Monday, December 15, 2025
Monday, December 15, 2025

Uttaradi Mutt ದೇವರನ್ನ ಸ್ತುತಿಸಿದರೆ ಯಾವ ಆಪತ್ತೂ ಬರುವುದಿಲ್ಲ- ಶ್ರೀಸತ್ಯಾತ್ಮ ತೀರ್ಥರು

Date:

Uttaradi Mutt ಸಜ್ಜನರಿಗೆ ಸುಖ ಆಗಬೇಕು ಎಂಬ ಏಕಮಾತ್ರ ಉದ್ದೇಶದಿಂದ ಪರಮಾತ್ಮ ದುರ್ಜನರ ನಾಶ ಮಾಡುತ್ತಾನೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.

ಬುಧವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.

ನಾವು ಕೂಡ ಸಜ್ಜನರಾಗಬೇಕು. ಹೀಗಾಗಿ ನಿತ್ಯದಲ್ಲಿ ದೇವರ ಪೂಜೆ ಮಾಡಿ, ಪ್ರಾರ್ಥಿಸಬೇಕು. ದೇವರ ಉಪಕಾರ ಸ್ಮರಿಸಿ, ಆತನ ಗುಣಗಳ ಸ್ತೋತ್ರ ಮಾಡಬೇಕು. ಆಗ ಯಾವ ಆಪತ್ತೂ ಬರುವುದಿಲ್ಲ. ಸಾಧನ ಶರೀರ ಇದ್ದಾಗ ಮಾತ್ರ ದೇವರ ಚಿಂತನೆ, ಪೂಜೆ ಸಾಧ್ಯ. ಇಂತಹ ಮಾನವ ಜನ್ಮ ಇದ್ದಾಗಲೂ ದೇವರ ಸ್ಮರಣೆ ಬಾರದಿದ್ದರೆ ಯಾವ ಪ್ರಯೋಜನ ಇಲ್ಲ ಎಂದರು.

ಈ ಜನ್ಮವೇ ಉಪಕಾರ :
ಪಂಡಿತ ಅನ್ವೇಷಾಚಾರ್ಯ ಸರಸ್ವತಿ ಮಾತನಾಡಿ, ಭಗವಂತ ನಮಗೆ ಮಾಡುವ ಅನಂತ ಉಪಕಾರವನ್ನು ಸದಾ ಸ್ಮರಣೆ ಮಾಡಬೇಕು. ಮಾನವ ಜನ್ಮ ಕೊಟ್ಟ ಅತಿ ದೊಡ್ಡ ಉಪಕಾರ. ಅದರಲ್ಲೂ ಇಂತಹ ಗುರುಗಳ ಶಿಷ್ಯರಾಗಿರುವುದು ಕೂಡ ಭಗವಂತ ಮಾಡಿದ ಮಹದುಪಕಾರ ಎಂದರು.

Uttaradi Mutt ಇಂತಹ ಉಪಕಾರ ಮಾಡಿದ ಭಗವಂತನಿಗೆ ನಾವು ಪ್ರತ್ಯುಪಕಾರ ಮಾಡುವುದು ಹೇಗೆ? ಆದರೆ ನಾವು ಪ್ರತ್ಯುಪಕಾರ ಅಲ್ಲ. ದೇವರಿಗೆ ಅಪಚಾರ ಮಾಡುತ್ತೇವೆ. ಇದು ಪಾಪ ಯೋಗ್ಯವಾದದ್ದು. ಸರ್ವಥಾ ಹೀಗೆ ಮಾಡದೆ. ದೇವರ ಉಪಕಾರದ ಸ್ಮರಣೆ ಮಾಡಬೇಕು ಎಂದರು.

ರಾಮೇಶ್ವರದಿಂದ ಆಗಮಿಸಿದ್ದ ಪಂಡಿತ ವಿದ್ಯಾಶಾಚಾರ್ಯ ಕುಲಕರ್ಣಿ ಹೈದರಾಬಾದ್‌ನ ನಾಗೇಂದ್ರ ಪ್ರಸಾದಾಚಾರ್ಯ ಪ್ರವಚನ ನೀಡಿದರು.

ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಕಾರ್ಯದರ್ಶಿ ಗುರುರಾಜ, ದಿವಾನರಾದ ಶಶಿ ಆಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಸತ್ಯನಾರಾಯಣ ನಾಡಿಗ್, ಮುರಳಿ, ರಾಮಧ್ಯಾನಿ ಅನಿಲ್ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...