Press Distributors Day ಕರ್ನಾಟಕ ರಾಜ್ಯ ಪತ್ರಿಕ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಪತ್ರಿಕಾ ವಿತರಕರ ದಿನಾಚರಣೆಯನ್ನು ಕೇಕ್ ಕತ್ತರಿಸುವ ಹಾಗೂ ಪತ್ರಿಕಾ ವಿತರಕರವರನ್ನು ಸನ್ಮಾನಿಸುವ ಮೂಲಕ ಸರಳ ರೀತಿಯಲ್ಲಿ ಆಚರಿಸಲಾಯಿತು.
ವಿಜಯ ಕರ್ನಾಟಕದ ವಿತರಕರಾದ ಸತೀಶ್ ಕೆ ಆರ್ ಹಾಗೂ ಪ್ರಜಾವಾಣಿ ಪತ್ರಿಕೆಯ ವಿತರಕರಾದ ಮಂಜುನಾಥ್ ಪಟೇಲ್ ಹಾಗೂ ಶಿವಣ್ಣ ಇವರನ್ನು ಸನ್ಮಾನಿಸಲಾಯಿತು.
Press Distributors Day ಈ ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷರಾದ ಎನ್. ಮಾಲತೇಶ್ ಉಪಾಧ್ಯಕ್ಷರಾದ ರಾಮು.ಜಿ ಪ್ರಧಾನ ಕಾರ್ಯದರ್ಶಿಯಾದ ಮುಕ್ತಾರ್ ಅಹಮದ್ (ನಜೀರ್) ನಿರ್ದೇಶಕರುಗಳಾದ ಪ್ರವೀಣ್ ಕುಮಾರ್ ಸೈಯದ್ ಶರಫ್ ಬಸ್ ಮಂಜು ಅಜೀಝುಲ್ಲಾ ಸದಸ್ಯರುಗಳಾದ ನವೀನ್ ಕುಮಾರ್ ಶ್ರೀಧರಮೂರ್ತಿ ಕನ್ನಡಪ್ರಭ ಏಜೆಂಟರಾದ ಯೋಗೇಶ್ ಪಿ ಎಸ್ ಕಿರಣ ಸೂರಿ ಪ್ರಶಾಂತ ಸುಬ್ರಮಣ್ಯ ಹಾಗೂ ದಿಹಿಂದೂ ಮತ್ತು ಉದಯವಾಣಿ ಪತ್ರಿಕೆಯ ಏಜೆಂಟರಾದ ಯುವರಾಜ್ ಮತ್ತು ಜೈನ್ ಸ್ಟಾರ್ ಮಾಲೀಕರಾದ ಕೆ. ರಾಜವರ್ಮ ಜೈನ್ ಹಾಗೂ ಪತ್ರಿಕಾ ವಿತರಕರು ಹಾಜರಿದ್ದು. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿತು.