Friday, September 27, 2024
Friday, September 27, 2024

Kuvempu University ಅಸಂಘಟಿತ ಕಾರ್ಮಿಕರ ಬಗ್ಗೆ ಸಂವೇದನಾ ಸಾಹಿತ್ಯ ಸ್ಥಿತಿ ಬದಲಾಗಬೇಕಿದೆ -ಪ್ರೊ.ಬಿ.ಕೆ.ರವಿ

Date:

Kuvempu University ನಗರಗಳನ್ನು ಶುಚಿಗೊಳಿಸಿ ನಮ್ಮ ಬದುಕನ್ನು ಸ್ವಚ್ಛವಾಗಿಡುವ ಪೌರಕಾರ್ಮಿಕರು, ಆಹಾರ ಉತ್ಪಾದಿಸುವ ಕೃಷಿಕೂಲಿಕಾರರು, ಅಂದಗಾಣಿಸುವಂತಹ ಉಡುಪುಗಳನ್ನು ತಯಾರಿಸುವ ಗಾರ್ಮೆಂಟ್ಸ್ ನೌಕರರಂತಹ ಹಲವು ಅಸಂಘಟಿತ, ಅದೃಶ್ಯ ಕಾರ್ಮಿಕರ ಬದುಕಿನ ಕಡೆಗೆ ನಮ್ಮ ಸಮಾಜದಲ್ಲಿರುವ ನಿರ್ಲಕ್ಷ್ಯ ಮತ್ತು ಸಂವೇದನಾರಹಿತ ಮಾನಸಿಕತೆಗಳು ಬದಲಾಗಬೇಕು ಎಂದು ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ. ಕೆ. ರವಿ ಅಭಿಪ್ರಾಯಪಟ್ಟರು.

