Saturday, September 28, 2024
Saturday, September 28, 2024

Shivammogga IMA Branch ರಾಜಾಸ್ತಾನ್ ಆರೋಗ್ಯ ಹಕ್ಕು ಕಾಯಿದೆ ಬಗ್ಗೆ ಶಿವಮೊಗ್ಗ ಐಎಂಎ ಶಾಖೆಯಿಂದ ಖಂಡನೆ

Date:

Shivammogga IMA Branch ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆಯು 27.3.2023 ರಂದು ದೇಶದಾದ್ಯಂತ ನಡೆಯುತ್ತಿರುವ ರಾಜಸ್ಥಾನ ಆರೋಗ್ಯ ಹಕ್ಕು ಮಸೂದೆ 2023ರ ಕುರಿತು ಕಪ್ಪು ದಿವಸ ದಲ್ಲಿ ಭಾಗಿಯಾಯಿತು .
ರಾಜಸ್ಥಾನದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಅಶೋಕ್ ಗೆಹ್ಲೋಟ್ ಜಿಗೆ ,
ಜಿಲ್ಲಾಧಿಕಾರಿಗಳ ಕಛೇರಿಯ ಮುಖಾಂತರ ಈ ಬಿಲ್ ವಿರುದ್ಧ ನಮ್ಮ ಆಕ್ಷೇಪ ವ್ಯಕ್ತ ಪಡಿಸಿರುವ ಪತ್ರ ರವಾನಿಸಲಾಯಿತು .

ಅಸಂವಿಧಾನಿಕ RTH ( ಆರೋಗ್ಯ ಹಕ್ಕು ಮಸೂದೆ ) ಬಿಲ್ 2023 ಅನ್ನು ರಾಜಸ್ಥಾನ ವಿಧಾನಸಭೆಯು ಇತ್ತೀಚೆಗೆ ಅಂಗೀಕರಿಸಿದೆ. ಈ ಕಾನೂನು ಖಾಸಗಿ ವಲಯದ ಆಸ್ಪತ್ರೆಗಳೂ ಸಹ ತುರ್ತು ಸಂದರ್ಭಗಳಲ್ಲಿ ಎಲ್ಲರಿಗೂ ಉಚಿತ ಚಿಕಿತ್ಸೆಯನ್ನು ಒದಗಿಸುವುದನ್ನು ಒಳಗೊಂಡಿದೆ. ಆದರೆ “ತುರ್ತು” ಪರಿಸ್ಥಿತಿ ಅಂದರೆ ಏನೆಂದು ವ್ಯಾಖ್ಯಾನ ನೀಡುವಲ್ಲಿ ಈ ಪ್ರಸ್ತುತ ಕಾನೂನು ವಿಫಲವಾಗಿದೆ.ಇದರಿಂದಾಗಿ ರಾಜಸ್ಥಾನದ ವೈದ್ಯಕೀಯ ವೃತ್ತಿಯು ಮತ್ತು ಸಾರ್ವಜನಿಕ ಆರೋಗ್ಯವು ಆತಂಕಕ್ಕೊಳಗಾಗಿದೆ.
ಸಾರ್ವಜನಿಕರ ಆರೋಗ್ಯದ ಹಕ್ಕು ರಾಜ್ಯ ಸರಕಾರಕ್ಕೆ ಸಂಬಂಧಿಸಿದ ಜವಾಬ್ದಾರಿಯಾಗಿದ್ದು ಇದರ ಹೊಣೆ ಸರ್ಕಾರಿ ಆಸ್ಪತ್ರೆಗಳು ಮತ್ತು ಸಂಸ್ಥೆಗಳು ಹೊರಬೇಕಾಗಿವೆ. ಈ ಹೊಣೆಗಾರಿಕೆಯನ್ನು ಖಾಸಗಿಯವರಿಗೆ ವರ್ಗಾಯಿಸುವ ಮೂಲಕ ಸರ್ಕಾರವು ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದೊಂದು ಕೆಟ್ಟ ಕಾನೂನಾಗಿರುವುಲ್ಲದೆ. ಈಗಾಗಲೇ ದುರ್ಬಲವಾಗಿರುವ ಖಾಸಗಿ ಆರೋಗ್ಯ ವ್ಯವಸ್ಥೆಯ ಕುಸಿತ ಸೇರಿದಂತೆ ಅನೇಕ ಅನಿರೀಕ್ಷಿತ ಪರಿಣಾಮಗಳನ್ನು ಇದು ಉಂಟುಮಾಡುತ್ತದೆ. ಭಾರತದ ಶೇ.70-80 ಆರೋಗ್ಯ ಸೇವಾಸೌಲಭ್ಯಗಳ ಹೊಣೆ ಹೊತ್ತು ರಾಷ್ಟ್ರ ನಿರ್ಮಾಣ ಮತ್ತು ಆರೋಗ್ಯ ವಿತರಣೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಖಾಸಗಿ ಕ್ಷೇತ್ರಕ್ಕೆ ಮಾರಕವಾಗಿರುವ ಈ ಕ್ರಮವು ನಮ್ಮ ರಾಷ್ಟ್ರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಿರುವುದಿಲ್ಲ.

