ ಸಾರ್ಥಕ. ಮತ ಮೋದಿಯವರದ್ದು ಹೆಚ್ಚಾಗುತ್ತಲೇ ಹೋಗುತ್ತದೆ.
ಸರಿಸುಮಾರು 20 ವರ್ಷ ಆಳ್ವಿಕೆಯ ನಂತರವೂ ಮದ್ಯಪ್ರದೇಶದಲ್ಲಿ ಶಿವರಾಜ ಸಿಂಗ್ ಚವ್ಹಾಣ್ 230 ರಲ್ಲಿ 170 ರವರೆಗೂ ಸ್ಥಾನ ಗಳಿಸುತ್ತಾರೆಂದರೆ ಆ ನಾಯಕತ್ವದ ಗಟ್ಟಿತನ ಗೊತ್ತಾಗುತ್ತದೆ. ಕರ್ನಾಟಕದ ನಾಯಕರು ಶಿವರಾಜ ಸಿಂಗ್, ಅಥವಾ ಯೋಗಿ ನೋಡಿ ಏನೂ ಕಲಿಯುತ್ತಿಲ್ಲವಲ್ಲ.

Klive Special ಯಡಿಯೂರಪ್ಪರ ನಾಯಕತ್ವದಲ್ಲೇ ಚುನಾವಣೆಗೆ ಹೋದಾಗಲೂ ಬಿಜೆಪಿಗೆ ಸ್ಪಸ್ಟ ಬಹುಮತ ದೊರಕಿರಲಿಲ್ಲ.ಅಧಿಕಾರಕ್ಕೆ ಬಂದಾಗ ಭ್ರಷ್ಟತೆಯ ಪರಮವಾದಿ ತಲುಪಿದ್ದ ಈ ನಾಯಕರು ಕರ್ನಾಟಕದ ಚುನಾವಣೆಯಲ್ಲಿ ಮೋದಿಯವರ ಹೆಸರೂ ಕೆಡಿಸಿದರು. ಈಗ ಮತ್ತೆ ಅದೇ ಬ್ರಷ್ಟ ನಾಯಕರ ಕೈಗೆ ರಾಜ್ಯದ ಪಕ್ಷದ ನಾಯಕತ್ವ ದೊರಕಿದೆ.
ಉಚಿತ ಕೊಡುಗೆಯ ಆರ್ಭಟದಲ್ಲಿ ಬಿಜೆಪಿಯೂ ಒಂದಿಷ್ಟು ಉಚಿತ ಕೊಡಲೇ ಬೇಕಾದ ಸಂಧರ್ಭ ಬಂದಿತು.
ಐಎನ್ ಡಿಎ ಗಟ್ಟಿ ಮಾಡಬೇಕಾದರೆ ಒಂದೈದಾರು ಸ್ಥಾನವನ್ನಾದರೂ ಕಾಂಗ್ರೆಸ್ ಮದ್ಯಪ್ರದೇಶದಲ್ಲಿ ಸಮಾಜವಾದಿ ಪಕ್ಷಕ್ಕೆ ಬಿಟ್ಟು ಕೊಡಬೇಕಿತ್ತು. 199 ಒಟ್ಟು ಸ್ಥಾನ ಇರುವ ರಾಜಸ್ಥಾನದಲ್ಲಿ ಕಾಂಗ್ರೆಸ್ಸಿನ ಗಳಿಕೆಗಿಂತಲೂ ಮದ್ಯಪ್ರದೇಶದ ಸ್ಥಾನ ಕುಸಿಯಿತು. ಹಿಂದುತ್ವದ ಪ್ರಭಲ ಪ್ರತಿಪಾದಕನಾಗಿ ತನ್ನನ್ನು ಬಿಂಬಿಸಿಕೊಂಡ ಕಮಲನಾಥನ ನಾಟಕ ಜನ ಅರ್ಥ ಮಾಡಿಕೊಂಡರು. ಕಾಂಗ್ರೆಸ್ಸಿನ ರಾಜಸ್ಥಾನ ಪ್ರಚಾರ ಬ್ಯಾನರ್ ಗಳಲ್ಲಿ ಅದರ ಅಧ್ಯಕ್ಷರ ಚಿತ್ರ ನಾಪತ್ತೆಯಾಗಿತ್ತು. ರಾಹುಲ್, ಸೋನಿಯಾ,ಪ್ರಿಯಾಂಕ ಮತ್ತು ಗೆಲ್ಹೋಟ್ ಚಿತ್ರಗಳನ್ನು ಮಾತ್ರ ಬಳಸಲಾಗಿತ್ತು. ಅಲ್ಲಿ ವಸುಂಧರಾ ರಾಜೆ ಇಲ್ಲಿ ಯಡಿಯೂರಪ್ಪ ರೀತಿ ಪಕ್ಷಕ್ಕೆ ತಲೆ ನೋವಾಗಿ ಬಿಜೆಪಿಯನ್ನು ಕಾಡಿದ್ದರು. ಈಗ ಅವರ ಬದಲು ಯೋಗಿ ಯೊಬ್ಬರನ್ನು ಮುಖ್ಯ ಮಂತ್ರಿ ಮಾಡುವ ಸಾಧ್ಯತೆ ಇದೆ.