Thursday, March 19, 2026
Thursday, March 19, 2026

Tagaru Palya Movie Review ಕನ್ನಡ ಕಲಾಭಿಮಾನಿಗಳಿಗೆ ರುಚಿಕೊಟ್ಟ ಟಗರುಪಲ್ಯ

Date:

Tagaru Palya Movie Review ಹಳ್ಳಿ ಸೊಗಡಿನ ಕಥೆ ಯನ್ನು ಇಟ್ಟುಕೊಂಡು ಅನೇಕ ಚಿತ್ರಗಳು ಸೂಪರ್ ಹಿಟ್ ಆದ ಉದಾಹರಣೆಗಳಿವೆ.

ಇತ್ತೀಚೆಗೆ ಇಂತಹ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾಗಳು ಕಡಿಮೆ ಆಗಿವೆ… ಈ ಕೊರತೆಯನ್ನು ನಿವಾರಿಸುವ ರೀತಿಯಲ್ಲಿ ಟಗರು ಪಲ್ಯ ಸಿನಿಮಾ ಮೂಡಿ ಬಂದಿದೆ….

ಹೌದು, ಹೊಸ ನಿರ್ದೇಶಕರಾದ ಉಮೇಶ್.ಕೆ.ಕೃಪಾ ಅವರು ಟಗರುಪಲ್ಯ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ….

ನಟ ಡಾಲಿ ಧನಂಜಯ್ ಈ ಕಥೆಗೆ ಬಂಡವಾಳ ಹೂಡಿದ್ದಾರೆ…

ಗ್ರಾಮೀಣ ಭಾಗದಲ್ಲಿ ನಡೆಯುವ ಒಂದು ಆಚರಣೆಯನ್ನು ಕೇಂದ್ರವಾಗಿಟ್ಟುಕೊಂಡು ಈ ಸಿನಿಮಾವನ್ನು ನಿರ್ದೇಶನ ಮಾಡಲಾಗಿದೆ…

ಅರಣ್ಯದೊಳಗಿರುವ ಊರಿನ ದೇವಿಗೆ ಹರಕೆ ತೀರಿಸಲು ಬರುವ ಕುಟುಂಬದ ಕಹಾನಿ ಈ ಸಿನಿಮಾದಲ್ಲಿದೆ…

ಈ ಸಿನಿಮಾದಲ್ಲಿ ನಾಗಭೂಷಣ್ ಅವರು ನಾಯಕ ನಟನಾಗಿ ಅಭಿನಯಿಸಿದ್ದಾರೆ…. ನಾಯಕಿ ನಟಿಯಾಗಿ ಅಮೃತಾ ಪ್ರೇಮ್ ಅವರು ಅಭಿನಯಿಸಿದ್ದಾರೆ… ಮುಖ್ಯ ಭೂಮಿಕೆಯಲ್ಲಿ ರಂಗಾಯಣ ರಘು, ತಾರಾ, ಮಜಾ ಭಾರತ ಖ್ಯಾತಿಯ ಕಲಾವಿದ ಕಾರ್ತಿಕ್,ವಾಸುಕಿ ವೈಭವ್, ಶ್ರೀನಾಥ್ ವಶಿಷ್ಠ, ಚಂದ್ರಕಲಾ ಅವರು ನಟಿಸಿದ್ದಾರೆ…

ಮಲೆನಾಡ ಕಲಾವಿದ ಮಜಾ ಭಾರತದ ಖ್ಯಾತಿಯ ಕಾರ್ತಿಕ್ ಅವರ ನಟನೆ ಎಲ್ಲರ ಗಮನ ಸೆಳೆದಿದೆ ….

ಟಗರು ಪಲ್ಯ ಸಿನಿಮಾದಲ್ಲಿ ಕುರಿಯನ್ನ ಬಲಿಕೊಡುವುದಕ್ಕೆ ಮುಂಚೆ ಆ ಕುರಿ ತಲೆ ಅಲ್ಲಾಡಿಸುವ ಮೂಲಕ ಅನುಮತಿ ನೀಡಬೇಕು… ಆ ಕುರಿ ತಲೆ ಅಲ್ಲಾಡಿಸದ ಹೊರತು ಗುರಿಯನ್ನು ಕಡಿಯುವಂತಿಲ್ಲ ಎಂಬುದು ಜನರ ನಂಬಿಕೆ… ಒಂದು ವೇಳೆ ತಲೆ ಅಲ್ಲಾಡಿಸದಿದ್ದರೆ ಆ ಸಂದರ್ಭ ಹೇಗಿರುತ್ತದೆ ಎಂಬುದನ್ನು ಅಚ್ಚುಕಟ್ಟಾಗಿ ಈ ಸಿನಿಮಾದಲ್ಲಿ ನಿರ್ಮಿಸಿದ್ದಾರೆ…

Tagaru Palya Movie Review ಪಕ್ಕ ಗ್ರಾಮೀಣ ಪ್ರದೇಶದ ಜನರು ಮಾತನಾಡುವ ಭಾಷೆಯನ್ನು ಬಳಕೆ ಮಾಡಲಾಗಿದೆ… ಈ ವಿಚಾರವಾಗಿ ಟಗರು ಪಲ್ಯ ಎಲ್ಲಾ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...