Sunday, December 14, 2025
Sunday, December 14, 2025

K.S.Eshwarappa ರಾಹುಲ್ ಗಾಂಧಿ ಕಾಲಿಟ್ಟಲೆಲ್ಲಾ ಕಾಂಗ್ರೆಸ್ ಸೋಲುತ್ತಿದೆ- ಕೆ.ಎಸ್.ಈಶ್ವರಪ್ಪ

Date:

K.S.Eshwarappa ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಕಾಲಿಟ್ಟಲೆಲ್ಲ ಕಾಂಗ್ರೇಸ್ ಸೋಲು
ಕಾಣುತ್ತಿದೆ ಹಾಗಾಗಿ ಶಿವಮೊಗ್ಗಕ್ಕೆ ಬಂದು ಭಾರತೀಯ ಜನತಾ ಪಕ್ಷದ ಅಭ್ಯರ್ಥಿ
ಎಸ್.ಎನ್.ಚನ್ನಬಸಪ್ಪರನ್ನು ಗೆಲ್ಲಿಸಬೇಕೆಂದು ಮಾಜಿ ಉಪ ಮುಖ್ಯಮಂತ್ರಿ
ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

ಕಾಂಗ್ರೇಸ್ ನಾಯಕ ರಾಹುಲ್
ಗಾಂಧಿಯವರು ಶಿವಮೊಗ್ಗಕ್ಕೆ ಕಾಲಿಟ್ಟರೆ ಬಿ.ಜೆ.ಪಿ ಅಭ್ಯರ್ಥಿ ಚನ್ನಬಸಪ್ಪ
ಗೆಲ್ಲುತ್ತಾರೋ ಅಥವಾ ಸೋಲುತ್ತಾರೋ ಅದು ನಂತರ ಇರಲಿ.

K.S.Eshwarappa ಚನ್ನಬಸಪ್ಪರನ್ನು ಸೋಲಿಸುವುದಕ್ಕೆ ಕೆ.ಎಸ್.ಈಶ್ವರಪ್ಪ ಪಕ್ಷದಲ್ಲೆ
ಇರಬೇಕಾದರೆ ರಾಹುಲ್ ಗಾಂಧಿಯೇಕೆ ಬರಬೇಕೆಂದು ಜಿಲ್ಲಾ ಕಾಂಗ್ರೇಸ್
ವಕ್ತಾರರಾದ ವೈ.ಬಿ.ಚಂದ್ರಕಾಂತ್ ಲೇವಡಿ ಮಾಡಿದ್ದಾರೆ.

ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿಯವರು ತಮ್ಮ ಪಕ್ಷದ
ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳುವುದಕ್ಕೆ ಮಾತ್ರ
ಪ್ರಜಾಪ್ರಭುತ್ವ ರೀತಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ರಾಹುಲ್
ಗಾಂಧಿಯವರನ್ನು ದೂರದಿಂದ ಅದೂ ಕೆ.ಎಸ್.ಈಶ್ವರಪ್ಪರಪ್ಪರೆ ಭರಿಸುವ
ಹೆಲಿಕಾಫ್ಟರ್ ಖರ್ಚನಲ್ಲಿ ಬಂದು ಬಿ.ಜೆ.ಪಿ.ಅಭ್ಯರ್ಥಿ ಚನ್ನಬಸಪ್ಪರನ್ನು
ಗೆಲ್ಲಿಸಬಹುದೇನೋ ಆದರೆ, ಚನ್ನಬಸಪ್ಪ ಗೆಲುವೇ ಬೇಕಾಗಿರದ
ಈಶ್ವರಪ್ಪರವರು ತಮ್ಮದೆ ಆದ ಕೂಟ ಕಟ್ಟಿಕೊಂಡು ಶತಾಯ ಗತಾಯ
ಚನ್ನಬಸಪ್ಪರನ್ನು ಸೋಲಿಸಲೇಬೇಕೆಂದು ನಿರ್ಧರಿಸಿರುವಾಗ ರಾಹುಲ್
ಗಾಂಧಿಯವರ ಅಗತ್ಯತೆ ಅಷ್ಷಾಗಿ ಕಂಡು ಬರುವುದಿಲ್ಲವೆಂದು ವಕ್ತಾರರಾದ
ವೈ.ಬಿ.ಚಂದ್ರಕಾಂತ್ ಟೀಕಿಸಿದ್ದಾರೆ.

