Friday, April 10, 2026
Friday, April 10, 2026

Dr.Sarji shimogga ಡಬಲ್ ಇಂಜಿನ್ ಸರ್ಕಾರದ ಸಾಧನೆಗಳನ್ನ ಜನರಿಗೆ ತಿಳಿಸಬೇಕು- ಡಾ.ಸರ್ಜಿ

Date:

Dr.Sarji shimogga  ಬಿಜೆಪಿ ಡಬಲ್‌ ಎಂಜಿನ್‌ ಸರಕಾರ ಕೈಗೊಂಡಂತಹ ಮಹತ್ತರ ಅಭಿವೃದ್ಧಿ ಕಾರ್ಯಗಳನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ಪ್ರಣಾಳಿಕೆಗೆ ಸಲಹೆ ಪಡೆಯುವಂತಹ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದು ಜಿಲ್ಲಾ ಪ್ರಣಾಳಿಕೆ ಸಂಗ್ರಹಣಾ ಸಮಿತಿ ಸಂಚಾಲಕರಾದ ಡಾ.ಧನಂಜಯ ಸರ್ಜಿ ಮನವಿ ಮಾಡಿದರು.

ಬಿಜೆಪಿ ಭದ್ರಾವತಿ ಮಂಡಲ ವತಿಯಿಂದ ನ್ಯೂಟೌನ್‌ ರೋಟರಿ ಸಭಾಂಗಣದಲ್ಲಿ ನಡೆದ ಪ್ರಣಾಳಿಕೆ ಸಂಗ್ರಹಣಾ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

Dr.Sarji shimogga  ಬಿಜೆಪಿ ಸರಕಾರ ಮಾಡಿರುವಂತಹ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮುಟ್ಟಿಸುವಂತಹ ಕೆಲಸವನ್ನು ಎಲ್ಲರೂ ಮಾಡಬೇಕು. ಜೊತೆಗೆ ಜನರಿಗೆ ಆಗಬೇಕಿರುವ ಕೆಲಸ, ಕಾರ್ಯಗಳ ಬಗ್ಗೆಯೂ ಮಾಹಿತಿಯನ್ನು ಸಂಗ್ರಹ ಮಾಡಿದಾಗ ಸಮಗ್ರವಾದ ಪ್ರಣಾಳಿಕೆ ಸಾಧ್ಯವಿದೆ. ದೇವಸ್ಥಾನಗಳಲ್ಲಿ ಅಥವಾ ಜನ ಸಂದಣಿ ಇರುವಂತಹ ಪ್ರದೇಶಗಳಲ್ಲಿ ಅಳವಡಿಸುವ
ಬಾಕ್ಸ್ ಗಳಲ್ಲಿ ಕ್ಯೂಆರ್‌ ಕೋಡ್‌ ಮೂಲಕವೂ ತಿಳಿಸಬಹುದು. ಜನಸಾಮಾನ್ಯರಿಗೆ, ಹಳ್ಳಿಗಳ ವಾಸಿಗರಿಗೆ, ಪ್ರದೇಶವಾಸಿಗಳಿಗೆ ಅಗತ್ಯವಿರುವ ಕೆಲಸಗಳ ಬಗ್ಗೆ ಮಾಹಿತಿ ನೀಡಿದರೆ ಅದನ್ನು ರಾಜ್ಯ ಕಮಿಟಿಗೆ ಕಳಿಸಲಾಗುವುದು ಎಂದರು.

ಸ್ವಾಮಿ ವಿವೇಕಾನಂದರು ಭಾರತ ವಿಶ್ವ ಗುರು ಆಗಬೇಕೆಂದು ಮಹೋನ್ನತವಾದ ಕನಸು ಕಂಡಿದ್ದರು. ಆ ಕನಸು ನನಸಾಗುವ ಕಾಲ ಕೂಡಿ ಬಂದಿದೆ. ಒಂದು ಕಾಲದಲ್ಲಿ ನಮ್ಮ ಭಾರತ ಪ್ರಧಾನಿ ನರೇಂದ್ರ ಮೋದಿ ಜೀ ಅವರಿಗೆ ಅಮೆರಿಕ ಪ್ರವೇಶ ಕೊಟ್ಟಿರಲಿಲ್ಲ. ಆದರೆ, ಕಾಲ ಇವತ್ತು ಬದಲಾಗಿದೆ ಅದು ನಿಮ್ಮೆಲ್ಲರಿಗೂ ಗೊತ್ತು. ಹಾಗೆಯೇ ಕಾಶ್ಮೀರದಲ್ಲಿ ಭಾರತದ ಬಾವುಟವನ್ನು ಹಾರಿಸುವುದು ಕಷ್ಟವಾಗುತ್ತಿತ್ತು. ಇವತ್ತು ಸ್ವಚ್ಛಂದವಾಗಿ ಹಾರುತ್ತಿದೆ. ಇವೆಲ್ಲದಕ್ಕೂ ಕಾರಣ ನರೇಂದ್ರ ಮೋದಿಜೀ ಅವರು ಎಂದರು.