ಸಧ್ಯಕ್ಕೆ ಶಿವರಾಜ ಸಿಂಗ್ ಚವ್ಹಾಣ್ ಮದ್ಯಪ್ರದೇಶದ ಮುಖ್ಯಮಂತ್ರಿ ಆದಾರು. ನಂತರ ಅವರ ಸ್ಥಾನಕ್ಕೆ ಸಿಂಧ್ಯಾ ಬಂದಾರು. ಚತ್ತೀಸ್ ಗಡದಲ್ಲಿ ಬಿಜೆಪಿ ಹೊಸ ಮುಖಕ್ಕೆ ಮನ್ನಣೆ ನೀಡಬಹುದು. ಮೋದಿ ಹೆಚ್ಚು ಆತ್ಮವಿಶ್ವಾಸದಿಂದ 2024 ರ ಮಹಾ ಚುನಾವಣೆಗೆ ಹೋಗಲಿದ್ದಾರೆ. ಈ ನಡುವೆ ಇಡಿ ಮತ್ತು ತೆರಿಗೆ ಇಲಾಖೆಯ ದಾಳಿ ಮತ್ತಷ್ಟು ತೀವ್ರವಾಗಲಿದೆ. ಕೇಜ್ರಿವಾಲರು ಮಹಾ ಚುನಾವಣೆಯ ಒಳಗೇ ಜೈಲಿಗೆ ಹೋದರೆ ಅಚ್ಚರಿ ಇಲ್ಲ.ಮಮತಾ ಬ್ಯಾನರ್ಜಿ, ಭೂಪೇಶ್ ಬಗೇಲ್, ಸೊರೇನ್, ಡಿಕೆಶಿ ಇತ್ಯಾದಿ ಭ್ರಷ್ಟತೆಯ ಆಪಾದನೆ ಹೊತ್ತವರು ಮತ್ತಷ್ಟು ಸಂಕಟಕ್ಕೆ ಸಿಲುಕಲಿದ್ದಾರೆ. 2024 ರ ಚುನಾವಣೆಯಲ್ಲಿ ಮತ್ತಷ್ಟು ಶಕ್ತಿಯೊಂದಿಗೆ ಆರಿಸಿ ಬರುವ ಮೋದಿ ಸಮಾನ ನಾಗರೀಕ ಸಂಹಿತೆ ಜಾರಿಗೆ ತರುತ್ತಾರೆ. ದೇಶ ಮೂರನೇ ದೊಡ್ಡ ಆರ್ಥಿಕತೆ ಆಗಲಿದೆ. ಭಾರತ ವಿಶ್ವ ವೇದಿಕೆಯಲ್ಲಿ ಮತ್ತಷ್ಟು ಸಶಕ್ತ ಆಗಲಿದೆ. ಭಾರತದ ಭಾಗ್ಯೋದಯ ನಿಶ್ಚಿತ.
ಮದ್ಯಪ್ರದೇಶದಲ್ಲಿ ಬಿಜೆಪಿಯ ಮತ ಶೇಕಡ 48 ಕ್ಕೂ ಹೆಚ್ಚು ಆಗಲಿದೆ ಎಂಬುದು ಆ ಪಕ್ಷಕ್ಕೆ ಉಜ್ವಲ ಭವಿಷ್ಯದ ಕುರುಹಾಗಿದೆ.ನನಗೆ ನನ್ನ ಅಕ್ಕಂದಿರು ಕಳೆದವರ್ಷ ಉಜ್ಜಯಿನಿ ಮತ್ತಿತರ ಕಡೆ ಯಾತ್ರೆ ಹೋಗಿದ್ದು ನೆನಪಾಗುತ್ತಿದೆ. ನನ್ನ ಸುಮಿತ್ರಕ್ಕ ಅಲ್ಲಿ ಡ್ರೈವರ್ ಗಳಲ್ಲಿ ಶಿವರಾಜ ಸಿಂಗ್ ಕುರಿತು ಅಭಿಪ್ರಾಯ ಕೇಳಿದಾಗ ಎಲ್ಲರೂ ಸಕಾರಾತ್ಮಕ ಅಭಿಪ್ರಾಯ ಹೇಳಿದ್ದರಂತೆ. ಆಗಲೇ ಅಲ್ಲಿ ಬಿಜೆಪಿ ಪುನರಾಯ್ಕೆ ಆಗಬಹುದು ಎಂದು ಹೇಳಿದ್ದಳು. ಅದು ನಿಜವಾಯಿತು.
ಎಲ್ಲರೂ ಒಂದಾದರೂ ಮೋದಿ ಅಜೇಯರಾಗಿರುವರು ಎಂದು ಸ್ಪಸ್ಟವಾಗಿ ಸಿದ್ದವಾದ ಫಲಿತಾಂಶ ಇದು.ದೇವರೇ ಒಂದೆರಡು ರಾಜ್ಯದಲ್ಲಾದರೂ ಬಿಜೆಪಿ ಬರಲಿ ಎಂದು ಪ್ರಾರ್ಥಿಸುತ್ತಿದ್ದ