ಒಂದೊಮ್ಮೆ ಚನ್ನಬಸಪ್ಪ ಚುನಾವಣೆಯಲ್ಲಿ ಗೆದ್ದರೆ ತಮ್ಮ ಪುತ್ರ
ಕಾತೇಶನ ರಾಜಕೀಯ ಜೀವನಕ್ಕೆ ಕೊಡಲಿ ಪೆಟ್ಟು ಬೀಳುವುದನ್ನು
ಮನಗಂಡಿರುವ ಕೆ.ಎಸ್.ಈಶ್ವರಪ್ಪ ಯಾವ ಬೆಲೆಯನ್ನಾದರೂ ತೆತ್ತು
ಚನ್ನಬಸಪ್ಪರನ್ನು ಸೋಲಿಸಲೇಬೇಕೆಂದು ಪಣ ತೊಟ್ಟಿದ್ದಾರೆನ್ನುವ ಗುಟ್ಟು
ಗುಟ್ಟಾಗಿಯೇನು ಉಳಿದಿಲ್ಲವೆಂದು ತಮ್ಮದೆ ಪಕ್ಷದಲ್ಲಿ ಕೇಳಿ ಬರುತ್ತಿರುವ
ಮಾತಾಗಿದೆ.

K.S.Eshwarappa ಈ ತಂತ್ರಗಾರಿಕೆಯ ನಡುವೆ ಕಾಂಗ್ರೇಸ್ ಅಭ್ಯರ್ಥಿಗೆ
ಹೆಚ್.ಸಿ.ಯೋಗೀಶ್‌ರವರ ಗೆಲುವಿಗೆ ಯಾವುದೇ ಅಡೆತಡೆ ಇಲ್ಲವೆಂದು, ಇನ್ನು
ಕೆ.ಎಸ್.ಈಶ್ವರಪ್ಪರವರು ಬೇರೆ ಪಕ್ಷಗಳ ಬಗ್ಗೆ, ಬೇರೆ ಪಕ್ಷಗಳ
ನಾಯಕರ ಸರ್ವನಾಶದ ಬಗ್ಗೆ ಸದಾ ಬಾಯಿಗೆ ಬಂದAತೆ
ಮಾತನಾಡುವುದಕ್ಕಾಗಿಯೆ ತಮ್ಮ ನಾಲಿಗೆ ಚಾಚಿಕೊಂಡೆ ಇರುತ್ತಾರೆಂದು
ವಕ್ತಾರರಾದ ವೈ.ಬಿ.ಚಂದ್ರಕಾಂತ್ ಟೀಕಿಸಿದ್ದಾರೆ.

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರವರು ಯಾವುದೆ ಮಹಾರಾಜರ ಕುಟುಂಬಕ್ಕೆ
ಸೇರಿದವರಲ್ಲ. ಆದರೂ ಅವರು ಗಳಿಸಿರುವ ಸಂಪತ್ತು ಎಷ್ಷೆಂದು ಅವರೇ
ಹೇಳಬೇಕು. ಇನ್ನು ಮೋತಿಲಾಲ್ ನೆಹರು ಮನೆತನ ಹಲವು ತಲೆಮಾರಿನಿಂದಲೆ
ಅಘರ್ಭ ಶ್ರೀಮಂತಿಕೆಯ ಕುಟುಂಬವಾಗಿದೆ. ನೆಹರು ಪುತ್ರಿ ಇಂದಿರಾ ಗಾಂಧಿ
ತಂದೆಯ ನೆರಳಿನಲ್ಲಿಯೆ ಬೆಳೆದು ಬಂದಿದ್ದರಿಂದ ಗಾಂಧಿ ಕುಟುಂಬಕ್ಕೂ
ದೇಶವನ್ನು ಕೊಳ್ಳೆ ಹೊಡೆಯಬೇಕಾದ ಅಗತ್ಯವಿರಲಿಲ್ಲ.

