Saturday, December 6, 2025
Saturday, December 6, 2025

Shankara Jayanti Mahotsava ಶಂಕರ ಜಯಂತಿ ವಿಶೇಷ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ

Date:

Shankara Jayanti Mahotsava ಶಿವಮೊಗ್ಗ ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಶ್ರೀ ಶಂಕರ ಜಯಂತಿ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಶ್ರೀ ಶೋಭಕೃತ್‌ನಾಮ ಸಂವತ್ಸರದ ವೈಶಾಖ ಶುದ್ಧ ಪಾಡ್ಯದಿಂದ ಪಂಚಮಿಯವರೆಗೆ ಏ.21ರಿಂದ ಏ 25ರವರೆಗೆ ಪ್ರತಿದಿನ ಪ್ರಾತಃ 7 ರಿಂದ ಶ್ರೀ ಶಂಕರಾಚಾರ್ಯ ಸನ್ನಿಧಿಯಲ್ಲಿ ರುದ್ರಾಭಿಷೇಕ, ಪ್ರಾತಃ 11 ರಿಂದ 12 ರವರೆಗೆ ಶ್ರೀ ಶಂಕರ ವಿಜಯ ಪಾರಾಯಣ ಸಂಜೆ 5ರಿಂದ 6.30ವರೆಗೆ  ಶ್ರೀ ಶಂಕರ ಸ್ತೋತ್ರಮಾಲಾ,  ರಾಜಲಕ್ಷ್ಮೀ ರವರ ನೇತೃತ್ವದಲ್ಲಿ ಸೌಂದರ್ಯ ಲಹರಿ ಸತ್ಸಂಗ ನಡೆಯಲಿದೆ.

ಏ.22ರ ಇಂದು ಸಂಜೆ 6.30ಕ್ಕೆ ಸಮ್ಮಿತ್ ನಟೇಶ್‌ರವರಿಂದ ಕರ್ನಾಟಕ ಶಾಸ್ತ್ರೀ ಸಂಗೀತ, ಏ. 23 ರಂದು ಶ್ರೀ ಶಂಕರ ವಿಜಯ ಗಮಕ ವಾಚನ ಪ್ರೊ. ಸನತ್‌ಕುಮಾರ್ ಮತ್ತೂರು, ವ್ಯಾಖ್ಯಾನ ಅಚ್ಯುತ ಅವಧಾನಿಗಳು ಮತ್ತೂರು, ಏ. 24ರಂದು ಸಂಭ್ರಮ ಹೆಚ್. ಎಸ್ ಮತ್ತು ವೃಂದದವರಿಂದ ಭಕ್ತಿ ಸಂಗೀತ, ಏ. 25ರಂದು ಶ್ರೀ ಶೃಂಗೇರಿ ಶಂಕರ ಮಠದವರಿಂದ ಶ್ರೀ ಶಂಕರ ದರ್ಶನ ಗೀತ ರೂಪಕ ಪ್ರರ್ದಶನವಿದೆ.

Shankara Jayanti Mahotsava ಪ್ರತೀ ದಿನ ಕಾರ್ಯಕ್ರಮಗಳ ನಂತರ ಪ್ರಾಕಾರೋತ್ಸವ ನಡೆಯಲಿದೆ.

ಶ್ರೀ ಶಂಕರ ಜಯಂತಿ ಸೇವಾ ಕಾರ್ಯಗಳು ಹಾಗೂ ಹೆಚಿನ ವಿವರಗಳಿಗೆ ಸಂಪರ್ಕಿಸಿ: 7892137431 ಅಥವಾ 9448943937 ರಲ್ಲಿ ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...