Tuesday, October 1, 2024
Tuesday, October 1, 2024

M. B. Patil ಲಿಂಗಾಯತ ಮಠಮಾನ್ಯಗಳು ಅಮೋಘವಾದ ಕಾರ್ಯ ಮಾಡುತ್ತಿವೆ- ಸಚಿವ ಎಂ.ಬಿ.ಪಾಟೀಲ್

Date:

M. B. Patil ಭಾರತ ಮತ್ತು ಕರ್ನಾಟಕದ ಚರಿತ್ರೆಯಲ್ಲಿ ಶಿಕ್ಷಣ ಮತ್ತು ದಾಸೋಹದ ಸಂಸ್ಕೃತಿಯನ್ನು ಆರಂಭಿಸುವ ಮೂಲಕ ಲಿಂಗಾಯತ ಮಠಮಾನ್ಯಗಳು ಅಮೋಘವಾದ ಕೆಲಸ ಮಾಡಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ ಬಿ ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗುರುಪೂರ್ಣಿಮೆ ಪ್ರಯುಕ್ತ ಅವರು, ಬೆಂಗಳೂರು ನಗರದಲ್ಲಿ ಶನಿವಾರ ಶ್ರೀಶೈಲ ಮಹಾಸಂಸ್ಥಾನದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದರ್ಶನ ಪಡೆದು, ಆಶೀರ್ವಚನ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಶ್ರೀಗಳು, ಪುಷ್ಪಮಾಲೆ ಹಾಕಿ, ಶಾಲು ತೊಡಿಸಿ, ಸಚಿವರನ್ನು ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಸ್ವತಃ ನಾನು ವರ್ಷದಲ್ಲಿ ಎರಡು ಸಲವಾದರೂ ಶ್ರೀಶೈಲ ಕ್ಷೇತ್ರಕ್ಕೆ ಹೋಗಿ, ಶ್ರೀಗಳ ಆಶ್ರಯದಲ್ಲಿ ಇದ್ದುಬರುತ್ತೇನೆ. ಇದರಿಂದ ನನಗೆ ಅವರ ಮಾರ್ಗದರ್ಶನ, ಪ್ರೋತ್ಸಾಹ, ಪ್ರೇರಣೆಗಳ ಕೃಪೆ ಸಿಗುತ್ತಿದೆ. ಅವರು ಮಾಡುವ ಒಳ್ಳೆಯ ಕೆಲಸಗಳಿಗೆ ಸರಕಾರದ ಬೆಂಬಲವೂ ಇರಲಿದೆ” ಎಂದರು.

ನಮ್ಮ ಮಠಮಾನ್ಯಗಳು ಮಾಡುತ್ತಿರುವ ಕೆಲಸಗಳು ಉಳಿದ ಧರ್ಮಗಳ ಸಂಸ್ಥೆಗಳಿಗೆ ಮಾದರಿಯಾಗಿವೆ. ಈ ಮೂಲಕ ಸುಸಂಸ್ಕೃತ ಮತ್ತು ಮೌಲ್ಯಾಧಾರಿತ ಸಮಾಜವನ್ನು ಕಟ್ಟುವ ಕೆಲಸ ನಡೆಯುತ್ತಿದೆ. ಶ್ರೀಗಳು ತೋರುತ್ತಿರುವ ಹಾದಿಯಲ್ಲಿ ನಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

M. B. Patil ಯಾವುದೇ ಸಂದರ್ಭದಲ್ಲೂ ಗುರುಗಳ ಆಶೀರ್ವಾದ ಎಲ್ಲರಿಗೂ ಸಿಗುತ್ತಿರಬೇಕು. ಇದರಿಂದ ಬದುಕಿನಲ್ಲಿ ಮಹತ್ತ್ವವಾದುದನ್ನು ಸಾಧಿಸುವ ಶಕ್ತಿ ಬರಲಿದೆ. ಇದರ ಜತೆಗೆ ಅವರ ಕೃಪೆಯಿಂದ ವಿನೀತ ಪ್ರಜ್ಞೆ ಬಂದು, ಧನ್ಯತೆಯ ಭಾವನೆ ಲಭ್ಯವಾಗಲಿದೆ ಎಂದು ಸಚಿವರು ಬಣ್ಣಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...

Gandhi Jayanti ಸಾಗರ ತಾಲ್ಲೂಕಿನಲ್ಲಿ ಯಶಸ್ವಿಯಾಗಿ ನಡೆದ ಸ್ವಚ್ಛತಾ ಹಿ ಸೇವಾ ಚಟುವಟಿಕೆ

Gandhi Jayanti ಭಾರತ ಸರ್ಕಾರದ, ಯುವ ವ್ಯವಹಾರ ಮತ್ತು ಕ್ರೀಡಾ...

Karnataka State Farmers Association ಆನೆದಾಳಿಗೆ ಮೃತಪಟ್ಟ ಪುರದಾಳ್ ನಿವಾಸಿಗೆ ₹25 ಲಕ್ಷ ಪರಿಹಾರ ನೀಡಲು ಆಗ್ರಹ

Karnataka State Farmers Association ಶಿವಮೊಗ್ಗ ನಗರದ ಅಂಚಿನಲ್ಲಿರುವ ಪುರದಾಳ್...