ಪಾದಯಾತ್ರೆ ಮಾಡುವುದರಿಂದ ಭಾರತ ಜೋಡೋ ಆಗುತ್ತದೆ ಎನ್ನುವುದಕ್ಕಿಂತ ವಾಯುಯಾನ, ರೈಲ್ವೆ ಮತ್ತು ರಸ್ತೆ ಸಂಪರ್ಕದಿಂದ ಸಾಧ್ಯ ಎಂಬುದನ್ನು ಡಬಲ್‌ ಎಂಜಿನ್‌ ಸರಕಾರ ಅಭಿವೃದ್ದಿ ಕಾರ್ಯಗಳ ಮೂಲಕ ತೋರಿಸಿದೆ. ಅಲ್ಲದೇ ಪ್ರತಿ ತಿಂಗಳು ಹೆಣ್ಣು ಮಕ್ಕಳಿಗೆ 2000 ರೂ. ನೀಡುವುದಾಗಿ ಕಾಂಗ್ರೆಸ್‌ ಹೇಳಿದೆ. ಆದರೆ, ಜನಸಖ್ಯೆಯಾಧರಿಸಿ ವರ್ಷಕ್ಕೆ 75 ಸಾವಿರ ಕೋಟಿ ರೂ.ವೆಚ್ಚ ಆಗುತ್ತದೆ. ಇದು ಐದು ವರ್ಷಕ್ಕೆ ಮೂರು ಲಕ್ಷ ಕೋಟಿ ರೂ. ಆಗುತ್ತದೆ. ಇಷ್ಟೊಂದು ಮೊತ್ತವನ್ನು ಕೊಡಲು ಸಾಧ್ಯನಾ ಎಂದು ಜನಸಾಮಾನ್ಯರಾದ ನಾವುಗಳು ಯೋಚಿಸಬೇಕು , ಅಲ್ಲದೇ ಅರ್ಥಮಾಡಿಕೊಳ್ಳಬೇಕು ಎಂದರು.

ಯಾವುದೇ ಕ್ಷೇತ್ರ ಅಭಿವೃದ್ಧಿ ಆಗಬೇಕೆಂದರೆ ಮೂಲ ಸೌಕರ್ಯಗಳು ದೊರೆಯಬೇಕು, ಅದರಲ್ಲೂ ಸಂಪರ್ಕ ವ್ಯವಸ್ಥೆ ಚೆನ್ನಾಗಿ ಆಗಬೇಕು. ಈ ನಿಟ್ಟಿನಲ್ಲಿ ಪ್ರತಿ ಕ್ಷೇತ್ರದಲ್ಲೂ ಸಂಪರ್ಕ ಕ್ರಾಂತಿ ಆಗಿದೆ. ಒಟ್ಟು 7500 ಕೋಟಿ ರೂ. ವೆಚ್ಚದಲ್ಲಿ ರಸ್ತೆಅಭಿವೃದ್ಧಿಯಾಗಿದೆ.

1150 ಕೋಟಿ ರೂ.ವೆಚ್ಚದಲ್ಲಿ ರೈಲ್ವೆ ಅಭಿವೃದ್ಧಿ ನಮ್ಮ ಜಿಲ್ಲೆಯಲ್ಲಾಗಿದೆ. 2014ಕ್ಕೆ ಮೊದಲು ಒಂದು 11.3 ಕಿ.ಮೀ. ಹೈವೇ ಆಗ್ತಿತ್ತು, ಇವತ್ತು ಒಂದು ದಿನಕ್ಕೆ 33.6 ಕಿ.ಮೀ ಹೈವೇ ಅಭಿವೃದ್ಧಿಯಾಗುತ್ತಿದೆ, ಇದು ಅಭಿವೃದ್ಧಿಯ ವೇಗಕ್ಕೆ ಸಾಕ್ಷಿಯಾಗಿದೆ ಎಂದರು.

ಮಂಡಳ ಅಧ್ಯಕ್ಷರಾದ ಜಿ. ಧರ್ಮ ಪ್ರಸಾದ್‌ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯರಾದ ಡಿ.ಎಸ್‌.ಅರುಣ್‌, ಮಂಡಲ ಪ್ರಧಾನ ಕಾರ್ಯದರ್ಶಿ ಚನ್ನೇಶ್‌, ರಂಗಸ್ವಾಮಿ, ಸಭೆಯ ಸಂಚಾಲಕರಾದ ಗಿರೀಶ್‌, ಕುಮಾರ್‌ ನಾಯ್ಡು, ವರದರಾಜ್‌ ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

2nd PUC Exam Result 2026 ಪಿಯು (ವಿಜ್ಞಾನ ) ಪರೀಕ್ಷೆ: ಶಿವಮೊಗ್ಗದ ಮಹೀನ್ ಖಾನುಂ ಗೆ600/596 ಸಾಧನೆಯ ಗರಿ.

2nd PUC Exam Result 2026 ರಾಜ್ಯದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ...

Pace PU College Shivamogga ಶಿವಮೊಗ್ಗ ಪೇಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಡಿಸ್ಟಿಂಕ್ಷನ್ ಸುಗ್ಗಿ.

Pace PU College Shivamogga 2025-26ನೇ ಸಾಲಿನ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆ-1ಕ್ಕೆ...

CM Siddharamaiah ಚುನಾವಣಾ ಆಯೋಗವು ಗ್ಯಾರಂಟಿ ಯೋಜನೆಗಳ ಲೆಕ್ಕ ಕೇಳಿ ನಮ್ಮನ್ನ ಬೆದರಿಸಲು ಹೊರಟಿದೆ- ಸಿದ್ಧರಾಮಯ್ಯ

CM Siddharamaiah ದಾವಣಗೆರೆ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ನಡೆಯುತ್ತಿರುವ ಉಪಚುನಾವಣೆಗಳ ಸಂದರ್ಭದಲ್ಲಿ...