Saturday, September 28, 2024
Saturday, September 28, 2024

Sahyadri Arts College Shivamogga ಸಿನಿಮಾ ತಂತ್ರಜ್ಞಾನದಲ್ಲಿ ಸಾಕಷ್ಟು ಹೊಸತು ಬಂದಿದೆ ಅಧ್ಯಯನದಿಂದ ಅರ್ಥಮಾಡಿಕೊಳ್ಳಬೇಕು- ನಾಗಭೂಷಣ್

Date:

Sahyadri Arts College, Shivamogga ಸಿನಿಮಾ ಕ್ಷೇತ್ರದಲ್ಲಿ ತಂತ್ರಜ್ಞಾನದ ಅಳವಡಿಕೆಯಾಗಿರುವುದರಿಂದ ಸಾಕಷ್ಟು ಬೆಳವಣಿಗೆ, ಹೊಸತನ ಬಂದಿದೆ. ಇದನ್ನು ಅಧ್ಯಯನದ ಮೂಲಕ ಅರ್ಥ ಮಾಡಿಕೊಂಡು ಆ ರಂಗದಲ್ಲಿ ಹೆಜ್ಜೆ ಇಡಬೇಕು ಎಂದು ಬೆಳ್ಳಿಮಂಡಲದ ಕಾರ‍್ಯದರ್ಶಿ, ಪ್ರಾಚಾರ್ಯ ರಾದ ನಾಗಭೂಷಣ ಕರೆ ನೀಡಿದರು.

ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಅಲ್ಲಿನ ಕನ್ನಡ ಸಾಹಿತ್ಯ ವೇದಿಕೆಯು ಬೆಳ್ಳಿಮಂಡಲದ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಸಿನಿಮಾ ರಸಗ್ರಹಣ ಕುರಿತಾದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಹಳೆಯ ಸಿನಿಮಾವನ್ನು ನೋಡಬೇಕು. ಸಿನಿಮಾ ಒಂದು ಕಲಾತ್ಮಕ ಜಗತ್ತು. ಅದು ವಿಶಾಲವಾಗಿ ಬೆಳೆದಿದೆ. ಸಿನಿಮಾ ನೋಡುತ್ತಲೇ ಅದನ್ನು ಅರ್ಥ ಮಾಡಿಕೊಂಡು ಸಿನಿಮಾ ತಯಾರು ಮಾಡುವುದನ್ನು ಕಲಿಯಬೇಕು. ಕಾಲೇಜಿನಲ್ಲೇ ಸಿನಿಮಾ ನಿರ್ಮಿಸಬಹುದು. ಸಿನಿಮಾವೂ ಒಂದು ಶಿಕ್ಷಣ . ಅದರ ಮೂಲಕ ಅಬಿವೃದ್ಧಿಯಾಗಬೇಕು. ನಿಜವಾದ ಕಲೆಗೆ ಗಡಿ ಇಲ್ಲ, ಭಾಷೆ ಇಲ್ಲ ಎಂದು ವಿವರಿಸಿದರು.

ಕಾಲೇಜಿನ ಕನ್ನಡ ಸಾಹಿತ್ಯ ವೇದಿಕೆಯ ಸಂಚಾಲಕಿ ಪ್ರೊ. ಹಾಲಮ್ಮ ಮಾತನಾಡಿ, ಸಿನಿಮಾ ಕೇವಲ ಮನರಂಜನೆಗೆ ಮಾತ್ರವಲ್ಲ, ಅದರಲ್ಲಿ ಬೇರೆ ಬೇರೆ ಆಯಾಮಗಳಿವೆ. ಸಾಮಾಜಿಕವಾದ ಅಂಶಗಳಿವೆ. ಬದುಕಿದೆ, ಕಷ್ಟ-ನಷ್ಟವಿದೆ. ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವುದನ್ನು ಅದು ಕಲಿಸುತ್ತದೆ. ಇಂದಿನ ಸಮಾಜದಲ್ಲಿ ಸಮಾಜ ವಿಘಟನೆಯ ಘಟನೆಗಳು ಹೆಚ್ಚುತ್ತಿವೆ. ಸಿನಿಮಾ ಜನರನ್ನು ಒಂದುಗೂಡಿಸುವ ಅದ್ಭುತ ಶಕ್ತಿಯನ್ನು ಹೊಂದಿರುವುದರಿಂದ ಸಿನಿಮಾ ನೋಡಿ ಒಳ್ಳೆಯದು ಯಾವುದು, ಕೆಟ್ಟದ್ದು ಯಾವದು ಎಂದು ನಿರ್ಧರಿಸುವ ಶಕ್ತಿ ಬರುತ್ತದೆ ಎಂದು ಹೇಳಿದರು.

