Saturday, September 28, 2024
Saturday, September 28, 2024

Chikkamagaluru ಪ್ರೇಮಿಗಳ ದಾರುಣ ಅಂತ್ಯದ ಬಗ್ಗೆ ಆರೋಪಿಗಳಿಗೆ ಶಿಕ್ಷೆ ನೀಡಲು ದಸಂಸ ಒತ್ತಾಯ

Date:

Chikkamagaluru ದಲಿತ ಯುವಕ ಮತ್ತು ಮೇಲ್ವರ್ಗದ ಯುವತಿ ಪರಸ್ಪರ ಪ್ರೇಮಿಸಿದ ಕಾರಣ ಕುಟುಂಬದವರು ಮಗಳನ್ನು ಹತ್ಯೆಗೈದು ಯುವಕನ ಸಾವಿನ ಕಾರಣವಾಗಿದೆ. ಅಂತಹವರ ವಿರುದ್ಧ ಕಠಿಣ ಶಿಕ್ಷೆ ವಿಧಿಸಿ ಗಡಿಪಾರು ಮಾಡಬೇಕು ಎಂದು ಜಿಲ್ಲಾ ದಸಂಸ (ಪ್ರೊ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸರ್ಕಾರವನ್ನು ಒತ್ತಾಯಿ ಸಿದ್ದಾರೆ.

ಈ ಸಂಬಂಧ ಗುರುವಾರ ಹೇಳಿಕೆಯಲ್ಲಿ ತಿಳಿಸಿರುವ ದಸಂಸ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್ ಕುಮಾರ್ ಅವರು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಗಂಗಾರಾಜು ಎಂಬುವ ದಲಿತ ಯುವಕ ಮೇಲ್ವರ್ಗದ ಯುವತಿ ಕೀರ್ತಿ ಪರಸ್ಪರ ಪ್ರೇಮಿಸುತ್ತಿದ್ದರು. ಇದನ್ನು ಸಹಿಸಲಾಗದ ಆಕೆಯ ಕುಟುಂಬದವರು ಕತ್ತುಹಿಸುಕಿ ಕೊಲೆಗೈದಿರುವುದಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಕೀರ್ತಿ ಕುಟುಂಬದವರು ಹೀನಾಯವಾಗಿ ಹತ್ಯೆಗೈದಿರುವ ಪರಿಣಾಮ ಇದನ್ನು ಸಹಿಸಿಕೊಳ್ಳಲಾರದ ಯುವಕ ಗಂಗಾರಾಜು ಆತ್ಮಹತ್ಯೆಗೆ ಶರಣಾಗಿರುವ ಧಾರುಣ ಘಟನೆ ಸಂಭವಿಸಿದೆ. ಈ ಸಂಬಂಧ ರಾಜ್ಯಸರ್ಕಾರ ಯುವತಿ ಯ ಕುಟುಂಬದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Chikkamagaluru ಜಾತ್ಯಾತೀತ ದೇಶದಲ್ಲಿ ಹೊಸ ಉತ್ಸಾಹವನ್ನಿಟ್ಟುಕೊಂಡು ಪ್ರೇಮಿಸಿದ ಜೋಡಿಗಳನ್ನು ಕೇವಲ ಜಾತಿ ಆಧಾರದ ಹೆಸರಿನಲ್ಲಿ ಕತ್ತುಹಿಸುಕಿ ಕೊಲೆಗೈದಿರುವುದು ದುರ್ದೈವದ ಸಂಗತಿ. ಇಂತಹ ಹೀನಾಮನಸ್ಸಿನ ವ್ಯಕ್ತಿಗಳಿ ಗೆ ರಾಜ್ಯಸರ್ಕಾರ ಕಠಿಣ ಶಿಕ್ಷೆ ವಿಧಿಸಿ ದೇಶದಿಂದ ಗಡಿಪಾರು ಮಾಡಬೇಕು ಎಂದಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...