Thursday, March 19, 2026
Thursday, March 19, 2026

Bjp Karnataka ಹೈಕಮಾಂಡ್ ಕಸರತ್ತಿಗೆ ಕ್ಯಾರೆ ಅನ್ನದ ಶೆಟ್ಟರ್

Date:

Bjp Karnataka ಉತ್ತರ ಕರ್ನಾಟಕ ಭಾಗದ ಪ್ರಭಾವಿ ನಾಯಕ ಶೆಟ್ಟರ್ ಈಗ ಬಿಜೆಪಿಯಲ್ಲಿ ಉಳಿದಿಲ್ಲ. ರಾಜಿನಾಮೆ ನೀಡಿ ಆಗಿದೆ.

ಕೇಂದ್ರದಿಂದ ಹೈಕಮಾಂಡ್ ಪರವಾಗಿ ಬಂದ ಧರ್ಮೇಂದ್ರ ಪ್ರಧಾನ್
ಅವರ ರಾಯಭಾರ ಫಲಿಸಲಿಲ್ಲ. ಸಚಿವ ಪ್ರಹ್ಲಾದ್ ಜೋಷಿ ಕೂಡ ಇದ್ದರು.
ಸ್ವತಃ ಶೆಟ್ಟರ್ ನಿವಾಸಕ್ಕೇ ಬಂದು ಸಮಾಲೋಚನೆ ನಡೆಸಿದರು. ಆದರೆ ಎಲ್ಲವೂ ಹೊಳೆ ನೀರಿನಲ್ಲಿ ಹುಣಿಸೇ ಹಣ್ಣು ಕಿವುಚಿದಂತಾಯಿತು.
ಈ ಬಗ್ಗೆ ಸ್ಪಷ್ಟವಾಗಿ ಶೆಟ್ಟರ್ ನಿವಾಸದಲ್ಲಿ ಏನೇನು‌ ಮಾತುಕತೆಯಾಯಿತು? ಎನ್ನುವುದು ತಡರಾತ್ರಿ ಸ್ಪಷ್ಟತೆ ಇರಲಿಲ್ಲ. ಈಗಷ್ಟೇ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಅವರಿಂದ ವಿಷಯ ಬಹಿರಂಗವಾಗಿದೆ.
ಆ ಅಂಶಗಳಾವುವು ಎನ್ನುವುದನ್ನ ಪರಿಶೀಲಿಸೋಣ.

Bjp Karnataka ನಿವೃತ್ತಿ ಆಗು ಅಂತ ಮುಂಚಿತವಾಗಿಯೇ ಹೇಳಿದ್ದ ಶೆಟ್ಟರ್ ಮಾತಿಗೆ ಬಿಎಸ್ ವೈ
ಪ್ರತಿಕ್ರಿಯಿಸಿದರು.
ನಿವೃತಗತಿಯಾಗಿ ಎಂಬ ಪ್ರಸ್ತಾಪ ಶೆಟ್ಟರ್ ಅವರಿಗೆ ಹೇಳುವ ಇರಾದೆ ಹೈಕಮಾಂಡ್ ಗೆ ಇರಲಿಲ್ಲ.
ಶೆಟ್ಟರ್ ಅವರಿಗೆ ಟಿಕೆಟ್ ನಿರಾಕರಣೆ ವಿಷಯ ತಿಳಿಸಲಾಯಿತು. ಅದಕ್ಕೆ ಪ್ರತಿಯಾಗಿ ಕೇಂದ್ರ ಸಚಿವ ಸ್ಥಾನ ಅಥವಾ ಉನ್ನತ ಹುದ್ದೆ ನೀಡುವ ಪ್ರಸ್ತಾಪ ತಿಳಿಸಲಾಗಿದೆ ಎಂದು ಬಿಎಸ್ ವೈ ಮಾಧ್ಯಮದವರಿಗೆ ತಿಳಿಸಿದರು.
ಪಕ್ಷ ಎಲ್ಲ ಸ್ಥಾನಮಾನಗಳನ್ನ ತಮಗೆ,ಈಶ್ವರಪ್ಪನವರಿಗೆ , ಸವದಿ ಅವರಿಗೆ
ನೀಡಿದೆ. ತಾವು ಮುಖ್ಯಮಂತ್ರಿ ಸ್ಥಾನಕ್ಕೆ ಸ್ವಪ್ರೇರಣೆಯಿಂದಲೇ
ರಾಜಿನಾಮೆ ನೀಡಿದೆ.
ಪಕ್ಷದಲ್ಲಿ ಹೊಸ ಮುಖ ,ಹೊಸ ಬೆಳವಣಿಗೆಗಳಿಗೆ ಅವಕಾಶ ಸಿಗಲಿಕ್ಕೆ ಅನುವುಮಾಡಿಕೊಟ್ಟೆವು. ಶೆಟ್ಟರ್ ಅವರು ಸ್ಪಂದಿಸಬಹುದಾಗಿತ್ತು.ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ. ತಿಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...