Sunday, December 14, 2025
Sunday, December 14, 2025

Cast Reservation ಒಳ ಮೀಸಲಾತಿ ವಿಚಾರಗಳ ಬಗ್ಗೆ ಬಂಜಾರ ಸಮುದಾಯದ ಸಭಾ ನಿರ್ಣಯಗಳು

Date:

Cast Reservation ಇತ್ತೀಚೆಗೆ ರಾಜ್ಯ ಸರ್ಕಾರದಿಂದ ಕೈಗೊಂಡಿರುವ ಒಳ ಮೀಸಲಾತಿ ವರ್ಗೀಕರಣ ಕುರಿತ ತೀರ್ಮಾನದ ಬಗ್ಗೆ ಲಂಬಾಣಿ ತಾಂಡಾಗಳಲ್ಲಿ ಬೇರೆ ಬೇರೆ ರೀತಿಯ ಸುದ್ದಿಗಳು ಹಬ್ಬಿಸುತ್ತಿದ್ದು, ಜನರ ನೆಮ್ಮದಿ ಕೆಡುತ್ತಿದೆ. ಸರಿಯಾದ ಮಾಹಿತಿಯ ಕೊರತೆ ಮತ್ತು ಅಪಪ್ರಚಾರದ ಕಾರಣ ಕೆಲವು ಮುಖಂಡರ ವಿರುದ್ಧ ಸಮುದಾಯದ ಜನ ಆಕ್ರೋಶಿತರಾಗಿ ಕೆಲವು ಅಹಿತಕರ ಘಟನೆಗಳಿಗೆ ಕಾರಣವಾಗಿವೆ.

ಈ ಘಟನೆಗಳ ಬಗ್ಗೆ ಸಮುದಾಯದ ಮುಖಂಡರು ವಿಷಾದ ವ್ಯಕ್ತಪಡಿಸಿ ದಿನಾಂಕ:09-04-2023 ರಂದು ಬೆಳಿಗ್ಗೆ 11:00 ಘಂಟೆಗೆ ಶಿವಮೊಗ್ಗ ಬಂಜಾರ ಭವನದಲ್ಲಿ ಸಮುದಾಯದ ಮುಖಂಡರಾದ ಡಾ. ಸಣ್ಣರಾಮರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಮೀಸಲಾತಿ ಸಂರಕ್ಷಣಾ ಒಕ್ಕೂಟದ ರಾಜ್ಯಾಧ್ಯಕ್ಷರಾದ ರಾಘವೇಂದ್ರ ನಾಯ್ಕರವರು ರಾಜ್ಯ ಸರ್ಕಾರ ಇತ್ತೀಚೆಗೆ ಕೈಗೊಂಡ ತೀರ್ಮಾನಗಳಲ್ಲಿ ಬಹುಪಾಲು ತೀರ್ಮಾನಗಳು ಸಮುದಾಯದ ಹಿತ ಕಾಪಾಡುವ ಅಂಶಗಳಿದ್ದು, ಅವುಗಳನ್ನು ತಾಂಡ ನಿವಾಸಿಗಳಿಗೆ ಮನವರಿಕೆ ಮಾಡಬೇಕಾಗಿದೆ.

Cast Reservation ಒಳ ಮೀಸಲಾತಿ ವರ್ಗೀಕರಣದ ವಿಚಾರದಲ್ಲಿ ಕೆಲವು ಸಮಸ್ಯೆಗಳಿದ್ದು, ಅವುಗಳನ್ನು ಚುನಾವಣೆಯ ನಂತರ ಸರ್ಕಾರದ ಗಮನ ಸೆಳೆದು, ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.

