Monday, February 2, 2026
Monday, February 2, 2026

Raghavendra Aradhana ಭರಮಸಾಗರದಲ್ಲಿ ಶ್ರೀರಾಯರ ಆರಾಧನಾ ಮಹೋತ್ಸವ

Date:

Raghavendra Aradhana ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವ ದಿನಾಂಕ 31 -8-2023 ರಿಂದ 02-09-2023. ಪ್ರತಿ ವರ್ಷದಂತೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ವಿಶ್ರಾಂತಿ ಗೃಹ ಐದನೇಯ ಮಂತ್ರಾಲಯ ಭರಮಸಾಗರದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ ಆರಾಧನೆ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು.

ದಿನಾಂಕ 31-8-2023 ರಂದು ಶ್ರೀ ಗುರು ರಾಯರ ಆರಾಧನಾ ಕಳಸ ಸ್ಥಾಪನೆ, ಪೂರ್ವಾರಾಧನೆ ಪೂಜಾಕಲಾಪಗಳು, ಪಂಚಾಮೃತಾಬಿಷೇಕ, ಪ್ರಸಾದ ವಿತರಣೆ. ನೆಡೆಯಿತು. ಸಂಜೆ ಸ್ಥಳೀಯ ದುರ್ಗಾಭಿಕಾ ಮಹಿಳಾ ಸದಸ್ಯರಿಂದ ಭಜನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ದಿನಾಂಕ 01-09-2023 ರಂದು ಮಧ್ಯ ಆರಾಧನೆ , ವಿಶೇಷ ಫಲ ಪಂಚಾಮೃತ ಅಭಿಷೇಕ ಮತ್ತು ರುದ್ದರಾಭಿಷೇಕ, ನೂತನ ವಸ್ರ್ರಾಧಾರಣೆ, ಗುರುಬಿಕ್ಷ, ಗುರು ಪಾದಕೆ ಪೂಜೆ, ಪುಷ್ಪ ಅಲಂಕಾರ, ಶ್ರೀ ಭೂತರಾಜರಿಗೆ ಅಭಿಷೇಕ ಮತ್ತು ಅಲಂಕಾರ. ಮಧ್ಯ ಆರಾಧನಾ ಪೂಜಾಕಲಾಪಗಳು, ಪ್ರಸಾದ ವಿತರಣೆ. ನೆಡೆಯಿತು. ಸಂಜೆ ಗುರುದರ್ಶನದ ಭಕ್ತರಿಂದ ಭಕ್ತಿ ಸಂಗೀತ ಮತ್ತು ಭಜನೆ ಆಯೋಜಿಸಲಾಗಿತ್ತು.

ದಿನಾಂಕ 02-09-2023 ರಂದು ಶನಿವಾರ , ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಉತ್ತರ ಆರಾಧನೆ ವಿಶೇಷವಾಗಿ ಶ್ರೀ ರಾಯರ ಬೃಂದಾವನ ಕ್ಕೆ ರುದ್ರಾಭಿಷೇಕ ಮಹಿಳೆಯರಿಂದ ಸುಮಂಗಲಿ ಪೂಜೆ, ಅರಿಷಿಣ ಕುಂಕುಮ ಸಮರ್ಪಣೆ, ಶ್ರೀ ಸತ್ಯನಾರಾಯಣ ಪೂಜೆ, ಸರ್ವ ಸಮರೋಪನೋತ್ಸವ, ಶ್ರೀ ಭೂತರಾಜರಿಗೆ ಅಭಿಷೇಕ ಮತ್ತು ಅಲಂಕಾರ, ಪ್ರಸಾದ ವಿತರಣೆ. ನೆರವೇರಿತು.

ಸಂಜೆ ಭರಮಸಾಗರದ ಸಾಯಿ ಙಕ್ತ ಮಂಡಲಿಯ ಸದಸ್ಯರಿಂದ ಸಾಯಿ ಭಜನೆ ಕಾರ್ಯಕ್ರಮ ಭಕ್ತರಿಂದ ಭಕ್ತಿ ಗೀತೆಗಳು, ಗುರು ಭಜನೆ ಮತ್ತು ಮಂಗಳಾರತಿ ಲಾಲಿ ಸೇವೆಯನ್ನು ನೆರವೇರಿಸಲಾಯಿತು.

ಭರಮಸಾಗರದ ರಾಯರ ವಿಶ್ರಾಂತಿ ಗೃಹ ಕ್ಕೆ ಜಾತಿಬೇದವಿಲ್ಲದೆ ನಂಬಿ ಬಂದ ಭಕ್ತರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದಂತೆ ಕಾರ್ಯಕ್ರಮದಲ್ಲಿ ಹೊಳಲ್ಕೆರೆ ಶಾಸಕರಾದ ಶ್ರೀ ಚಂದ್ರಪ್ಪ ನವರು ಸಹ ಪ್ರತಿವರ್ಷದಂತೆ ಕಾರ್ಯಕ್ರಮದಲ್ಲಿ ಹಾಜರಾಗಿ ಆಶೀರ್ವಾದ ಪಡೆದರು.

Raghavendra Aradhana ಮುರುಳಿಧರ್ ನಾಡಿಗೇರ್
ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ವಿಶ್ರಾಂತಿ ಗೃಹ , ಐದನೇಯ ಮಂತ್ರಾಲಯ. ಭರಮಸಾಗರ
ಚಿತ್ರದುರ್ಗ ತಾ ಮತ್ತು ಜಿಲ್ಲೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...