Saturday, September 28, 2024
Saturday, September 28, 2024

JDS Karnataka ಜೆಡಿಎಸ್ ತೆನೆ ಹೊತ್ತಆಯನೂರು ಮಂಜುನಾಥ್

Date:

JDS Karnataka ರಾಜಕೀಯದಲ್ಲಿ ಯಾವುದೂ ನಿಶ್ಚಿತವಲ್ಲ. ಸಿದ್ಧಾಂತಗಳ ಬಗ್ಗೆ ಪುಂಖಾನುಪುಂಖ ಭಾಷಣ ಬಿಗಿಯುತ್ತಿರುತ್ತಾರೆ.
ಮತದಾರರು ಅವರ ಪಕ್ಷನಿಷ್ಠೆಯನ್ನ ನೋಡಿ ತಲೆದೂಗುತ್ತೇವೆ.
ಶಿವಮೊಗ್ಗದ ಬಿಜಿಪಿ ಒಬ್ಬ ಒಳ್ಳೆಯ ವಾಗ್ಮಿ‌ ಅಂತ ಇದ್ದ ಆಯನೂರು ಮಂಜುನಾಥ್ ಈಗ ತಮ್ಮ ಲಹರಿಯನ್ನೇ ಬದಲಿಸಿಕೊಂಡಿದ್ದಾರೆ.ಬಿಜೆಪಿಯಿಂದ ಶಾಸಕ ರಾಜ್ಯಸಬೆ ಲೋಕಸಭೆ ಸದಸ್ಯತ್ವ ಅನುಭವಿಸಿದ್ದರು.

ಈಗ ಈ ಬಾರಿ ಅವರಿಗೆ ಬಿಜೆಪಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅನುವು ಮಾಡಿಕೊಡಲಿಲ್ಲ. ಹಾಲಿ ಶಾಸಕ
ಈಶ್ವರಪ್ಪನವರ ಮೇಲೆ ಗರಂ ಆಗಿ ಹೇಳಿಕೆ ನೀಡಿದ್ದರು. ಫ್ಲೆಕ್ಸಿ ಹಾಕಿಸಿ ಸುದ್ದಿಮಾಡಿ ಒಂದಿಷ್ಟು ನಾಯಕರ ಗಮನವನ್ನೂ ಸೆಳೆದಿದ್ದರು.

ಅದಕ್ಕೆ ಪ್ರತಿಯಾಗಿ ಈಶ್ವರಪ್ಪನವರ ಪಕ್ಷನಿಷ್ಠೆ ,ಆಯನೂರು ಮಂಜುನಾಥರ ಹೇಳಿಕೆಗಳನ್ನೆಲ್ಲ ಸೋಪಿನಂತೆ ನಿಚ್ಚಳ ಮಾಡಿತು.

JDS Karnataka ಸದ್ಯ ಶೆಟ್ಟರ ‌ಘರ್ ಛೋಡೋ ಅಭಿಯಾನ ಮತ್ತೆಲ್ಲಿ
ಶಿವಮೊಗ್ಗಕ್ಕೂ ಮುಟ್ಟಿತೋ ಅನ್ನುವಷ್ಟರಲ್ಲಿ ಆಯನೂರು ಹಿಂದಿನ ಚಾಳಿಯನ್ನೇ ಮುಂದುವರೆಸಿದ್ದಾರೆ.

ಮಲ್ಯರ ಪಾರ್ಟಿ, ಕಾಂಗ್ರೆಸ್, ಈಗ ಜೆಡಿಎಸ್. ವಿಚಾರಧಾರೆಗೆ ಹೆಸರಾದ ವ್ಯಕ್ತಿ. ಈಗ
ಟಿಕೆಟ್ ಗಾಗಿ ಅಲೆಮಾರಿಯಾಗಿದ್ದರು. ಎಲ್ಲವೂ ಅವರವರ ಆಯ್ಕೆ ನಿಜ. ಆದರೆ ಸದ್ಯ ಅವರು ಪಕ್ಷೇತರರಾಗಿ
ಚುನಾವಣಾ ಅಖಾಡಕ್ಕೆ ಇಳಿದಿದ್ದರೆ
ಅವರ ಅಭಿಮಾನಿಗಳು ಬೇಸರ ಮಾಡಿಕೊಳ್ಳುತ್ತಿರಲಿಲ್ಲ ಅಷ್ಟೆ.

ಚಿತ್ರದುರ್ಗದಲ್ಲಿ ಜೆಡಿಎಸ್ ಮುಖಮಣಿ ಕುಮಾರಸ್ವಾಮಿ ಅವರ ಸಮ್ಮುಖ ಪಕ್ಷ ಸೇರಿದ್ದಾರೆ.
ಕಡೂರು ವೈಎಸ್ ವಿ ದತ್ತ ಅವರ ಸಂಗತಿಗೂ ಮಂಜುನಾಥ್ ಅವರ ವಿಚಾರಕ್ಕೂ ಅಜಗಜಾಂತರವಿದೆ.

ಏನೇ ಆಗಲಿ ಬಿಜೆಪಿಗೆ
ಒಂದು ಮೈನಸ್ಸು. ಆದರೆ ಅಭ್ಯರ್ಥಿಗಳಿಲ್ಲದೇ ಸೊರಗುತ್ತಿದ್ದ ಜೆಡಿಎಸ್ ಒಂದು ಪ್ರಮುಖ ಸೇರ್ಪಡೆ ಎಂಬ ಅಂಶವಂತೂ ದಿಟ.
ಆಯನೂರು ಮಂಜುನಾಥ್ ಅಂಥವರು
ರಾಜಕೀಯದಲ್ಲಿರ ಬೇಕು. ಅವರಿಗೆ ಶುಭವಾಗಲಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...