Friday, March 20, 2026
Friday, March 20, 2026

Shimoga Cycle Club ಕ್ರೀಡೆಯಿಂದ ಸದೃಢ ದೇಹ& ಉತ್ತಮ ಆರೋಗ್ಯ-ಅನಿಲ್ ಕುಮಾರ್ ಬೊಮ್ಮರೆಡ್ಡಿ

Date:

Shimoga Cycle Club ಆರೋಗ್ಯವಾಗಿರಲು ಎಲ್ಲರೂ ಕ್ರೀಡಾ ಚಟುವಟಿಕೆ ಗಳಲ್ಲಿ ಪಾಲ್ಗೊಂಡರೆ ಸದೃಡ ದೇಹ ಉತ್ತಮ ಆರೋಗ್ಯ ಹೊಂದಲು ಸಾದ್ಯ ಎಂದು ರಾಷ್ರೀಯ ದಿನಾಚರಣೆ ಅಂಗವಾಗಿ ಕ್ರೀಡಾ ಭಾರತಿ, ಶಿವಮೊಗ್ಗ ಸೈಕಲ್ ಕ್ಲಬ್ ಆಯೋಜಿಸಿದ್ದ ಸೈಕಲ್ ಸ್ವರ್ಧೆ ಉದ್ಘಾಟಿಸಿದ ಅನೀಲ್ ಕುಮಾರ್ ಬೊಮ್ಮರೆಡ್ಡಿ, ಅಡಿಷನಲ್ ಎಸ್.ಪಿ.ಯವರು ಮಾತನಾಡುತ್ತಿದ್ದರು.

ಸೈಕಲ್ ಕೂಡ ಉತ್ತಮ ಕ್ರೀಡೆ, ಮನುಷ್ಯ ಯಾವುದಾದರೂ ಒಂದು ಕ್ರೀಡೆ ಆಯ್ಕೆ ಮಾಡಿ ಕೊಳ್ಳಲೇ ಬೇಕು, ನಡೆಯುವುದು, ಓಡುವುದು, ಯೋಗ, ಬ್ಯಾಟ್ ಮಿಟನ್, ಕ್ರಿಕೇಟ್ ಹಿಗೆ ಅನೇಕ ಅಭ್ಯಾಸಗಳಿವೆ. ನನಗೆ ಮನಃಶಾಂತಿ ಮತ್ತು ಉತ್ತಮ ಆರೋಗ್ಯ ದೊರಕಿರುವುದು ಸೈಕ್ಲಿಂಗ್ ನಿಂದ, ಇಂದು ಶಿವಮೊಗ್ಗದಲ್ಲಿ ಉತ್ತಮ ಸೈಕ್ಲಿಸ್ಟ್ ನನಗೆ ದೊರಕಿದ್ದಾರೆ, ಇಲ್ಲಿ ಈ ಕಾರ್ಯಕ್ರಮ ಉದ್ಘಾಟಿಸಲು ಸಂತೋಷವಾಗುತ್ತದೆ ಎಂದರು.

ಸೈಕಲ್ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಮಾತನಾಡಿ, ಶಿವಮೊಗ್ಗ ದಲ್ಲಿ ಯಾವುದೇ ಕಾರ್ಯಕ್ರಮ ವಿರಲಿ ಜನಸಾಮಾನ್ಯರಿಗೆ ತಿಳುವಳಿಕೆ ಮೂಡಿಸಲು ಸೈಕಲ್ ಜಾತ ಏರ್ಪಡಿಸುತ್ತಾರೆ, ನಮ್ಮ ಕ್ಲಬ್ ನ ಎಲ್ಲಾ ಸದಸ್ಯರು ಉತ್ತಮವಾಗಿ ಸ್ವಂದಿಸಿ ಆ ಕಾರ್ಯಕ್ರಮ ಯಶಸ್ವಿಗೊಳಿಸಿ ಕೊಡುತ್ತಾರೆ. ಇಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದೇವೆ, ಅದನ್ನು ಯಶಸ್ವಿಗೊಳಿಸಲು, ಸ್ವರ್ಧಿಗಳು ಸಜ್ಜು ಗೊಂಡಿದ್ದಾರೆ, ಅವರೆಲ್ಲರಿಗೂ ಅಭಿನಂದಿಸುತ್ತೇನೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕ್ರೀಡಾಭಾರತಿಯ ನಾಗರಾಜ್ ಮಾತನಾಡುತ್ತ, ಹಲವಾರು ವರ್ಷಗಳಿಂದ ಸಮಾಜ ಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಈ ಬಾರಿ ಹೊಸಬಗೆಯಾಗಿ ಸೈಕಲ್ ರೇಸ್ ಆಯೋಜಿಸಿದ್ದೇವೆ, ಉತ್ತಮ ಪ್ರತಿಕೃಯೆ ದೊರಕಿದೆ ಎಂದರು.

ಸ್ವರ್ಧೆಯ ರೂಪ ರೇಷೆಯನ್ನು ಹರೀಶ್ ಪಾಟೀಲ್ ಸೂಚಿಸಿದರು.

Shimoga Cycle Club ಜಿ.ವಿಜಯಕುಮಾರ್ ನಿರೂಪಿಸಿ, ಕ್ರೀಡಾಭಾರತಿ ಕಾರ್ಯದರ್ಶಿ ರಾಘವೇಂದ್ರ ಸ್ವಾಗತಿಸಿ, ಸೈಕಲ್ ಕ್ಲಬ್ ಕಾರ್ಯದರ್ಶಿ ಗಿರೀಶ್ ಕಾಮತ್ ವಂದಿಸಿದರು, ತರುಣೋದಯ ಘಟಕದ ಛೇರ್ಮನ್ ಎಸ್.ಎಸ್.ವಾಗೇಶ್, ಸುರೇಶ್ ಕುಮಾರ್, ಹರೀಶ್ ಕಾರ್ಣಿಕ್,
ಎಸ್.ದತ್ತಾತ್ರಿ, ನರಸಿಂಹ ಮೂರ್ತಿ, ಲೋಕೇಶ್ವರ ಕಾಳೆ, ನಾಗಭೂಷಣ್, ರವೀಂದ್ರ, ಯಶ್ವಂತ್ ಇದ್ದರು, ಮೂರು ವಿಭಾಗದಲ್ಲಿ ಸುಮಾರು ಐವತ್ತು ಸೈಕಲೀಸ್ಟ್ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...