Tuesday, March 24, 2026
Tuesday, March 24, 2026

M. B. Patil ಲಿಂಗಾಯತ ಮಠಮಾನ್ಯಗಳು ಅಮೋಘವಾದ ಕಾರ್ಯ ಮಾಡುತ್ತಿವೆ- ಸಚಿವ ಎಂ.ಬಿ.ಪಾಟೀಲ್

Date:

M. B. Patil ಭಾರತ ಮತ್ತು ಕರ್ನಾಟಕದ ಚರಿತ್ರೆಯಲ್ಲಿ ಶಿಕ್ಷಣ ಮತ್ತು ದಾಸೋಹದ ಸಂಸ್ಕೃತಿಯನ್ನು ಆರಂಭಿಸುವ ಮೂಲಕ ಲಿಂಗಾಯತ ಮಠಮಾನ್ಯಗಳು ಅಮೋಘವಾದ ಕೆಲಸ ಮಾಡಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ ಬಿ ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗುರುಪೂರ್ಣಿಮೆ ಪ್ರಯುಕ್ತ ಅವರು, ಬೆಂಗಳೂರು ನಗರದಲ್ಲಿ ಶನಿವಾರ ಶ್ರೀಶೈಲ ಮಹಾಸಂಸ್ಥಾನದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದರ್ಶನ ಪಡೆದು, ಆಶೀರ್ವಚನ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಶ್ರೀಗಳು, ಪುಷ್ಪಮಾಲೆ ಹಾಕಿ, ಶಾಲು ತೊಡಿಸಿ, ಸಚಿವರನ್ನು ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಸ್ವತಃ ನಾನು ವರ್ಷದಲ್ಲಿ ಎರಡು ಸಲವಾದರೂ ಶ್ರೀಶೈಲ ಕ್ಷೇತ್ರಕ್ಕೆ ಹೋಗಿ, ಶ್ರೀಗಳ ಆಶ್ರಯದಲ್ಲಿ ಇದ್ದುಬರುತ್ತೇನೆ. ಇದರಿಂದ ನನಗೆ ಅವರ ಮಾರ್ಗದರ್ಶನ, ಪ್ರೋತ್ಸಾಹ, ಪ್ರೇರಣೆಗಳ ಕೃಪೆ ಸಿಗುತ್ತಿದೆ. ಅವರು ಮಾಡುವ ಒಳ್ಳೆಯ ಕೆಲಸಗಳಿಗೆ ಸರಕಾರದ ಬೆಂಬಲವೂ ಇರಲಿದೆ” ಎಂದರು.

ನಮ್ಮ ಮಠಮಾನ್ಯಗಳು ಮಾಡುತ್ತಿರುವ ಕೆಲಸಗಳು ಉಳಿದ ಧರ್ಮಗಳ ಸಂಸ್ಥೆಗಳಿಗೆ ಮಾದರಿಯಾಗಿವೆ. ಈ ಮೂಲಕ ಸುಸಂಸ್ಕೃತ ಮತ್ತು ಮೌಲ್ಯಾಧಾರಿತ ಸಮಾಜವನ್ನು ಕಟ್ಟುವ ಕೆಲಸ ನಡೆಯುತ್ತಿದೆ. ಶ್ರೀಗಳು ತೋರುತ್ತಿರುವ ಹಾದಿಯಲ್ಲಿ ನಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

M. B. Patil ಯಾವುದೇ ಸಂದರ್ಭದಲ್ಲೂ ಗುರುಗಳ ಆಶೀರ್ವಾದ ಎಲ್ಲರಿಗೂ ಸಿಗುತ್ತಿರಬೇಕು. ಇದರಿಂದ ಬದುಕಿನಲ್ಲಿ ಮಹತ್ತ್ವವಾದುದನ್ನು ಸಾಧಿಸುವ ಶಕ್ತಿ ಬರಲಿದೆ. ಇದರ ಜತೆಗೆ ಅವರ ಕೃಪೆಯಿಂದ ವಿನೀತ ಪ್ರಜ್ಞೆ ಬಂದು, ಧನ್ಯತೆಯ ಭಾವನೆ ಲಭ್ಯವಾಗಲಿದೆ ಎಂದು ಸಚಿವರು ಬಣ್ಣಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

N. Chaluvaraya Swamy ಎಲ್ಲಾ ಹುದ್ದೆಗಳ ನೇಮಕಾತಿ ಕೆಇಎ ಮೂಲಕ ನಡೆಸಲು ಸರ್ಕಾರದ ನಿರ್ಧಾರ- ಸಚಿವ ಎನ್.ಚಲುವರಾಯ ಸ್ವಾಮಿ

N. Chaluvaraya Swamy ನಮ್ಮ ರಾಜ್ಯದ ಸಾವಿರಾರು ನಿರುದ್ಯೋಗಿ ಯುವಜನತೆಯ ಹಾಗೂ...

University of Agricultural 2047 ರ ಹೊತ್ತಿಗೆ ನಮ್ಮ ದೇಶ ಆಹಾರ ವ್ಯವಸ್ಥೆಯಲ್ಲಿ ಜಾಗತಿಕ ಶಕ್ತಿಯಾಗಿ ಹೊಮ್ಮಲಿದೆ- ಡಾ.ಎಸ್.ಕೆ.ಮಲ್ಹೋತ್ರಾ

University of Agricultural ಅತ್ಯುತ್ತಮ ಪರಿಸರ ಸೇವೆ ನೀಡುತ್ತಿರುವ ಅಲಂಕಾರಿಕ ತೋಟಗಾರಿಕೆ...

CM Siddaramaiah ಮೌಢ್ಯತೆ ವಿರುದ್ಧ ಸಿಡಿದೆದ್ದುಸಮಸಮಾಜದ ಕನಸು ಬಿತ್ತಿದ ಶರಣ ದೇವರ ದಾಸಿಂಯ್ಯ- ಸಿದ್ಧರಾಮಯ್ಯ

CM Siddaramaiah ಮೌಢ್ಯ, ಕಂದಾಚಾರಗಳ‌ ಹೆಸರಿನಲ್ಲಿ ತಳ ಸಮುದಾಯಗಳ ಜನರನ್ನು...