Sunday, December 7, 2025
Sunday, December 7, 2025

Shivammogga Harihar Police Station ಶಿವಮೊಗ್ಗ ಹರಿಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾದವರ ಬಗ್ಗೆ ಮಾಹಿತಿ

Date:

Shivammogga Harihar Police Station ಶಿವಮೊಗ್ಗದ ಹರಿಹರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ದಿನಾಂಕಗಳಿಂದ ಕಾಣೆಯಾದವರ ಬಗ್ಗೆ ವಿವರ ನೀಡಿದೆ. ಈ ವ್ಯಕ್ತಿಗಳು ಎಲ್ಲಿಯಾದರೂ ಕಂಡು ಬಂದಲ್ಲಿ ಹರಿಹರ ನಗರ ಪೊಲೀಸ್ ಠಾಣೆ- 08192-272016, ಅಥವಾ 9480803258

ದಾವಣಗೆರೆ- 08192-253100/ 08192-253400ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

ವಿವರ ಕೆಳಗನಂತಿದೆ.
ಹರಿಹರನಗರದ ನಡುವಲಪೇಟೆ 2ನೇ ಕ್ರಾಸ್‌ನಲ್ಲಿ ವಾಸವಿರುವ ಯೋಗಪ್ಪ ಮಾಂತ ಎಂಬುವವರ ಮಗ 49ವರ್ಷದ ಬಸವರಾಜ ವೈ. ಎಂಬುವವರು ದಿ: 23.01.2021 ರಿಂದ ಕಾಣೆಯಾಗಿರುತ್ತಾರೆ.
ಈತನ ಚಹರೆ 5.5 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ಉರ್ದು, ಹಿಂದಿ ಭಾಷೆ ಮಾತನಾಡುತ್ತಾರೆ.

ಹರಿಹರ ನಗರದ ಹರ್ಲಾಪುರ 2ನೇ ಮುಖ್ಯರಸ್ತೆಯಲ್ಲಿ ವಾಸವಿರುವ ಆಯಾಜ್ ಕುರುಬು ಎಂಬುವವರ ಪತ್ನಿ 25ವರ್ಷ ನುಸರತ್ ಬಾನು ಎಂಬುವವರು ದಿ:16-04-2021 ರಿಂದ ಕಾಣೆಯಾಗಿರುತ್ತಾರೆ. ಈಕೆಯ ಚಹರೆ 4.9 ಅಡಿ ಎತ್ತರ, ದುಂಡುಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಮತ್ತು ಉರ್ದು ಭಾಷೆ ಮಾತನಾಡುತ್ತಾರೆ.

ಹರಿಹರನಗರದ ಗಾಂಧಿನಗರ 3ನೇ ಕ್ರಾಸ್‌ನಲ್ಲಿ ವಾಸವಿರುವ ಮೆಹಬೂಬ್ ಸಾಬ್ ಎಂಬುವವರ ಮಗ 28 ವರ್ಷದ ದಾದಪೀರ್  ಎಂಬುವವರು ದಿ: 24-01-2021 ರಿಂದ ಕಾಣೆಯಾಗಿರುತ್ತಾರೆ. ಈತನ ಚಹರೆ 5.4 ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದು, ಕನ್ನಡ, ಉರ್ದು ಮಾತನಾಡುತ್ತಾರೆ.

ಹರಿಹರನಗರದ ರಾಜಾರಾಂ ನಗರ 13ನೇ ಕ್ರಾಸ್, ೩ನೇ ಮುಖ್ಯರಸ್ತೆಯಲ್ಲಿ ವಾಸವಿದ್ದ 98ವರ್ಷದ ವಿಠ್ಹಲ್ ಸಾ ಮೆಹರ್ವಾಡೆ ಎಂಬುವವರು ದಿ: 28/10/2021ರಿಂದ ಕಾಣೆಯಾಗಿರುತ್ತಾರೆ.

Shivammogga Harihar Police Station ಈತನ ಚಹರೆ 5.6ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ, ತೆಳ್ಳನೆ ಮೈಕಟ್ಟು ಹೊಂದಿದ್ದು, ಕನ್ನಡ, ಮರಾಠಿ, ಇಂಗ್ಲೀಷ್, ಹಿಂದಿ ಮಾತನಾಡುತ್ತಾರೆ. ಎಡಪಕ್ಕೆಯಲ್ಲಿ ಸಣ್ಣ ಕಪ್ಪು ಮಚ್ಚೆ ಇರುತ್ತದೆ.

ದಾವಣಗೆರೆ ನಗರದ ಎಸ್.ಜೆ.ಎಂ.ನಗರ, ರಿಂಗ್ ರಸ್ತೆಯ 16ನೇ ಕ್ರಾಸ್‌ನಲ್ಲಿ ವಾಸವಿರುವ ಮಾರುತಿ ಹೆಚ್. ಎಂಬುವವರ 23ವರ್ಷದ ಜ್ಯೋತಿ ಎಂ. ಎಂಬುವವರು ದಿ: 19/11/2021ರಿಂದ ಕಾಣೆಯಾಗಿರುತ್ತಾರೆ.  ಈಕೆಯ ಚಹರೆ 5.2 ಅಡಿ ಎತ್ತರ, ದುಂಡುಮುಖ, ನೀಳ ಮೂಗು, ತೆಳ್ಳನೆಯ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ತೆಲುಗು, ಇಂಗ್ಲೀಷ್ ಮಾತನಾಡುತ್ತಾರೆ. 

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ, ಸೀಎಂ ಸಿದ್ಧರಾಮಯ್ಯ ಖಂಡನೆ

CM Siddharamaiah ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ...

ಶಾಲಾ ಬಸ್ ಅತಿವೇಗ ಚಾಲನೆ, ಬೈಕಿಗೆ ಢಿಕ್ಕಿ‌ ಸವಾರನ ಸ್ಥಿತಿ ಗಂಭೀರ

ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ...

B.Y.Raghavendra ಆರ್.ಎಸ್.ಎಸ್. ಗೃಹ ಸಂಪರ್ಕ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಭಾಗಿ.

B.Y.Raghavendra ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು...