Sunday, December 14, 2025
Sunday, December 14, 2025

Health camp ಬೆಳೆಯುವ ಮಕ್ಕಳನ್ನ ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕು

Date:

Health camp ಹುಟ್ಟಿದ ಮಗುವಿನಿಂದ ವಯಸ್ಸಿನ ಹಂತದವರೆಗೂ ಬೆಳೆಯುವ ಮಕ್ಕಳಿಗೆ ಅತ್ಯಂತ ಸೂಕ್ಷ್ಮ ತನದಿಂದ ಗಮನಹರಿಸುವ ಮೂಲಕ ಪೋಷಕರು ಮಹತ್ತರವಾದ ಜವಾಬ್ದಾರಿ ಹೊರಬೇಕು ಎಂದು ನಗರಸಭಾ ಸದಸ್ಯ ಮುನೀರ್ ಅಹ್ಮದ್ ಹೇಳಿದರು.
ನಗರದ ಉಪ್ಪಳ್ಳಿ ಸಮೀಪದ ಅಂಗನವಾಡಿ ಕೇಂದ್ರದಲ್ಲಿ ಶಾಂತಿನಗರ, ಉಪ್ಪಳ್ಳಿ ವಾರ್ಡಿನ 0-18 ವರ್ಷದ ಮಕ್ಕಳಿಗೆ ಏರ್ಪಡಿಸಲಾಗಿದ್ದ ತಾಲ್ಲೂಕು ಮಟ್ಟದ ಆರೋಗ್ಯ ಶಿಬಿರಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕೆಲವು ಆಕಸ್ಮಿಕ ಹಾಗೂ ವಂಶಪರಂಪಾರ್ಯವಾಗಿ ವಿವಿಧ ತೊಂದರೆಗೀಡಾಗುವ ಮಕ್ಕಳಿಗೆ ಸರ್ಕಾರದಿಂದ ಉಚಿತವಾಗಿ ತಪಾಸಣೆ ಸೇರಿದಂತೆ ಆಪರೇಷನ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದರ ಸದುಪಯೋಗವನ್ನು ನಿವಾಸಿಗಳು ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಮಕ್ಕಳಿಗೆ ಸಣ್ಣವಯಸ್ಸಿನಿಂದ ಕೆಲವು ಕಿಡ್ನಿ, ಕೈಕಾಲು ಅಥವಾ ಮೆದುಳಿನ ಶಕ್ತಿಹೀನತೆಯಿಂದ ಬಳಲುತ್ತಿರು ತ್ತಾರೆ. ಚಿಕಿತ್ಸೆಗೆ ತೆರಳಿದರೆ ಸಾವಿರಾರು ರೂ.ಗಳ ವ್ಯಯಿಸಲು ಶಕ್ತಿ ಹೊಂದಿರದ ಹಿನ್ನೆಲೆಯಲ್ಲಿ ಸರ್ಕಾರ ಅಂತಹ ಆರ್ಥಿಕದಿಂದ ಹಿಂದುಳಿದಿರುವ ಕುಟುಂಬದವರಿಗೆ ಅನುಕೂಲವಾಗಲು ಇಂತಹ ಶಿಬಿರ ಆಯೋಜಿಸಿದೆ ಎಂದರು.
ವೈದ್ಯೆ ಡಾ. ಪಾವನ ಮಾತನಾಡಿ 0-18ವರ್ಷ ಒಳಪಟ್ಟ ಮಕ್ಕಳಿಗೆ ಶೀತ, ಜ್ವರ ಅಥವಾ ಸಣ್ಣಪುಟ್ಟ ಸಮಸ್ಯೆ ಗಳಿಗೆ ಸ್ಥಳದಲೇ ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ಮಟ್ಟದ ಚಿಕಿತ್ಸೆ ಹೊಂದಬೇಕಾದರೆ ಜಿಲ್ಲಾ ಆರಂಭೀಕ ಮದ್ಥಸ್ಥಿಕೆ ಕೇಂದ್ರಕ್ಕೆ ಕಳುಹಿಸಿ ಉಚಿತವಾಗಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ ಎಂದು ಹೇಳಿದರು.

Health camp ಈ ಸಂದರ್ಭದಲ್ಲಿ ವೈದ್ಯೆ ಡಾ. ಕೋಮಲ, ಸಿಬ್ಬಂದಿಗಳಾದ ರೇಣುಕಾ, ಜಿಲ್ಲಾ ಆರಂಭಿಕ ಮಧ್ಯಸ್ಥಿಕೆ ಕೇಂದ್ರದ ಅಧಿಕಾರಿ ದಿವ್ಯಾ, ಆಶಾ ಸುಗಮಕಾರರೆ ಶೋಭಾ, ಕಾರ್ಯಕರ್ತೆಯರಾದ ರೇಣುಕಾ, ಸುಶೀಲ, ಮಾಲ, ಹೇಮಾವತಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...