Saturday, September 28, 2024
Saturday, September 28, 2024

Youth Hostel Association of India ಚಾರಣದಿಂದ ಬದುಕಿನಲ್ಲಿ ವಿಶೇಷ ಮನೋಲ್ಲಾಸ

Date:

Youth Hostel Association of India ಪ್ರತಿಯೊಬ್ಬರು ಚಾರಣ ಪ್ರವಾಸದಲ್ಲಿ ಕಾಲ ಕಾಲಕ್ಕೆ ಪಾಲ್ಗೊಳ್ಳುವುದು ಅತ್ಯಂತ ಮುಖ್ಯ ಆಗಿದ್ದು, ನಿತ್ಯದ ಕಾರ್ಯಗಳಿಂದ ಬಿಡುವು ಮಾಡಿಕೊಂಡು ಚಾರಣಗಳಲ್ಲಿ ಭಾಗವಹಿಸುವುದರಿಂದ ಬದುಕಿನಲ್ಲಿ ವಿಶೇಷ ಮನೋಲ್ಲಾಸ, ಉತ್ಸಾಹ ನಮ್ಮದಾಗುತ್ತದೆ ಎಂದು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದ ಅಧ್ಯಕ್ಷ ಎಸ್.ಎಸ್.ವಾಗೇಶ್ ಹೇಳಿದರು.

ತರುಣೋದಯ ಘಟಕದ ಸದಸ್ಯರಿಗಾಗಿ ಏರ್ಪಡಿಸಿದ್ದ ಎರಡು ದಿನದ ಪ್ರವಾಸ ಚಾರಣಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿ ದಿನ ಮಾಡುವ ಕೆಲಸಗಳಿಂದ ಮುಕ್ತಿ ಹೊಂದಿ ಪ್ರವಾಸ ಚಾರಣ ಹೋಗುವುದರಿಂದ ಮನಸ್ಸಿಗೆ ಹಿತ ಮತ್ತು ಸಂತೋಷ ಸಿಗುತ್ತದೆ ಎಂದು ತಿಳಿಸಿದರು.

ಪ್ರಕೃತಿ ಮಡಿಲಿನ ಜಲಪಾತಗಳಲ್ಲಿ ಎಲ್ಲಾ ವಯೋಮಾನದವರು ಮಕ್ಕಳಂತೆ ಆಟವಾಡಲು ಸಿರಿಮನೆ ಮತ್ತು ಬಂಡಜ್ಜೆ ಜಲಪಾತಕ್ಕೆ ಚಾರಣ ಏರ್ಪಡಿಸಲಾಗಿದೆ. ಶೃಂಗೆರಿ, ಕಳಸ, ಹೊರನಾಡು ಮುಂತಾದ ಪ್ರಸಿದ್ದ ಪವಿತ್ರ ಸ್ಥಳಗಳ ಭೇಟಿ ಇರಲಿದೆ. ಈ ಕಾರ್ಯಕ್ರಮದ ಮುಂದಾಳತ್ವವನ್ನು ಎಸ್.ಉಮೇಶ್ ಮತ್ತು ಮಮತ ಅವರು ವಹಿಸಿಕೊಂಡಿದ್ದು, ಕಾರ್ಯಕ್ರಮದ ರೂವಾರಿ ಸುರೇಶ್ ಕುಮಾರ್, ಮಲ್ಲಿಕಾರ್ಜುನ್ ವಹಿಸಿಕೊಂಡಿದ್ದಾರೆ ಎಂದರು.

Youth Hostel Association of India ಮುಖ್ಯ ಅತಿಥಿಯಾಗಿ ಆಗಮಿಸಿದ ವೈಎಚ್‌ಎಐ ರಾಜ್ಯ ಮಾಜಿ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಯಾವುದೇ ವಾಹನ ಹೋಗದ ಸ್ಥಳಗಳಿಗೆ ಒಬ್ಬ ಚಾರಣಿಗ ಹೋಗಿ ಪ್ರಕೃತಿ ಸೌಂದರ್ಯ ಸವಿಯಬಹುದಾಗಿದ್ದು, ಅರಣ್ಯ ಇಲಾಖೆಯ ಬಿಗಿ ಭದ್ರತೆಯಲ್ಲಿ ಸುಂದರ ಸ್ಥಳಗಳ ವೀಕ್ಷಣೆಗೆ ಯೂತ್ ಹಾಸ್ಟೆಲ್ಸ್ ಅನುಕೂಲ ಮಾಡಿ ಕೊಡುತ್ತಿದ್ದು, ಇದರ ಸದುಪಯೋಗವನ್ನು ನಾಗರೀಕರು ಪಡೆಯ ಬೇಕು ಎಂದು ತಿಳಿಸಿದರು.

ಡಾ. ಅಶೋಕ್, ಸುರೇಶ್, ಧಾನಮ್ಮ, ಡಾ. ಶಾಂತಾಶೇಖರ್ ಮುಂತಾದ ಐವತ್ತು ಸದಸ್ಯರ ತಂಡ ಭಾಗವಹಿಸಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...