ಬಿ.ಜೆ.ಪಿ ನಾಯಕರ ಕುತಂತ್ರದಿಂದ ಸಂಸತ್ ಸದಸ್ಯ ಸ್ಥಾನ ಕಳೆದುಕೊಂಡಿರುವ ರಾಹುಲ್ ಗಾಂಧಿ,
ಕೇಂದ್ರ ಸರ್ಕಾರ ತಮಗೆ ನೀಡಿದ್ದ ನಿವಾಸವನ್ನು ತೆರವು ಮಾಡಬೇಕೆಂದು
ನೋಟೀಸ್ ನೀಡಿದ ಕೂಡಲೆ ಒಬ್ಬ ಮಾಜಿ ಪ್ರಧಾನ ಮಂತ್ರಿಯ ಪುತ್ರ, ಸಂಸತ್
ಸದಸ್ಯನಾಗಿದ್ದರೂ ವಾಸಿಸುವುದಕ್ಕೆ ಒಂದು ಮನೆ ಇಲ್ಲದಂತ್ತಾಗಿ ತಮ್ಮ ತಾಯಿ
ಸೋನಿಯಾ ಗಾಂಧಿಯವರ ಮನೆಗೆ ಹೋಗಬೇಕಾಯಿತ್ತು.

ಇಂತಹ ಪರಿಸ್ಥಿತಿ
ಕೆ.ಎಸ್.ಈಶ್ವರಪ್ಪರಿಗೆ ಇದೆಯೇ, ಇಂತದರಲ್ಲಿ ಇತ್ತೀಚಿನವರೆಗೂ ರಾಜಕೀಯ
ಅನೈತಿಕತೆ ಮತ್ತು ಭ್ರಷ್ಷಾಚಾರದ ಬಗ್ಗೆ ಮಾತನಾಡದ
ಕೆ.ಎಸ್.ಈಶ್ವರಪ್ಪರವರು ಅನೈತಿಕ ರಾಜಕೀಯದಿಂದಲೆ ಅಧಿಕಾರ
ಅನುಭವಿಸಿದವರು ಎನ್ನುವುದನ್ನು ಮರೆತಂತೆ ಇದೆ. ಆದರೆ,
ಕೆ.ಎಸ್.ಈಶ್ವರಪ್ಪರವರು ಕಳೆದಡರಡು ದಿನಗಳ ಹಿಂದೆ ಇಂದಿನ ರಾಜಕೀಯ
ಅನೈತಿಕತೆ ಮತ್ತು ಭ್ರಷ್ಷಾಚಾರದ ಬಗ್ಗೆ ಮಾತನಾಡಿರುವುದು ಕಾಂಗ್ರೇಸ್
ಪಕ್ಷಕ್ಕೆ ಅಷ್ಟೆ ಅಲ್ಲ.

ರಾಜ್ಯದ ಜನತೆಯಲ್ಲಿಯೆ ಆಶ್ಚರ್ಯ ಉಂಟು ಮಾಡಿದೆ ಎಂದು
ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್
ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Visvesvaraya Technological University ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ವಿಶೇಷ ಕಾರ್ಯಾಗಾರ

Visvesvaraya Technological University ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ "ಜ್ಞಾನ...

B.Y. Raghavendra ಶಿವಮೊಗ್ಗದಲ್ಲಿ ESIC ಉಪ-ಪ್ರಾದೇಶಿಕ ಕಚೇರಿ ಸ್ಥಾಪನೆಗೆ ಬಿ.ವೈ.ರಾಘವೇಂದ್ರ ಮನವಿ

B.Y. Raghavendra ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವರಾದ ಸನ್ಮಾನ್ಯ ಡಾ....

CM Siddharamaih ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸಭೆ

CM Siddharamaih ಸುವರ್ಣ ವಿಧಾನಸೌಧದಲ್ಲಿ ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ...