Monday, February 2, 2026
Monday, February 2, 2026

Chaudeshwari Temple ಚಾಲುಕ್ಯ ನಗರ ಚೌಡೇಶ್ವರಿ ನವರಾತ್ರಿ ಉತ್ಸವ ಸಂಪನ್ನ

Date:

Chaudeshwari Temple ಶಿವಮೊಗ್ಗ ನಗರದ ಚಾಲುಕ್ಯನಗರದ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಅ 15 ರಿಂದ ಅ.24ರವರೆಗೆ ಸಂಭ್ರಮದ ನವರಾತ್ರಿ ಸಂಪನ್ನಗೊಂಡಿದೆ.

ಪ್ರತಿನಿತ್ಯ ಸಹ ದೇವಿಗೆ ವಿವಿಧ ಅಲಂಕಾರ , ಬೆಳಿಗ್ಗೆ 10 ರಿಂದ ಹೋಮ ಪ್ರಾರಂಭವಾಗಿ 12.30ಕ್ಕೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಹಾಗೂ ಪ್ರತಿನಿತ್ಯ ಸಂಜೆ 6:30ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಉಯ್ಯಾಲೇ ಸೇವೆಯನ್ನು ಏರ್ಪಡಿಸಲಾಗಿತ್ತು.

ಅ.24 ರಂದು ಸಂಜೆ 6:30ಕ್ಕೆ ಮಂಗಳವಾದ್ಯಗಳೊಂದಿಗೆ ಚಾಲುಕ್ಯನಗರ ಮುಖ್ಯದ್ವಾರದಿಂದ ಮೆರವಣಿಗೆಯೊಂದಿಗೆ ಬನ್ನಿಮಂಟಕ್ಕೆ ತಲುಪಿ, ಅರ್ಚಕರಾದ ಚೇತನಭಟ್ ನೇತೃತ್ವದಲ್ಲಿ ಜಯರಾಮ್ ಕಾಮತ್‌ರವರು ಬನ್ನಿ ವೃಕ್ಷಕ್ಕೆ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಿಡಿ ಮದ್ದು ಪದರ್ಶನ ನೀಡಲಾಯಿತು.
ತಾಯಿ ಚೌಡೇಶ್ವರಿಗೆ ಬನ್ನಿ ಸಮರ್ಪಿಸಿ ದೇವಿಗೆ ಮಹಾಮಂಗಳಾರತಿ, ಬಂದಂತಹ ಭಕ್ತಾದಿಗಳಿಗೆ ಬನ್ನಿ ವಿತರಣೆ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಯಿತು.

Chaudeshwari Temple ಈ ಸಂದರ್ಭದಲ್ಲಿ ಅಡಳಿತ ಮಂಡಳಿ, ಅರ್ಚಕವೃಂದ, ಚಾಲುಕ್ಯನಗರ ಸೇರಿದಂತೆ ದೇವಿಯ ಸಾವಿರದ ಐನ್ನೂರುಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಂಡಿದ್ದರು.
ಸಂಭ್ರಮದ ನವರಾತ್ರಿಉತ್ಸವಕ್ಕೆ ಸಹಕರಿಸಿದ ಎಲ್ಲರಿಗೂ ಶ್ರೀ ಚೌಡೇಶ್ವರಿ ಅಮ್ಮನವರ ಆಡಳಿತ ಮಂಡಳಿ ಧನ್ಯವಾದ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...