Sunday, December 14, 2025
Sunday, December 14, 2025

Uttaradi Math ಗೋವು ಒಂದು ರೀತಿಯಲ್ಲಿ ಮೊಬೈಲ್ ದೇವಸ್ಥಾನವಿದ್ದಂತೆ- ಶ್ರೀಸತ್ಯಾತ್ಮತೀರ್ಥರು

Date:

Uttaradi Math ಸಕಲ ದೇವತೆಗಳ ಒಂದು ಮಂದಿರ ಎಂದರೆ ಗೋವು. ಎಲ್ಲ ದೇವತೆಗಳ ಸಂಚಾರಿ ಮಂದಿರ ಎನ್ನಿಸಿದೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.

ಹೊಳೆಹೊನ್ನೂರಿನಲ್ಲಿ ಶನಿವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮ ತೀರ್ಥರ ವ್ಯಾಖ್ಯಾನಾಧಾರಿತ ಮಹಾಭಾರತ ವಿರಾಟ ಪರ್ವದ ಅನುಗ್ರಹ ಸಂದೇಶದ ನೀಡಿದರು.

ಗೋವು ಒಂದು ರೀತಿಯಲ್ಲಿ ಮೊಬೈಲ್ ದೇವಸ್ಥಾನ ಇದ್ದಂತೆ. ಇಂತಹ ಗೋವುಗಳ ಪಾಲನೆಯನ್ನು ಎಲ್ಲರೂ ಕಡ್ಡಾಯವಾಗಿ ಮಾಡಲೇಬೇಕು. ಗೋವುಗಳ ರಕ್ಷಣೆಯನ್ನು ಮಾಡಬೇಕು. ಆಕಳಿನ ಸಾಧುಗುಣದ ದುರುಪಯೋಗ ಆಗುತ್ತಿದೆ. ಗೋವಿನ ರಕ್ಷಣೆಗೆ ಪ್ರತಿಯೊಬ್ಬರೂ ಗೋಪಾಲಕರಾಗಬೇಕು ಎಂದರು.

ಶಾಸ್ತ್ರದಲ್ಲಿ ಆಚಾರಕ್ಕೆ ಅತ್ಯಂತವಾದ ಮಹತ್ವವಿದೆ. ಶುದ್ಧಿಯನ್ನು ಕಾಪಾಡಿಕೊಳ್ಳಬೇಕು. ಸತ್ಕಾರ್ಯಗಳನ್ನು ಮಾಡುವಾತಗೆ ಶೌಚ ತುಂಬಾ ಮುಖ್ಯ. ಶೌಚವೆಂದರೆ ಕೇವಲ ಸ್ನಾನ ಮಾಡುವುದಲ್ಲ. ಸ್ನಾನವೂ ಬೇಕು ಜೊತೆಗೆ ಮನಸ್ಸೂ ಶುದ್ಧವಾಗಿರಬೇಕು ಎಂದರು.

ಪಾಪಗಳನ್ನು ಕಳೆದುಕೊಳ್ಳಬೇಕು :
ಗಂಗಾಲಹರಿ ಕುರಿತು ಪ್ರಚವನ ನೀಡಿದ ಪಂಡಿತ ವೆಂಕಟೇಶಾಚಾರ್ಯ, ದೇಹಕ್ಕೆ ಹೃದಯ ಸೇರಿದಂತೆ ಅವಯವಗಳು ಹೇಗೆ ಅಂಟಿಕೊoಡಿವೆಯೋ ಹಾಗೆಯೇ ನಾವು ಮಾಡಿದ ಪಾಪಗಳೂ ನಮಗೆ ಅಂಟಿಕೊoಡಿರುತ್ತವೆ. ಇದು ನಾಶವಾಗಬೇಕಾದರೆ ಗಂಗಾ ಸ್ನಾನ ಮಾಡಬೇಕು. ಹರಿ ನಿವೇದಿತವಾದ ಆಹಾರ ಸೇವಿಸಬೇಕು. ದೇವರ ಕಥೆಗಳನ್ನು ಕೇಳಬೇಕು. ಸದಾ ದೇವರ ಧ್ಯಾನದಲ್ಲಿರಬೇಕು ಎಂದರು.

ಜಗನ್ನಾಥ ದಾಸರ ಆರಾಧನೆಯ ಪ್ರಯುಕ್ತವಾಗಿ ಸಂಪೂರ್ಣ ಹರಿಕಥಾಮೃತಸಾರದ ಪಾರಾಯಣ ನಡೆಯಿತು.

Uttaradi Math ಪೂಜಾ ಕಾಲದಲ್ಲಿ ಪ್ರಕಾಶಾಚಾರ್ಯ ಸವಣೂರು ಪ್ರವಚನ ನೀಡಿದರು.
ಪಂಡಿತ ಪೂಜ್ಯರಾದ ಗುತ್ತಲ ರಂಗಾಚಾರ್ಯ, ಮಠದ ದಿವಾನರಾದ ಶಶಿ ಆಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ನವರತ್ನ ರಾಮಾಚಾರ್ಯ, ಕಡೂರು ಮಧುಸೂಧನಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ವಾದಿರಾಜ ಅಗ್ನಿಹೋತ್ರಿ, ಮಧುಸೂಧನ ನಾಡಿಗ್, ಸಿ.ಪಿ. ವಾದಿರಾಜ, ಗುರುರಾಜ ಕಟ್ಟಿ, ರಾಮಧ್ಯಾನಿ ಅನಿಲ್, ಮುರಳಿ, ಸತ್ಯನಾರಾಯಣ ನಾಡಿಗ್, ಧೃವಾಚಾರ್, ಜಯತೀರ್ಥ ಬೆಂಗಳೂರು, ಶ್ರೀಪಾದ್ ಶಿವಮೊಗ್ಗ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...