ಡಾ. ಬಾಬು ಜಗಜೀವನ್ ರಾಮ್ ಅವರ 115ನೇ ಜನ್ಮದಿನಾಚರಣೆಯ ಅಂಗವಾಗಿ ಶುಕ್ರವಾರ ಕುವೆಂಪು ವಿವಿಯ ಡಾ. ಬಾಬುಜಗಜೀವನ್ ರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಾಗೂ ಸಮಾಜಕಾರ್ಯ ವಿಭಾಗಗಳು ಪ್ರೊ. ಎಸ್. ಪಿ. ಹಿರೇಮಠ ಸಭಾಂಗಣದಲ್ಲಿ ಜಂಟಿಯಾಗಿ ‘ಅಸಂಘಟಿತ ವಲಯದ ಕಾರ್ಮಿಕರು ಎದುರಿಸುತ್ತಿರುವ ಸವಾಲುಗಳು ಮತ್ತು ಬಲವರ್ಧನೆಯ ಮಾರ್ಗಗಳು’ ವಿಷಯ ಕುರಿತು ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರ ಬದುಕಿನ ಮೂಲಭೂತ ಅವಶ್ಯಕತೆಗಳಾದ ಆಹಾರ, ಆರೋಗ್ಯ-ಸ್ವಚ್ಚತೆ, ಸೂರುಗಳನ್ನು ನಿರ್ಮಿಸಲು ಶ್ರಮಿಸುವ ಲಕ್ಷಾಂತರ ಕಾರ್ಮಿಕರು ಸ್ವತಃ ಮೂಲಭೂತ ಸೌಕರ್ಯಗಳಿಲ್ಲದೇ ನರಳಾಟದ ಬದುಕು ನಡೆಸುತ್ತಿರುವುದನ್ನು ನೋಡದೇ ವ್ಯವಸ್ಥೆ ನಿರ್ಲಕ್ಷಿಸುತ್ತಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಪೌರಕಾರ್ಮಿಕರು, ಕಟ್ಟಡ ಕಾರ್ಮಿಕರು, ರೈತರು, ಪೆಟ್ರೋಲ್ ಬಂಕ್ ನೌಕರರು, ಡೆಲಿವರಿ ಬಾಯ್‌ಗಳ ವೃತ್ತಿಗಳನ್ನು ಅಪಾರ ಘನತೆಯಿಂದ ನೋಡಲಾಗುತ್ತದೆ. ಭಾರತದಲ್ಲಿರುವ ಸಂವೇದನಾರಹಿತ ಮನಸ್ಥಿತಿಯನ್ನು ಸರಿಪಡಿಸಲು ಕೇವಲ ನೆಪಮಾತ್ರದ ಯೋಜನೆಗಳ ಬದಲಾಗಿ ಸಮಾಜದಲ್ಲಿ ಪ್ರತಿಯೊಬ್ಬರ ದೃಷ್ಟಿಕೋನದಲ್ಲಿ, ಅಂತಃಕರಣದಲ್ಲಿ ಬದಲಾವಣೆ ಆಗಬೇಕಿದೆ ಎಂದರು.
ವಿವಿಧ ಸ್ತರಗಳಲ್ಲಿ ಅದೃಶ್ಯವಾಗಿ, ಮೈಮುರಿದುಕೊಂಡು ಕೆಲಸ ಮಾಡಿ ಬಡಾವಣೆಗಳನ್ನು, ನಗರಗಳನ್ನು, ಉಳ್ಳವರ ಅವಶ್ಯಕತೆಗಳು-ಸೌಧಗಳನ್ನು ನಿರ್ಮಿಸಲು ಶ್ರಮಿಸುತ್ತಿರುವ ಕಾರ್ಮಿಕರ ಬದುಕು-ಬವಣೆಗಳೆಡೆಗೆ ಮಾಧ್ಯಮಗಳು, ಸಂಶೋಧಕರು ಸದಾ ಸೂಕ್ಷ್ಮ ಮನಸ್ಥಿತಿ ನೋಡುತ್ತಿರಬೇಕು. ಜನರಿಗೆ, ಆಳುವವರಿಗೆ, ಸರ್ಕಾರಗಳಿಗೆ ಶೋಷಿತರ ದನಿಯನ್ನು ತಲುಪಿಸಿ ಸಾಮಾಜಿಕ ನ್ಯಾಯ, ಕಾರ್ಮಿಕರ ಬದುಕುಗಳ ಬಲವರ್ಧನೆ ಹಾಗೂ ಸಂವಿಧಾನದ ಅನುಷ್ಠಾನಕ್ಕೆ ಕೈಜೋಡಿಸಬೇಕು ಎಂದು ಸಲಹೆಯಿತ್ತರು.

ಕನ್ನಡ ಪ್ರಭ ದಿನಪತ್ರಿಕೆಯ ವಿಶೇಷ ವರದಿಗಾರ ಗೋಪಾಲ್ ಎಸ್ ಯಡಗೆರೆ ಅವರು ‘ಮಾಧ್ಯಮಗಳಲ್ಲಿ ಅಸಂಘಟಿತ ಕಾರ್ಮಿಕರ ಚಿತ್ರಣ’ ವಿಷಯದ ಕುರಿತು ಮಾತನಾಡಿ, ಪತ್ರಿಕೋದ್ಯಮದಲ್ಲಿರುವ ಸಾಮಾಜಿಕ ಜವಾಬ್ದಾರಿಯನ್ನು ಮಾನವೀಯ ಅಂತಃಕರಣದೊಂದಿಗೆ ಬಳಸಿದಲ್ಲಿ ಅಸಂಘಟಿತ ವಲಯದ ಕಾರ್ಮಿಕರ ನೋವುಗಳಿಗೆ, ಸಮಸ್ಯೆಗಳಿಗೆ ದಕ್ಷ ದನಿಯಾಗಬಹುದು, ಸುಧಾರಣೆ ತರಬಹುದು. ರಾಜಕೀಯ, ಅಪರಾಧ ವರದಿಗಳಿಗಿಂತ ಒಳಿತನ್ನು ಗುರುತಿಸುವ, ಶೋಷಿತರಲ್ಲಿರುವ ಪ್ರತಿಭೆಗಳು, ಅವರ ಸಂಕಟ-ಅವಶ್ಯಕತೆಗಳ ಕುರಿತು ದನಿಯಾಗಿ ಜನರಲ್ಲಿ ಉತ್ತಮ ಸಂವೇದನೆಯನ್ನು ಮೂಡಿಸಬಹುದು. ಟಿಆರ್‌ಪಿ ಬದಲಾಗಿ ಜನರ ಒಳಿತಿಗಾಗಿ ಕೆಲಸ ಮಾಡುವಂತಹ ಮಾಧ್ಯಮಗಳನ್ನು, ಪತ್ರಕರ್ತರನ್ನು ಜನರು ಬೆಂಬಲಿಸಬೇಕು ಎಂದರು.