ನನ್ನಂತವರಿಗೆ ದೇವರು ಕೇಳಿದ್ದಕ್ಕಿಂತ ಹೆಚ್ಚು ದಯಪಾಲಿಸಿದ್ದಾರೆ. ಮೋದಿಯವರು ಭಗವಂತನ ಅವತಾರವೇ ಎಂಬ ನಂಬಿಕೆ ಬಲವಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...

Gandhi Jayanti ಸಾಗರ ತಾಲ್ಲೂಕಿನಲ್ಲಿ ಯಶಸ್ವಿಯಾಗಿ ನಡೆದ ಸ್ವಚ್ಛತಾ ಹಿ ಸೇವಾ ಚಟುವಟಿಕೆ

Gandhi Jayanti ಭಾರತ ಸರ್ಕಾರದ, ಯುವ ವ್ಯವಹಾರ ಮತ್ತು ಕ್ರೀಡಾ...

Karnataka State Farmers Association ಆನೆದಾಳಿಗೆ ಮೃತಪಟ್ಟ ಪುರದಾಳ್ ನಿವಾಸಿಗೆ ₹25 ಲಕ್ಷ ಪರಿಹಾರ ನೀಡಲು ಆಗ್ರಹ

Karnataka State Farmers Association ಶಿವಮೊಗ್ಗ ನಗರದ ಅಂಚಿನಲ್ಲಿರುವ ಪುರದಾಳ್...