ಸಭೆಯಲ್ಲಿ ಹಾಜರಿದ್ದ ಹಿರಿಯ ಮುಖಂಡರುಗಳಾದ ಡಾ|| ಸಣ್ಣರಾಮ ನಿವೃತ್ತ ಹಿರಿಯ ಅಧಿಕಾರಿಗಳಾದ ಬಿ.ಪಿ. ಕನಿರಾಂ, ಹೀರಾನಾಯ್ಕ, ಭೋಜ್ಯಾನಾಯ್ಕ, ತಾರ‍್ಯಾನಾಯ್ಕ, ಗಂಗಾನಾಯ್ಕಗೊಂದಿ, ಮೀಸಲಾತಿ ಸಂರಕ್ಷಣಾ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ವೈ. ನಾನ್ಯಾನಾಯ್ಕ, ಜಿಲ್ಲಾ ಬಂಜಾರ ಸಂಘದ ನಿರ್ದೇಶಕರುಗಳಾದ ನಾಗೇಶನಾಯ್ಕ, ಗಿರಿಯಾನಾಯ್ಕ, ಆನಂದನಾಯ್ಕ, ಸಕ್ರ್ಯನಾಯ್ಕ, ಆಯನೂರು ಶಿವಾನಾಯ್ಕ ಸೇರಿದಂತೆ ಅನೇಕರು ಮಾತನಾಡಿ ಈ ಕೆಳಗಿನಂತೆ ನಿರ್ಣಯ ಕೈಗೊಳ್ಳಲಾಯಿತು.

ಸಭೆಯ ನಿರ್ಣಯಗಳು:
01.ಕರ್ನಾಟಕ ಸರ್ಕಾರದ ಮೀಸಲಾತಿ ವರ್ಗೀಕರಣದ ಆದೇಶವನ್ನು ಚುನಾವಣೆಯ ಅಸ್ತçವಾಗಿ ಸಮುದಾಯವು ಬಳಸಬಾರದೆಂದು ನಿರ್ಣಯಿಸಲಾಯಿತು.

02.ಸಮುದಾಯದ ಕೆಲವು ಸಂಘ-ಸಂಸ್ಥೆಯ ಪದಾಧಿಕಾರಿಗಳು ಹಾಗೂ ಮುಖಂಡರುಗಳು ರಾಜಕೀಯ ದುರುದ್ದೇಶದಿಂದ ಪ್ರಚೋದಿಸುವ, ಉದ್ವೇಗದ ಹೇಳಿಕೆಗಳಿಗೆ ಸಮುದಾಯದ ಬಂಧುಗಳು ಕಿವಿಗೊಡಬಾರದೆಂದು ಹಾಗೂ ಇಂತಹ ಮುಖಂಡರುಗಳಿಂದ ಸಮುದಾಯ ದೂರವಿರಬೇಕೆಂದು ತೀರ್ಮಾನಿಸಲಾಯಿತು.

  1. ಒಳ ಮೀಸಲಾತಿ ವರ್ಗಿಕರಣದ ಆದೇಶ ಹೊರತುಪಡಿಸಿ ಉಳಿದ ಅಂಶಗಳು ಸಮಾಜಕ್ಕೆ ಪೂರಕವಾಗಿರುವುದರಿಂದ ಒಳ ಮೀಸಲಾತಿ ವರ್ಗಿಕರಣ ವಿಚಾರವನ್ನು ಚುನಾವಣೆಯ ನಂತರ ಶಾಂತಿಯುತವಾಗಿ ಸರ್ಕಾರದೊಂದಿಗೆ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ತೀರ್ಮಾನಿಸಲಾಯಿತು.

04.ಯಾವುದೇ ಕಾರಣಕ್ಕೂ ಮೀಸಲಾತಿ ವಿಚಾರದಲ್ಲಿ ತಾಂಡದ ನಿವಾಸಿಗಳು ಚುನಾವಣೆ ಬಹಿಷ್ಕಾರ ಹಾಗೂ ಒಂದು ಪಕ್ಷವನ್ನು ಗುರಿಯಾಗಿಸಿಕೊಂಡು ಅವಹೇಳನ ಹಾಗೂ ಪ್ರಚೋದನಾಕಾರಿ ನಡೆಗಳನ್ನು ಮಾಡದಂತೆ ಸಂಯಮ ವಹಿಸಬೇಕೆಂದು ನಿರ್ಣಯಿಸಲಾಯಿತು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...