ಬೆಳ್ಳಿಮಂಡಲದ ನಿರ್ದೇಶಕ ಜಿ. ವಿಜಯಕುಮಾರ್ ಮಾತನಾಡಿ, ಬದುಕನ್ನು ಮತ್ತು ಮನಸ್ಸನ್ನು ಅರಳಿಸುವ ಕಲೆ ಸಿನಿಮಾದಲ್ಲಿದೆ. ಮನಸನ್ನು ಕೆರಳಿಸುವ ಸಂಗತಿಗಳು ದಿನನಿತ್ಯ ನಮ್ಮೆದುರು ನಡೆಯುತ್ತವೆ. ಅದನ್ನು ಗಣನೆಗೆ ತೆಗದುಕೊಳ್ಳದೆ ಬದುಕನ್ನು ಅರಳಿಸುವ ಕಲೆ ಆಯ್ದುಕೊಳ್ಳಿ, ವಿದ್ಯಾರ್ಥಿಗಳಲ್ಲಿ ಸ್ವಂತಿಕೆಯ ಶಕ್ತಿ ಇದೆ. ಅದನ್ನು ಬಳಸಿಕೊಂಡು ಉತ್ತಮ ಸಿನಿಮಾ ತಯಾರಕರಾಗಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಕಾರ್ಯಗಾರ ಕೆ. ಬಿ. ಧನಂಜಯ, ಹಿಂದಿನ ಕಾಲದಲ್ಲಿ ಸಿನಿಮಾ ಎಂದರೆ ಮನೆಮಂದಿಯೆಲ್ಲ ಒಟ್ಟಿಗೆ ಹೋಗುತ್ತಿದ್ದರು. ಆದರೆ ಈಗ ಅದು ಬದಲಾಗಿದೆ. ಆಗ ಮನರಂಜನೆಯನ್ನಾಗಿ ಮಾತ್ರ ಪರಿಗಣಿಸಲಾಗುತ್ತಿತ್ತು. ಈಗ ಮನೆಯಲ್ಲೇ ಕುಳಿತು ಮೊಬೈಲಿನಲ್ಲಿ ಒಬ್ಬರೇ ಸಿನಿಮಾ ನೋಡಬಹುದು. ಅದೇ ಹಿಂದಿನ ಖುಷಿ ಈಗ ಉಳಿದಿಲ್ಲ. ಇತ್ತೀಚೆಗೆ ಕಿರುಚಿತ್ರಗಳು ಹೆಚ್ಚುತ್ತಿವೆ. ಅವು ಕೂಡ ಉತ್ತಮ ಸಂದೇಶವನ್ನು ತಲುಪಿಸುತ್ತಿವೆ. ಇದರಲ್ಲಿ ಸಿನಿಮಾ ತಯಾರಕರ ಕ್ರಿಯಾಶೀಲತೆ ಮತ್ತು ಸೂಕ್ಷ್ಮ ತೆ ಇರುತ್ತದೆ. ಸಿನಿಮಾ ನೋಡುವುದಲ್ಲದೆ, ಅದನ್ನು ಅವಲೋಕಿಸುವ ಕೌಶಲ್ಯವನ್ನು ಕರಗತ ಮಾಡಿಕೊಳ್ಳಬೇಕೆಂದರು.

Sahyadri Arts College, Shivamogga ವೇದಿಕೆಯಲ್ಲಿ ಬೆಳ್ಳಿಮಂಡಲದ ಸಂಚಾಲಕ ಶಂಕರ್, ಸಹ್ಯಾದ್ರಿ ಕಲಾ ಕಾಲೇಜಿನ ಪ್ರೊ. ಅವಿನಾಶ್, ಪ್ರಕಾಶ್ ಮರ್ಗನಳ್ಳಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shikaripura News ಅಹಿಂದ ಸಂಘಟನೆ ಕರೆ ನೀಡಿದ್ದ ಶಿಕಾರಿಪುರ ಬಂದ್ ಯಶಸ್ವಿ

Shikaripura News ನಾಡಿನ ಅಹಿಂದ ವರ್ಗಕ್ಕೆ ಸೇರಿದ ಜನರ ಹಿತ ಕಾಯುವ...

New Delhi News ಅಪಹರಣಕ್ಕೊಳಗಾಗಿದ್ದ ಬಾಲಕನೇ ಇಂದು ವಕೀಲನಾಗಿ ಅದೇ ಕಿಡ್ನಾಪರ್ಸ್ ಗೆ ಶಿಕ್ಷೆ ಕೊಡಿಸಿದ

New Delhi News ಈ ಹಿಂದೆ 7 ವರ್ಷದವನಾಗಿದ್ದಾಗ ಅಪಹರಣಕ್ಕೊಳಗಾಗಿದ್ದ ಬಾಲಕ...

Kasturi Rangan Comittee Report ಕಸ್ತೂರಿ ರಂಗನ್ ವರದಿ ತಿರಸ್ಕಾರ: ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

Kasturi Rangan Comittee Report ಜುಲೈನಲ್ಲಿ ಕೇಂದ್ರ ಸರ್ಕಾರ 6ನೇ ಕರಡು...

Hosanagara News ಇಸ್ಪೀಟ್ ಅಡ್ಡೆಗೆ ಪೊಲೀಸರ ದಾಳಿ – 11 ಜನರ ಬಂಧನ 17,640 ರೂಪಾಯಿ ವಶ

Hosanagara News ಹೊಸನಗರ ತಾಲ್ಲೂಕು ಮಾರುತೀಪುರ ಗ್ರಾಮ ಪಂಚಾಯಿತಿಯ ಹಳೆಬಾಣಿಗ ರಸ್ತೆಯ...