ಈ ದಿಸೆಯಲ್ಲಿ ದೇಶದ ಎಲ್ಲಾ ವೈದ್ಯರು ಮತ್ತು ಆಸ್ಪತ್ರೆಗಳು ಆರೋಗ್ಯ ರಕ್ಷಣೆ ಮತ್ತು ಖಾಸಗಿ ವಲಯದ ಉಳಿವಿಗಾಗಿ ಜೊತೆಗೆ ರಾಜ್ಯದ ಜವಾಬ್ದಾರಿಯನ್ನು ಮನವರಿಕೆ‌ ಮಾಡುವ‌ ನಿಟ್ಟಿನಲ್ಲಿ ಆಂದೋಲನದ ಹಾದಿ ಹಿಡಿದಿವೆ.
ಈ ಸಂದರ್ಭದಲ್ಲಿ ವೈದ್ಯರ ಮೇಲೆ ಸರ್ಕಾರ ನಡೆಸಿದ ಪೋಲೀಸ್ ದಬ್ಬಾಳಿಕೆಯು ನಮ‌್ಮೆಲ್ಲರನ್ನು ದಂಗು‌‌ ಬಡಿಸಿದೆ .ಭಾರತೀಯ ವೈದ್ಯಕೀಯ ‌ಸಂಘವು ಇದನ್ನು ‌ಖಂಡಿಸುವುದಲ್ಲದೆ ರಾಜಸ್ಥಾನ ಸರ್ಕಾರವು ಈ ಕಪ್ಪು ಕಾನೂನನ್ನು ಹಿಂಪಡೆಯಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಐಎಂಎ ಅಧ್ಯಕ್ಷರಾದ ಡಾ . ಅರುಣ್ ಎಂ ಎಸ್ ಹೇಳಿದರು .

Shivammogga IMA Branch ಈ ವಿಷಯದಲ್ಲಿ ಇಡೀ ರಾಷ್ಟದ ಎಲ್ಲ ವೈದ್ಯರು ರಾಜಸ್ಥಾನದ ವೈದ್ಯರ ಮತ್ತು ಆಸ್ಪತ್ರೆಗಳಿಗೆ ಬೆಂಬಲ ಸೂಚಿಸುತ್ತಿದ್ದು ಒಗ್ಗಟ್ಟಿನಿಂದ ನಿಂತಿದೆ. ಸೋಮವಾರ ದಿನದಂದು ಕಪ್ಪು ಪಟ್ಟಿ ಇಟ್ಟುಕೊಂಡು ಈ ಕಾನೂನಿನ ವಿರುದ್ಧ ಮೌನ ಪ್ರತಿಭಟನೆ ಮಾಡಿದ್ದಾರೆ . ಜಿಲ್ಲಾಧಿಕಾರಿ ಕಛೇರಿಗೆ ಪತ್ರ ಸಲ್ಲಿಸುವಲ್ಲಿ ಅಧ್ಯಕ್ಷರೊಂದಿಗೆ ಉಪಾಧ್ಯಕ್ಷರಾದ ಡಾ . ರವೀಶ್ , ಕಾರ್ಯದರ್ಶಿ ಡಾ . ರಕ್ಷಾ ರಾವ್ , ಐಎಂಎ ಸದಸ್ಯರಾದ ಡಾ . ಎಚ್ . ನಾಗರಾಜ್ , ಡಾ .ಶ್ರೀನಿವಾಸ್ , ಡಾ . ಶುಭ್ರತ ಉಪಸ್ಥಿತರಿದ್ದರು .

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...