Kuvempu University ಈ ಸಂದರ್ಭದಲ್ಲಿ ವಿವಿಯ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಕುಲಸಚಿವೆ ಪ್ರೊ. ಗೀತಾ ಸಿ., ಡಾ. ಬಾಬುಜಗಜೀವನ್ ರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮತ್ತು ಪತ್ರಿಕೋದ್ಯಮ ವಿಭಾಗದ ಅಧ್ಯಕ್ಷ ಡಾ. ಸತ್ಯಪ್ರಕಾಶ್ ಎಂ. ಆರ್., ಸಮಾಜಕಾರ್ಯ ವಿಭಾಗಾಧ್ಯಕ್ಷ ಪ್ರೊ. ಪ್ರಶಾಂತ್ ನಾಯಕ್ ಜಿ., ಮಾತನಾಡಿದರು. ವಿವಿಧ ವಿಶ್ವವಿದ್ಯಾಲಯಗಳಿಂದ ಸಂಶೋಧನಾ ಪತ್ರಿಕೆಗಳನ್ನು ಪ್ರಸ್ತುತ ಪಡಿಸಲು ಸ್ನಾತಕೋತ್ತರ ಪದವಿ ಮತ್ತು ಸಂಶೋಧನಾರ್ಥಿಗಳು ಆಗಮಿಸಿದ್ದರು. ವಿವಿಯ ವಿವಿಧ ವಿಭಾಗಗಳ ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಂಶೋಧನಾರ್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Hassan Manikya Prakashana ಶಿವಮೊಗ್ಗದ ಕವಿ ಶಿ.ಜು.ಪಾಶಾ ಅವರಿಗೆ “ಜನ್ನ ಕಾವ್ಯ ಪ್ರಶಸ್ತಿ”

Hassan Manikya Prakashana ಹಾಸನದ ಮಾಣಿಕ್ಯ ಪ್ರಕಾಶನ(ರಿ) ರಾಜ್ಯಮಟ್ಟದ ಜನ್ನ ಕಾವ್ಯ...

Vajreshwari Co Operative Society ಶ್ರೀವಜ್ರೇಶ್ವರಿ ಸಹಕಾರ ಸಂಘದಿಂದ ಪ್ರತಿಭಾ ಪುರಸ್ಕಾರ

Vajreshwari Co Operative Society ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯ ಶ್ರೀ...

Inner Wheel Shivamogga ದುರ್ಬಲರಿಗೆ ನೆರವು ನೀಡಿದಾಗ ಸೇವೆ ಸಾರ್ಥಕ- ಶಿಲ್ಪ ಗೋಪಿನಾಥ್

Inner Wheel Shivamogga ನಾವು ಮಾಡುವ ಸೇವೆ ಸಾರ್ಥಕಗೊಳ್ಳಬೇಕಾದರೆ...

National Education Committee ಬೆಳಗುತ್ತಿ & ಮಲ್ಲಿಗೇನಹಳ್ಳಿಯಲ್ಲಿ ಗಮನ ಸೆಳೆದ ಎನ್.ಎಸ್.ಎಸ್. ವಾರ್ಷಿಕ ಶಿಬಿರ

National Education Committee ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿರಂಗಪ್ರಯೋಗದ...