Friday, April 10, 2026
Friday, April 10, 2026

Chikmagalur ಚಿಕ್ಕಮಗಳೂರು ಬಸವನಹಳ್ಳಿಕೆರೆ ರಿಯಲ್ ಎಸ್ಟೇಟ್ ಸಂಸ್ಥೆಗೆ ವಹಿಸಬೇಡಿ

Date:

Chikmagalur  ಚಿಕ್ಕಮಗಳೂರು, ಜಿಲ್ಲೆಯ ಸೊಬಗನ್ನು ಹೆಚ್ಚಿಸುವ ಬಸವನಹಳ್ಳಿ ಕೆರೆಯನ್ನು ರಿಯಲ್ ಎಸ್ಟೇಟ್ ಮಾಡುವ ಉದ್ದೇಶದಿಂದ ಖಾಸಗೀ ಸಂಸ್ಥೆಗೆ ನೀಡಿ ಮೂಲಸೌಂದರ್ಯವನ್ನು ಹಾಳುಗೆಡವಲಾಗುತ್ತಿದೆ. ಈ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿ ಹೋರಾಟ ನಡೆಸಲು ಮುಂದಾಗಲಾಗಿದೆ ಎಂದು ವಕೀಲೆ ಟಿ.ಶ್ರೀದೇವಿ ಹೇಳಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೇ ಕೆರೆಯನ್ನು ಬೆಂಗಳೂರು ಮಾದರಿಯ ಪ್ರಾಪರ್ಟಿ ಡೆವರ‍್ಸ್ಗಳಿಗೆ ಹಸ್ತಾಂತರ ಮಾಡಲಾಗಿದೆ. ಕೆರೆಯ ನ್ನು ಪುನರುಜ್ಜೀವನ ಮಾಡಹುದೇ ಹೊರತು ಡೆವಲಪ್ ಮಾಡಲು ಅವಕಾಶವಿಲ್ಲ. ಕೆರೆಕಟ್ಟೆಗಳನ್ನು ಅವುಗಳ ಪಾಡಿಗೆ ಬಿಡುವುದು ಸೂಕ್ತ ಎಂದು ಹೇಳಿದ್ದಾರೆ.

ಇಂದಿನ ಬಿರು ಬೇಸಿಗೆಯಲ್ಲಿ ನೀರಿನ ಮೂಲವನ್ನೇ ಮುಚ್ಚುತ್ತಿರುವುದನ್ನು ಎಲ್ಲರು ಪ್ರಶ್ನಿಸಬೇಕು. ಕೆರೆ, ಕಾಡು, ಹಾಗೂ ನದಿಗಳನ್ನು ಅಭಿವೃದ್ದಿಪಡಿಸುವುದು ಹೇಗೆ ಎಂದು ಜಿಲ್ಲಾಡಳಿತ ವಿವರಿಸಬೇಕು. ಕೆರೆಯ ಮೂಲ ಸ್ವರೂಪ ವನ್ನು ಉಳಿಸಿಕೊಂಡು ಹೋಗುವುದೇ ಅಭಿವೃದ್ದಿ. ಈಗಾಗಲೇ ಕೋಟೆಕೆರೆ ಅವನತಿಯತ್ತ ಸಾಗಿದ್ದು ಅದೇ ರೀತಿ ಯಲ್ಲಿ ಬಸವನಹಳ್ಳಿಕೆರೆಯನ್ನು ಅವನತಿಯತ್ತ ತೂಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಹಿಂದೆ ರಾಜರು ಮತ್ತು ಬ್ರಿಟಿಷ್ ಆಡಳಿತದಲ್ಲಿಯೂ ಕೆರೆಕುಂಟೆಗಳ ನಿರ್ವಹಣೆ ಬಿಗಿಯಾಗಿರುತ್ತಿತ್ತು. ಹಾಗೂ ಜಲಮೂಲಗಳಿಗೆ ಅತ್ಯಂತ ಪ್ರಾಮುಖ್ಯತೆಯನ್ನು ನೀಡುತ್ತಿದ್ದರು. ಆದರೆ ಇಂದು ಭಾರತೀಯ ಸಂಸ್ಕೃತಿಯ ಹರಿಕಾರರು ಎಂದು ಹೇಳಿಕೊಳ್ಳುವವರು ಕೋಟೆಕೆರೆ, ಅಯ್ಯನಕೆರೆ ಸೇರಿದಂತೆ ಇದೀಗ ಬಸವನಹಳ್ಳಿ ಕೆರೆಯನ್ನು ನುಂಗಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.

Chikmagalur ಬಸವನಹಳ್ಳಿ ಕೆರೆಯ ಮೂಲ ಸ್ವರೂಪವನ್ನೇ ಈಗಾಗಲೇ ಅರ್ಧ ಬದಲಾಯಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆಕ್ಷೇಪ ವ್ಯಕ್ತಪಡಿಸಿದರೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ಮೌನಕ್ಕೆ ಶರಣಾಗಿರುವುದನ್ನು ಗಮನಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಮೂಲಕ ಕೆರೆಯ ಅನವತಿಯನ್ನು ತಡೆಯುವಂತೆ ಹಾಗೂ ಮುಚ್ಚದಂತೆ ದಾವಾ ದಾಖಲಿಸಲಾಗಿದೆ ಎಂದಿದ್ದಾರೆ.

ಕೆರೆಯ ವಿಚಾರದಲ್ಲಿ ಮುಂದಾದರೂ ಜಿಲ್ಲೆಯ ಜನತೆ ಸಹಕಾರ ನೀಡಿ ಕೆರೆ ಉಳಿಸುವ ಪ್ರಯತ್ನಕ್ಕೆ ಕೈಜೋಡಿ ಸುವುದು ಸೂಕ್ತ ಹಾಗೂ ಮುಂದಿನ ದಿನಗಳಲ್ಲಿ ನ್ಯಾಯಯುತ ಹೋರಾಟಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

2nd PUC Exam Result 2026 ಪಿಯು (ವಿಜ್ಞಾನ ) ಪರೀಕ್ಷೆ: ಶಿವಮೊಗ್ಗದ ಮಹೀನ್ ಖಾನುಂ ಗೆ600/596 ಸಾಧನೆಯ ಗರಿ.

2nd PUC Exam Result 2026 ರಾಜ್ಯದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ...

Pace PU College Shivamogga ಶಿವಮೊಗ್ಗ ಪೇಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಡಿಸ್ಟಿಂಕ್ಷನ್ ಸುಗ್ಗಿ.

Pace PU College Shivamogga 2025-26ನೇ ಸಾಲಿನ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆ-1ಕ್ಕೆ...

CM Siddharamaiah ಚುನಾವಣಾ ಆಯೋಗವು ಗ್ಯಾರಂಟಿ ಯೋಜನೆಗಳ ಲೆಕ್ಕ ಕೇಳಿ ನಮ್ಮನ್ನ ಬೆದರಿಸಲು ಹೊರಟಿದೆ- ಸಿದ್ಧರಾಮಯ್ಯ

CM Siddharamaiah ದಾವಣಗೆರೆ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ನಡೆಯುತ್ತಿರುವ ಉಪಚುನಾವಣೆಗಳ ಸಂದರ್ಭದಲ್ಲಿ...