Monday, December 15, 2025
Monday, December 15, 2025

IMA Shivamogga ಶಿವಮೊಗ್ಗ ಐಎಂಎ ಆಶ್ರಯದಲ್ಲಿ ವಿಶಿಷ್ಟ ಚಾಯ್ ಪೆ ಚರ್ಚಾ ಕಾರ್ಯಕ್ರಮ

Date:

IMA Shivamogga ಐಎಂಎ ಶಿವಮೊಗ್ಗದಿಂದ ವಿಶಿಷ್ಟವಾದ ಚಾಯ್ ಪೆ ಚರ್ಚಾ ಕಾರ್ಯಕ್ರಮವನ್ನು ನಡೆಸಲಾಯಿತು.

ಇದರಲ್ಲಿ ಪ್ರತಿಭಾವಂತ ಹಿರಿಯ ಸದಸ್ಯ , ಫಿಸಿಷಿಯನ್ ಡಾ. ಶ್ರೀಕಾಂತ್ ಎನ್ ಹೆಗ್ಡೆ ಅವರೊಂದಿಗೆ ಅನೌಪಚಾರಿಕ ಸಂವಾದವನ್ನು ನಡೆಸಲಾಯಿತು ಮತ್ತು ಅವರ ಹಕ್ಕಿಗಳ ಛಾಯಾಚಿತ್ರ ಹವ್ಯಾಸವನ್ನು ಪ್ರದರ್ಶಿಸಲಾಯಿತು.

ಇಂತಹ ಕಾರ್ಯಕ್ರಮದ ಗುರಿ ಕಿರಿಯ ವೈದ್ಯ ಸದಸ್ಯರು , ಸಿಮ್ಸ್ ಮತ್ತು ಸುಇಮ್ಸ್ ವೈದ್ಯ ವಿದ್ಯಾರ್ಥಿಗಳಿಗೆ ವಿಶ್ರಾಂತಿ ಹಾಗು ಮನಶಾಂತಿಗಾಗಿ ಒಳ್ಳೆಯ ಹವ್ಯಾಸವನ್ನು ಪೋಷಿಸಲು ಪ್ರೇರೇಪಿಸುವುದಾಗಿತ್ತು.

ಈ ಸಂಚಿಕೆಯನ್ನು ಚಿರ್ಪ್ಸ್ ಮತ್ತು ಕ್ಲಿಕ್ಸ್ ಎಂದು ಕರೆಯಲಾಯಿತು.
ಡಾ. ಶ್ರೀಕಾಂತ್ ಎನ್ ಹೆಗ್ಡೆಯವರ ಪಕ್ಷಿ ಛಾಯಾಗ್ರಹಣದ ಉತ್ಸಾಹದ ಬಗ್ಗೆ ಮತ್ತು ಪಕ್ಷಿಗಳ ಜೀವನ ಮತ್ತು ವಾಸಸ್ಥಾನದ ಬಗ್ಗೆ ಆಳವಾಗಿ ತಿಳಿದುಕೊಳ್ಳುವ ವಿಷಯಗಳನ್ನು ಅಧ್ಯಕ್ಷರಾದ ಡಾ .ಅರುಣ್ ಎಂ ಎಸ್ ಹಾಗು ಕಾರ್ಯದರ್ಶಿ ಡಾ .ರಕ್ಷಾ ರಾವ್ ಅವರು ಪ್ರಶ್ನೋತ್ತರ ಮುಖಾಂತರ ನಡೆಸಿಕೊಟ್ಟರು . ಭಾಗವಹಿಸಿದ ಎಲ್ಲರಿಗೂ ಇದು ತುಂಬಾ ತೃಪ್ತಿಕರವಾಗಿತ್ತು.

IMA Shivamogga ಡಾ. ಎಸ್.ಎನ್. ಹೆಗಡೆಯವರು ಇದು ಕಾಫಿ ವಿತ್ ಕರಣ್‌ಗೆ ಸಮಾನವಾಗಿ ಚಾಯ್ ವಿತ್ ಅರುಣ್ ಎಂದು ಜನಪ್ರಿಯತೆ ಗಳಿಸಲಿ ಎಂದು ಹಾರೈಸಿದರು . ಡಾ.ಶ್ರೀಕಾಂತ್ ಹೆಗ್ಡೆ ಅವರು ವರ್ಣರಂಜಿತ ಪಕ್ಷಿಗಳ ಫೋಟೋಗಳೊಂದಿಗೆ ಪಿಪಿಟಿಯನ್ನು ಸಿದ್ಧಪಡಿಸಿದರು.

ಅಧ್ಯಕ್ಷ ಡಾ. ಅರುಣ್ ಎಂ.ಎಸ್ ಮತ್ತು ಕಾರ್ಯದರ್ಶಿ ಡಾ. ರಕ್ಷಾ ರಾವ್ ಅವರು ಟೆಲಿ ಶೋನಂತೆಯೇ ಸೂಕ್ತವಾದ ಪ್ರಶ್ನೆಗಳೊಂದಿಗೆ ಮಾತುಕತೆ ನಡೆಸಿದರು.

ಸದಸ್ಯರ ಹವ್ಯಾಸಗಳನ್ನು ಪ್ರದರ್ಶಿಸಿ ಇತರರನ್ನು ಹುರಿದುಂಬಿಸುವ ಚಾಯ್ ಪೆ ಚರ್ಚಾ ಪ್ರಯೋಗವನ್ನು ಹಾಜರಿದ್ದವರೆಲ್ಲರೂ ಸ್ವಾಗತಿಸಿದರು.
ಇತರ ಪ್ರತಿಭಾವಂತ ಸದಸ್ಯರಿಂದ ಹೆಚ್ಚಿನ ಸರಣಿ ಮಾಲಿಕೆಗಳನ್ನು ಮುಂಬರುವ ದಿನಗಳಲ್ಲಿ ನಡೆಸುವ ಯೋಜನೆ ಇದೆ ಎಂದು ಡಾ . ಅರುಣ್ ನುಡಿದರು .

ಈ ಕಾರ್ಯಕ್ರಮವು ನಗರದ ಐಎಂಎ ಸಭಾಂಗಣದಲ್ಲಿ ನಡೆಯಿತು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...