Saturday, September 28, 2024
Saturday, September 28, 2024

Tagaru Palya Movie Review ಕನ್ನಡ ಕಲಾಭಿಮಾನಿಗಳಿಗೆ ರುಚಿಕೊಟ್ಟ ಟಗರುಪಲ್ಯ

Date:

Tagaru Palya Movie Review ಹಳ್ಳಿ ಸೊಗಡಿನ ಕಥೆ ಯನ್ನು ಇಟ್ಟುಕೊಂಡು ಅನೇಕ ಚಿತ್ರಗಳು ಸೂಪರ್ ಹಿಟ್ ಆದ ಉದಾಹರಣೆಗಳಿವೆ.

ಇತ್ತೀಚೆಗೆ ಇಂತಹ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾಗಳು ಕಡಿಮೆ ಆಗಿವೆ… ಈ ಕೊರತೆಯನ್ನು ನಿವಾರಿಸುವ ರೀತಿಯಲ್ಲಿ ಟಗರು ಪಲ್ಯ ಸಿನಿಮಾ ಮೂಡಿ ಬಂದಿದೆ….

ಹೌದು, ಹೊಸ ನಿರ್ದೇಶಕರಾದ ಉಮೇಶ್.ಕೆ.ಕೃಪಾ ಅವರು ಟಗರುಪಲ್ಯ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ….

ನಟ ಡಾಲಿ ಧನಂಜಯ್ ಈ ಕಥೆಗೆ ಬಂಡವಾಳ ಹೂಡಿದ್ದಾರೆ…

ಗ್ರಾಮೀಣ ಭಾಗದಲ್ಲಿ ನಡೆಯುವ ಒಂದು ಆಚರಣೆಯನ್ನು ಕೇಂದ್ರವಾಗಿಟ್ಟುಕೊಂಡು ಈ ಸಿನಿಮಾವನ್ನು ನಿರ್ದೇಶನ ಮಾಡಲಾಗಿದೆ…

ಅರಣ್ಯದೊಳಗಿರುವ ಊರಿನ ದೇವಿಗೆ ಹರಕೆ ತೀರಿಸಲು ಬರುವ ಕುಟುಂಬದ ಕಹಾನಿ ಈ ಸಿನಿಮಾದಲ್ಲಿದೆ…

ಈ ಸಿನಿಮಾದಲ್ಲಿ ನಾಗಭೂಷಣ್ ಅವರು ನಾಯಕ ನಟನಾಗಿ ಅಭಿನಯಿಸಿದ್ದಾರೆ…. ನಾಯಕಿ ನಟಿಯಾಗಿ ಅಮೃತಾ ಪ್ರೇಮ್ ಅವರು ಅಭಿನಯಿಸಿದ್ದಾರೆ… ಮುಖ್ಯ ಭೂಮಿಕೆಯಲ್ಲಿ ರಂಗಾಯಣ ರಘು, ತಾರಾ, ಮಜಾ ಭಾರತ ಖ್ಯಾತಿಯ ಕಲಾವಿದ ಕಾರ್ತಿಕ್,ವಾಸುಕಿ ವೈಭವ್, ಶ್ರೀನಾಥ್ ವಶಿಷ್ಠ, ಚಂದ್ರಕಲಾ ಅವರು ನಟಿಸಿದ್ದಾರೆ…

ಮಲೆನಾಡ ಕಲಾವಿದ ಮಜಾ ಭಾರತದ ಖ್ಯಾತಿಯ ಕಾರ್ತಿಕ್ ಅವರ ನಟನೆ ಎಲ್ಲರ ಗಮನ ಸೆಳೆದಿದೆ ….

ಟಗರು ಪಲ್ಯ ಸಿನಿಮಾದಲ್ಲಿ ಕುರಿಯನ್ನ ಬಲಿಕೊಡುವುದಕ್ಕೆ ಮುಂಚೆ ಆ ಕುರಿ ತಲೆ ಅಲ್ಲಾಡಿಸುವ ಮೂಲಕ ಅನುಮತಿ ನೀಡಬೇಕು… ಆ ಕುರಿ ತಲೆ ಅಲ್ಲಾಡಿಸದ ಹೊರತು ಗುರಿಯನ್ನು ಕಡಿಯುವಂತಿಲ್ಲ ಎಂಬುದು ಜನರ ನಂಬಿಕೆ… ಒಂದು ವೇಳೆ ತಲೆ ಅಲ್ಲಾಡಿಸದಿದ್ದರೆ ಆ ಸಂದರ್ಭ ಹೇಗಿರುತ್ತದೆ ಎಂಬುದನ್ನು ಅಚ್ಚುಕಟ್ಟಾಗಿ ಈ ಸಿನಿಮಾದಲ್ಲಿ ನಿರ್ಮಿಸಿದ್ದಾರೆ…

Tagaru Palya Movie Review ಪಕ್ಕ ಗ್ರಾಮೀಣ ಪ್ರದೇಶದ ಜನರು ಮಾತನಾಡುವ ಭಾಷೆಯನ್ನು ಬಳಕೆ ಮಾಡಲಾಗಿದೆ… ಈ ವಿಚಾರವಾಗಿ ಟಗರು ಪಲ್ಯ ಎಲ್ಲಾ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...