Thursday, October 3, 2024
Thursday, October 3, 2024

Bhagirath Jayanti ಭಗೀರಥ ಮಹಾನ್ ತಪಸ್ವಿ

Date:

Bhagirath Jayanti ರಾಜ್ಯ ಭಗೀರಥ ಜಯಂತಿ ಉಪ್ಪಾರ ಸಮಾಜದ ಕುಲ ಗುರುಗಳು, ಮೂಲ ತಪಸ್ವಿ ಋಷಿಗಳಾದಂತಹ ಶ್ರೀ ಶ್ರೀ ಭಗೀರಥ ಮಹರ್ಷಿಗಳ ಜಯಂತಿಯನ್ನು ಶಿವಮೊಗ್ಗ ಜಿಲ್ಲಾ ಉಪ್ಪಾರ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯಿಂದ ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಸರಳವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್.ಸಿ.ಯೋಗೇಶ್ ಅವರು ಮಾತನಾಡಿ, ನಿರಂತರ ತಪಸ್ಸಿನಿಂದ ದೇವಗಂಗೆ ಭೂಮಿಗಿಳಿಸಿದ ಮಹಾನ್ ತಪಸ್ವಿ ಭಗೀರಥ ವಂಶಸ್ಥರು. ಪುಣ್ಯಾತ್ಮರು ಇಂದೂ ಕೂಡ ಉಪ್ಪಾರ ಸಮಾಜದವರು ಬಹಳ ಸ್ವಾಭಿಮಾನಿಗಳಾಗಿ ಬದುಕುತ್ತಿದ್ದು, ನಿಜವಾದ ಶ್ರಮಿಕರು. ಅವರ ಸೇವೆ ಸ್ಮರಣೀಯವಾದದ್ದು ಈಶ್ವರನ ಪತ್ನಿಯಾದ ದೇವಗಂಗೆಯನ್ನೇ ಭೂಮಿಗೆ ಇಳಿದಂತಹ ಮಹಾನ್ ತಪಸ್ವಿಯ ಜನ್ಮ ಭೂಮಿಯಲ್ಲಿ ನಾವು ಹುಟ್ಟಿ ಪುನೀತರಾಗಿದ್ದೇವೆ. ಈ ಪುಣ್ಯ ಮಹಾಪುರುಷರ ಪುಣ್ಯಾದ ದಿನ. ಭಗಿರಥ ಜಯಂತಿಯ ದಿನಾಚರಣೆಯನ್ನು ಸರ್ಕಾರಿ ಎಲ್ಲಾ ಕಚೇರಿಗಳನ್ನು ಕೂಡ ಆಚರಿಸುವ ಭಾಗ್ಯವನ್ನು ತಂದುಕೊಟ್ಟದ್ದು ಸನ್ಮಾನ್ಯ ಶ್ರೀ ಮಾಜಿ ಮುಖ್ಯಮಂತ್ರಿಗಳಂತ ಸಿದ್ದರಾಮಯ್ಯನವರು ಅವರಿಗೆ ಧನ್ಯವಾದಗಳು ಹೇಳಿದರು.

Bhagirath Jayanti ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಟ್ಟಿಗೆ ಸೇರಿ ಮಹಾಪುರುಷನ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸುವ ದಿನಗಳು ಬಹಳ ಉಳಿದಿಲ್ಲ ಎಂದರು.

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಉಪ್ಪರ ಸಂಘದ ಅಧ್ಯಕ್ಷರಾದ.ಎಸ್ . ಟಿ ಹಾಲಪ್ಪ, ಪ್ರಧಾನ ಕಾರ್ಯದರ್ಶಿ ಕೆ.. ದೇವೇಂದ್ರಪ್ಪ, ಖಜಾಂಚಿ ಕಂಕರಿ ನಾಗರಾಜ್ ,ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಎಂಎಸ್ ಶಿವಕುಮಾರ್, ರಾಘವೇಂದ್ರ ಆರ್, ಉಪ್ಪಾರ ಸಮಾಜ ಮುಖಂಡರಾದ ಪ್ರಸನ್ನ ಕುಮಾರ್.,ಮುರಳಿ ಸಣ್ಣಕ್ಕಿ, ಎಸ್ ಕೆ ಭಾಸ್ಕರ್.. ಹಾಗೂ ಜನಪರ ನಾಯಕ ವೈ. ಹೆಚ್. ನಾಗರಾಜ್ ಅವರು ಶಿವಮೊಗ್ಗ ಜಿಲ್ಲಾಧ್ಯಕ್ಷರು ಎನ್. ಮಾಲತೇಶ್ ಕರ್ನಾಟಕ ರಾಜ್ಯ ಪತ್ರಿಕ ವಿಕಾರ ಒಕ್ಕೂಟ ಹಾಗೂ ಉಪ್ಪಾರ್ ಅಣ್ಣಪ್ಪ ಭಾಗವಹಿಸಿದ್ದರು. ಶಿವಮೊಗ್ಗ ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಉಮೇಶ್ ರವರು ಸರ್ವರನ್ನು ಸ್ವಾಗತಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Jawahar Navodaya Vidyalaya ಗಾಜನೂರಿನ ನವೋದಯ ಶಾಲಾ ಪ್ರವೇಶಾತಿ 2025-26 ಪರೀಕ್ಷೆಗೆ ಆನ್ ಲೈನ್ ಅರ್ಜಿ ಆಹ್ವಾನ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯವು 2025-26ನೇ ಸಾಲಿಗೆ 9...

Department of Parliamentary Affairs and Legislation ಅಕ್ಟೋಬರ್ 5 ರಂದು ನಡೆಯುವ “ಯುವ ಸಂಸತ್” ಸ್ಥಳ‌ ಬದಲಾವಣೆ ಗಮನಿಸಿ

Department of Parliamentary Affairs and Legislation ಸಂಸದೀಯ ಮತ್ತು ವ್ಯವಹಾರಗಳು...

MESCOM ಅ.4 ರಿಂದ7 ವರೆಗೆ ಮೆಸ್ಕಾಂ ಆನ್ ಲೈನ್ ಸೇವೆ ತಾತ್ಕಾಲಿಕ ಅಲಭ್ಯ

MESCOM ಅ.04ರಿಂದ 07 ರ ವರೆಗೆ ಮೆಸ್ಕಾಂ ಮಾಹಿತಿ ತಂತ್ರಜ್ಞಾನ...

Shivamogga Dasara ಶಿವಮೊಗ್ಗ ಚಲನಚಿತ್ರ ದಸರಾ ಚಾಲನೆಗೆ ಹಿರಿಯ ನಟಿ ಉಮಾಶ್ರೀ ಆಗಮನ

Shivamogga Dasara ಶಿವಮೊಗ್ಗ ಮಹಾ ನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿರುವ...