Saturday, September 28, 2024
Saturday, September 28, 2024

Nature Conservation Trust ಜೀವರಾಶಿಗಳ ಉಳಿವಿಗೆ ಅಣುಬಾಂಬ್ ಗಳು ನಿಷೇಧವಾಗಬೇಕು-ಡಾ.ಕೆ.ಸುಂದರಗೌಡ

Date:

Nature Conservation Trust ಜಗತ್ತಿನ ಜೀವರಾಶಿಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಂದು ರಾಷ್ಟç ಗಳು ಅಂಣುಬಾಂಬ್‌ಗಳ ಬಳಕೆಯನ್ನು ನಿಷೇಧಿಸುವ ಮೂಲಕ ಹೆಚ್ಚು ಆದ್ಯತೆಯನ್ನು ಪರಿಸರಕ್ಕೆ ಪೂರಕವಾಗಿ ರುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ನೇಚರ್ ಕನ್ಸರ್‌ವೇಷನ್ ಟ್ರಸ್ಟ್ ಅಧ್ಯಕ್ಷ ಡಾ|| ಕೆ.ಸುಂದರಗೌಡ ಹೇಳಿದ್ದಾರೆ.

ಈ ಸಂಬಂಧ ಹೇಳಿಕೆಯಲ್ಲಿ ತಿಳಿಸಿರುವ ಅವರು ಜೀವರಾಶಿಗಳನ್ನು ಉಳಿಸುವ ಸಲುವಾಗಿ ಅಣು ಬಾಂಬ್‌ಗಳು ನಿಷೇಧವಾಗಬೇಕು. ವಿಶ್ವದ ನಾಯಕರು ಶಾಂತಿಗೆ ದುಡಿಯುವ ಮುಖಾಂತರ ವಿಶ್ವ ಸಹೋದರತೆ, ಸ್ನೇಹವನ್ನು ಎಲ್ಲಾ ಜನಾಂಗಗಳಲ್ಲೂ ಬಿತ್ತುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

ಇಂದಿನ ತಾಪಮಾನ ಏರಿಕೆಯಿಂದ ನರಕವಾಗಿ ಪರಿಣಾಮಿಸುತ್ತಿರುವ ಭೂಮಿಯನ್ನು ನಿಭಾಯಿಸಲು ನಾಗ ರೀಕ ಜನಾಂಗ ಪರಿಸರಕ್ಕೆ ಒತ್ತು ನೀಡಿ ಸಹಕರಿಸಬೇಕು. ಮುಂದಿನ ಯಾವುದಾದರೂ ಅನಾಹುತಗಳನ್ನು ಸಂಭವಿ ಸುವ ಮೊದಲೇ ಎಲ್ಲಾ ರಾಷ್ಟçಗಳು ಜೊತೆಗೂಡಿ ವಿಶ್ವಮಟ್ಟದಲ್ಲಿ ಪರಿಸರ ಬೀಜ ಬಿತ್ತಿದಾಗ ಮಾತ್ರ ಜೀವ ಜಂತು ಗಳು ಉಳಿಯುವಿಕೆಗೆ ಸಾಧ್ಯ ಎಂದು ಕಿವಿಮಾತು ಹೇಳಿದ್ದಾರೆ.
ವಿಶ್ವದಲ್ಲಿ ಹಸಿರು ಕವಚ ಬೆಳೆದಲ್ಲಿ ಮಾತ್ರ ಭೂಮಿ ಉಳಿದಿತು, ಭೂಮಿ ಉಳಿದರೆ ನಾವು ಉಳಿದೇವು ಎಂಬ ಧ್ಯೇಯೋದ್ದೇಶದೊಂದಿಗೆ ಜಗತ್ತಿನ ರಾಷ್ಟçಗಳು ಮುನ್ನೆಡೆದರೆ ಮುಂದಿನ ಜನಾಂಗಕ್ಕೆ ಪರಿಸರಭರಿತ ಜಗತ್ತನ್ನು ಕೊಡುಗೆಯಾಗಿ ನೀಡಲು ಸಾಧ್ಯ ಎಂದಿದ್ದಾರೆ.

ಮುಂದಿನ ದಿನಗಳಲ್ಲಿ ದೀಪಾವಳಿ ಆಚರಣೆ ಎಲ್ಲೆಡೆ ಸಂಭ್ರಮಚರಿಸುತ್ತಿದ್ದು ಪರಿಸರಕ್ಕೆ ಪೂರಕವಾಗಿ ಆಚರಿಸು ವಂತೆ ಮಠ ಮಂದಿರಗಳು, ಇನ್ನಿತರೆ ಪೂಜಾ ಕ್ಷೇತ್ರಗಳು ತಿಳಿಸುವಂತಾಗಬೇಕು. ಅತಿಯಾದ ಪಟಾಕಿ ಯಿಂದ ವಾಯುಮಾಲಿನ್ಯವಾಗುವ ಜೊತೆಗೆ ಮಾನವ ಜನಾಂಗ ನಾಶ ದತ್ತ ಕೊಂಡೊಯ್ಯುವ ಮಾಹಿತಿಯನ್ನು ನಾಗರೀ ಕರಿಗೆ ಮುಟ್ಟಿಸಬೇಕು ಎಂದು ಮನವಿ ಮಾಡಿದ್ದಾರೆ.

Nature Conservation Trust ಸರ್ಕಾರಗಳು ಪಟಾಕಿ, ಸಿಡಿಮದ್ದುಗಳಿಂದಾಗುವ ಪರಿಣಾಮ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವ ಜೊತೆಗೆ ಪರಿಸರ ಪೂರಕವಾಗಿ ದೀಪಾವಳಿ ಆಚರಿಸುವಂತೆ ಸೂಚನೆ ನೀಡಬೇಕು. ಆ ನಿಟ್ಟಿನಲ್ಲಿ ಪ್ರಾರ್ಥನಾ ಮಂದಿರಗಳು ದೀಪಾವಳಿಯನ್ನು ಪರಿಸರಸ್ನೇಹಿಯಾಗಿ ಆಚರಿಸಲು ಭಕ್ತಾಧಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...