Thursday, March 19, 2026
Thursday, March 19, 2026

BJP Karnataka ಶಿವಮೊಗ್ಗ ನಗರ ಬಿಜೆಪಿ ಅಭ್ಯರ್ಥಿಯಾಗಿ ಚನ್ನಬಸಪ್ಪ ಆಯ್ಕೆ

Date:

BJP Karnataka ಬಹಳ ದಿನಗಳಿಂದಲೂ ನೆನೆಗುದಿಗೆ ಬಿದ್ದಿದ್ದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆಯಾಗಿದೆ.
ಚನ್ನಬಸಪ್ಪ , ಆಪ್ತ ವಲಯದಲ್ಲಿ ಚೆನ್ನಿ ಎಂದೇ ಗುರುತಿಸಿಕೊಂಡಿದ್ದಾರೆ. ಅದೇ ಮನೆಮಾತಾಗಿದೆ.
ಕಟ್ಟಾ ಆರ್ ಎಸ್ಎಸ್ ಸ್ವಯಂಸೇವಕ. ಬಿಜೆಪಿ ಯಲ್ಲೂ ಮಿತ್ರರೆಲ್ಲರ ಚೆನ್ನಿ.
ನಗರದ ಸಾಂಸ್ಕೃತಿಕ ಸಂಘಸಂಸ್ಥೆಗಳ ನೇತೃತ್ವ.
ಹಿಂದೂ ಸಮಾಜದ ಹಿತ ರಕ್ಷಿಸುವಲ್ಲಿ ಹಾಲೀ ಎಸ್ ಈಶ್ವರಪ್ಪನವರ ಹೆಜ್ಜೆಯಲ್ಲಿ ಹೆಜ್ಜೆಯಿಡುವ ಆತ್ಮೀಯ.

ನಾಳೆ ಚನ್ನಬಸಪ್ಪ ನಾಮಪತ್ರ ಸಲ್ಲಿಸಲಿದ್ದಾರೆ.
ಚುನಾವಣೆಯಂತೂ
ಟೈಟ್ ಫೈಟ್.
ಸಾಮಾಜಿಕ ಸಾಮರಸ್ಯ ಮತ್ತು ಅಭಿವೃದ್ಧಿ ಈ ಬಗ್ಗೆ ಮುಂದೆ ಸಮನ್ವಯ ಮಾಡಿಕೊಂಡು ಹೋಗುವವರ ಅಗತ್ಯವಿದೆ.

ಶಿವಮೊಗ್ಗ ನಗರಕ್ಕೀಗ ಶಾಂತಿ ನೆಮ್ಮದಿಯಿಂದ ಉಸಿರಾಡುವ ಹವೆ ಅವಶ್ಯ.ಆ ದಿಸೆಯಲ್ಲಿ
ಗೆದ್ದ ಅಭ್ಯರ್ಥಿಯ ನೈತಿಕ ಹೊಣೆ ಅಪಾರ.

BJP Karnataka ಯಾವಪಕ್ಷಕ್ಕೆ ಜಯಮಾಲೆ?ಗೆಲ್ಲುವ ಅಭ್ಯರ್ಥಿ ಯಾರು?
ಅವರ ವೈಯಕ್ತಿಕ ನಿಲುವುಗಳು, ಪಕ್ಷದ ಸಿದ್ಧಾಂತ
ಈ ಅಂಶಗಳೇ ಶಿವಮೊಗ್ಹ ನಗರಕ್ಕೆ ಹೊಸಭಾಷ್ಯ ಬರೆಯಲು ಸಾಧ್ಯವಾಗಬಹುದು.

ಸುದ್ದಿ ತಿಳಿದ ತಕ್ಷಣ ಕೆ..ಎಸ್.ಈಶ್ವರಪ್ಪನವರು ಬಿಜೆಪಿ ವರಿಷ್ಡರ
ತೀರ್ಮಾನ ಸ್ವಾಗತಿಸುತ್ತೇನೆ. ಚನ್ನಿ ಅವರನ್ನ ಗೆಲ್ಲಿಸುವವರೆಗೂ ಸುಮ್ಮನೆ ಕೂರಲಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಈ ಬೆಳಿಗ್ಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಮೆರವಣಿಗೆ ಮುಖಾಂತರ ಬಿಜೆಪಿ ಅಭ್ಯರ್ಥಿಯಾಗಿರುವ
ಚನ್ನಬಸಪ್ಪ ಅವರು ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ನಾಮಪತ್ರ ಸಲಿಸುತ್ತಾರೆ.ಜಿಲ್ಲಾ ಬಿಜೆಪಿ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...