Friday, December 5, 2025
Friday, December 5, 2025

Ramzan Festival ರಂಜಾನ್ ಹಿನ್ನೆಲೆಯಲ್ಲಿ ಬಡವರಿಗೆ ದಿನಸಿ ಕಿಟ್ ವಿತರಣೆ

Date:

Ramzan Festiva ಪವಿತ್ರ ಹಬ್ಬದ ರಂಜಾನ್ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಗೌರಿಕಾಲುವೆಯ ನೂರಾನಿ ಮಸೀದಿಯಲ್ಲಿ ನೂರಾನಿ ನೌಜವಾನ್ ಚಾರಿಟೇಬಲ್ ವತಿಯಿಂದ ಮುಸ್ಲಿಂ ಸಮುದಾ ಯದ ಬಡವರ್ಗದವರಿಗೆ ಹಬ್ಬದ ಪ್ರಯುಕ್ತ ದಿನಸಿ ಕಿಟ್ ವಿತರಣೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಚಾರಿಟೇಬಲ್ ಅಧ್ಯಕ್ಷ ನೂರ್ ಮೊಹಮ್ಮದ್ ಪ್ರತಿಯೊಬ್ಬ ಮುಸ್ಲೀಂ ಬಾಂಧವರಿಗೆ ರಂಜಾನ್ ಪವಿತ್ರ ಹಬ್ಬವಾಗಿದೆ. ಕೆಲವು ಮಂದಿ ಆರ್ಥಿಕವಾಗಿ ಸದೃಢರಾಗಿರದ ಕುಟುಂಬಗಳಿಗೆ ಹಬ್ಬ ಆಚರಣೆ ಗಾಗಿ ಸಿ.ಎನ್.ಅಕ್ಮಲ್ ಅವರ ಸಹಯೋಗದಲ್ಲಿ ದಿನಸಿ ಕಿಟ್ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

Ramzan Festival ರಂಜಾನ್ ಹಬ್ಬದ ಸಂದರ್ಭದಲ್ಲಿ ಸಮುದಾಯದ ಯಾರೋಬ್ಬರು ಸಹ ಹಸಿನಿಂದ ಬಳಲಬಾರದು ಎಂಬ ಸದುದ್ದೇಶದಿಂದ ಸಾಮಾಜಿಕ ಸೇವೆಗಳ ಮೂಲಕ ಕಾರ್ಯಕ್ರಮ ಆಯೋಜಿಸಲಾಗಿದೆ. ಜೊತೆಗೆ ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಗಳನ್ನು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾಡಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನೂರಾನಿ ನೌಜವಾನ್ ಚಾರಿಟೇಬಲ್ ಉಪಾಧ್ಯಕ್ಷ ನೂರ್, ಪ್ರಧಾನ ಕಾರ್ಯದರ್ಶಿ ಮುಂತೀಕ್, ಕಾರ್ಯದರ್ಶಿ ಅಜ್ಗರ್, ಖಜಾಂಚಿ ಆಲಿ, ಸ್ಥಳೀಯರಾದ ಮುನ್ನಬಾಯ್ ಹಾಗೂ ಮಸೀದಿಯ ಗುರುಗಳು, ಮಹಿಳೆಯರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...