Sunday, December 14, 2025
Sunday, December 14, 2025

Karnataka Rajyotsava ಕನ್ನಡದ ಕಂಪು ಹಬ್ಬಿಸುವವರು ಆಟೋ ಚಾಲಕರು – ರಾಜೇಗೌಡ

Date:

Karnataka Rajyotsava ದೈನಂದಿನ ಎಲ್ಲಾ ಗ್ರಾಹಕರೊಂದಿಗೆ ನಿರರ್ಗಳವಾಗಿ ಮಾತನಾಡುವ ಮೂಲಕ ಕನ್ನಡ ಭಾಷೆಯ ಸವಿಯನ್ನು ಎಲ್ಲೆಡೆ ಪಸರಿಸುವ ಮಹತ್ತರ ಕಾರ್ಯವನ್ನು ಆಟೋ ಚಾಲಕರು ಜವಾ ಬ್ದಾರಿಯುತವಾಗಿ ಮಾಡುತ್ತಿದ್ದಾರೆ ಎಂದು ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಹೇಳಿದರು.

ಚಿಕ್ಕಮಗಳೂರು ನಗರದ ಕೆಂಪನಹಳ್ಳಿ ಸಮೀಪ ಆಟೋ ಚಾಲಕರು, ಮಾಲೀಕರ ಸಂಘ ಹಾಗೂ ಕನ್ನಡಸೇನೆ ವತಿಯಿಂದ ಬುಧವಾರ ಏರ್ಪಡಿಸಿದ್ದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಬುಧವಾರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕನ್ನಡಭಾಷೆಯ ಬಗ್ಗೆ ವಿಶೇಷ ಅಭಿಮಾನ ಹೊಂದಿರುವ ಆಟೋ ಚಾಲಕರು ಎಂತಹ ಪ್ರವಾಸಿಗರು ಜಿಲ್ಲೆಗಾ ಮಿಸಿದರೂ ಕೂಡಾ ಮೊದಲು ಕನ್ನಡದಲ್ಲೇ ಉತ್ತರಿಸುವ ಮೂಲಕ ಭಾಷೆಗೆ ಒತ್ತು ನೀಡಿದ್ದಾರೆ. ಅದಲ್ಲದೇ ನಾಡಿನ ಜಲ, ಭಾಷೆ, ಘನತೆಗೆ ಧಕ್ಕೆಯುಂಟಾದ ಸಂದರ್ಭದಲ್ಲಿ ಮೊದಲ ಸಾಲಿನಲ್ಲಿ ನಿಂತು ಹೋರಾಟಕ್ಕೆ ಮುಂದಾಗಲಿ ದ್ದಾರೆ ಎಂದು ಹೇಳಿದರು.

ನಗರದ ಹಲವಾರು ಆಟೋ ವೃತ್ತಗಳಲ್ಲಿ ಚಾಲಕರು ಮತ್ತು ಮಾಲೀಕರು ಕನ್ನಡ ರಾಜ್ಯೋತ್ಸವನ್ನು ಈ ಬಾರಿ ಅತ್ಯಂತ ವಿಜಂಭ್ರಮಣೆಯಿ0ದ ಆಚರಿಸಿದ್ದಾರೆ. ಜೊತೆಗೆ ಮಾನವೀತೆಯ ದೃಷ್ಟಿಯಿಂದ ಸಾರ್ವಜನಿಕ ಅನ್ನಸಂ ತರ್ಪಣೆ ಸೇರಿದಂತೆ ಇನ್ನಿತರ ಸಾಮಾಜಿಕ ಕಾರ್ಯಗಳಿಗೂ ಕೈಜೋಡಿಸುತ್ತಿದ್ದಾರೆ ಎಂದು ತಿಳಿಸಿದರು.

ಕೆಂಪನಹಳ್ಳಿ ಆಟೋ ಚಾಲಕರ ಸಂಘದ ಅಧ್ಯಕ್ಷ ಪುನೀತ್ ಮಾತನಾಡಿ ಕಳೆದ ಎರಡು ವರ್ಷಗಳಿಂದ ಅತ್ಯಂತ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಭಾಷೆಯ ಬೆಳವಣಿಗೆಗೆ ಸಹಕರಿಸಲಾಗು ತ್ತಿದೆ ಎಂದ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡಮಟ್ಟಿನಲ್ಲಿ ರಾಜ್ಯೋತ್ಸವ ಆಚರಿಸಿ ಸಾಮಾಜಿಕ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಆಟೋ ಚಾಲಕರು ಪ್ರತಿನಿತ್ಯದ ಬಾಡಿಗೆ ವಿಚಾರದಲ್ಲಿ ಹಲವಾರು ತೊಂದರೆಗಳಿದ್ದರೂ ಸಹ ರಾಜ್ಯೋತ್ಸವ ಸಂದರ್ಭದಲ್ಲಿ ಯಾವುದಕ್ಕೂ ಅಂಜದೇ ಎಲ್ಲರ ಸಹಕಾರ ಪಡೆದುಕೊಂಡು ಪ್ರತಿವರ್ಷವು ಸಡಗರದಿಂದ ರಾಜ್ಯೋ ತ್ಸವ ಕನ್ನಡಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

Karnataka Rajyotsava ಈ ಸಂದರ್ಭದಲ್ಲಿ ಕನ್ನಡಸೇನೆ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ಮುಖಂಡರಾದ ನವೀನ್‌ಕು ಮಾರ್, ಯೋಗೀಶ್, ನಿಲೇಶ್, ಗ್ರಾಮದ ಹಿರಿಯ ಮುಖಂಡರಾದ ನೀಲಕಂಠ, ಉದಯಮೂರ್ತಿ, ಶಿಕ್ಷಕ ಶಿವಪ್ಪ, ಆಟೋ ಚಾಲಕರಾದ ಕುಮಾರ್, ಚಂದ್ರು, ಪ್ರವೀಣ್, ಗಣೇಶ್, ಸುನೀಲ್, ಹರೀಶ್, ಮನು ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...