Shrivireshwar Punyashram ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಕುರುಡು ಮಕ್ಕಳ ಸಂಗೀತ ವಿದ್ಯಾಲಯ ಮತ್ತು ಶ್ರೀ ವೀರೇಶ್ವರ ಪುಣ್ಯಶ್ರಮ ಉಚಿತ ಸಂಸ್ಕೃತಿ ಪಾಠಶಾಲೆ ಶಿವಮೊಗ್ಗ ಇವರ ವತಿಯಿಂದ ಗಾನಲ ಹರಿ 88ನೇ ಅಮಾವಾಸ್ಯೆಯ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.
ಮೇ 19 2023ನೇ ಶುಕ್ರವಾರ ಸಂಜೆ 6:30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀ.ಪಂ.ಆರ್. ಬಿ. ಸಂಗಮೇಶ್ವರ ಗವಾಯಿಗಳು ಆಗಮಿಸಲಿದ್ದಾರೆ.
ಅತಿಥಿ ಗಾಯನಕ್ಕೆ ಜೈಪುರ ಅತ್ರೋಲಿ ಘರಾಣಿಯ ಪಂ. ರಾಜಶೇಖರ್ ಮನ್ಸೂರ್ ಇವರ ಶಿಷ್ಯರಾದ ಡಾ. ಮಿಥುನ್ ಚಕ್ರವರ್ತಿ ಅವರು ಆಗಮಿಸಲಿದ್ದಾರೆ.
Shrivireshwar Punyashram ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀ. ರಾಮಣ್ಣ ಭಜಂತ್ರಿ, ಶ್ರೀ ಗುರು ಪುಟ್ಟರಾಜ ಮಂದಿರ ಶಿವಮೊಗ್ಗ ವೇ.ಮೂ.ಶ್ರೀ. ವೀರಭದ್ರಯ್ಯ ಶಾಸ್ತ್ರಿಗಳು,ಶ್ರೀ.ಪಂ. ಆರ್.ತುಕಾರಾಂ ರಂಗಧೋಳ್ , ಶ್ರೀ ವಿನಾಯಕ್ ಭಟ್, ಶ್ರೀ ಶಿವರಾಜಪ್ಪ , ಶ್ರೀ. ಸಿದ್ದಣ್ಣ ಬಡಿಗೇರ್ ಹಾರ್ಮೋನಿಯಂ ವಾದಕರು, ಶ್ರೀ . ಮಾಳೇನಹಳ್ಳಿ ರಾಜ್ಯ ಪುರಸ್ಕೃತರು ಶಂಕರಘಟ್ಟ, ಕಲಾಪ್ರಶಸ್ತಿ ಪುರಸ್ಕೃತರಾದ ಶ್ರೀ. ಉಸ್ತಾದ್ ಹುಮಾಯೂನ್ ಹರ್ಲಾಪುರ್ ಅವರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ಆಸಕ್ತರು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವಂತೆ ಕೋರಲಾಗಿದೆ.