Monday, February 2, 2026
Monday, February 2, 2026

Women’s Achievement ಹೆಣ್ಣಿನ ಸಾಧನೆಗಳನ್ನ ಸದಾ ಗೌರವಿಸಬೇಕು- ಕೆ.ಇ.ಕಾಂತೇಶ್

Date:

Women’s Achievement  ಶಿವಮೊಗ್ಗ: ಸಮಯಕ್ಕೆ ತಕ್ಕಂತೆ ನಿರ್ಧಾರ, ಸಮಯಕ್ಕೆ ಆದ್ಯತೆ, ಜೊತೆಗೆ ಮನೆಗೆ ಆದ್ಯತೆ ನೀಡುವ ಮಹಿಳೆಯರು ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಜಿ.ಪಂ. ಮಾಜಿ ಸದಸ್ಯರು ಮತ್ತು ಸ್ಟೈಲ್ ಡಾನ್ಸ್ ಗ್ರೂಪ್ ಸಂಸ್ಥೆಯ ಅಧ್ಯಕ್ಷರು ಕೆ.ಇ.ಕಾಂತೇಶ್ ಅವರು ಹೇಳಿದರು.

ಸ್ಟೈಲ್ ಡಾನ್ಸ್ ಗ್ರೂಪ್ ಶಿವಮೊಗ್ಗ ನೃತ್ಯ ಸಂಸ್ಥೆಯ ವತಿಯಿಂದ “ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ” ನೃತ್ಯ ತರಗತಿಯ ವಿದ್ಯಾರ್ಥಿಗಳ ಮಹಿಳಾ ಪೋಷಕರೊಂದಿಗೆ ಸೇರಿ “ಸ್ಟೈಲ್ ಕುಟುಂಬ ಅವಾರ್ಡ್ 2023” ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಯಿಯಿಂದಲೇ ಸೃಷ್ಟಿಯಾಗಿರುವ ನಾವುಗಳು, ಮನುಷ್ಯ ಜನ್ಮವನ್ನು ಪಡೆದುಕೊಂಡು ಬಂದಿದ್ದೇವೆ. ಹೆಣ್ಣಾಗಲೀ, ಗಂಡಾಗಲೀ ಹೆಣ್ಣಿನ ಸಾಧನೆಯನ್ನು ಸದಾ ಗೌರವಿಸಬೇಕು. ಕೇವಲ ಹೆಣ್ಣನ್ನು ಪೂಜಿಸುವುದಷ್ಟೇ,ಅಲ್ಲದೇ, ಆಕೆಯನ್ನು ಗೌರವದಿಂದ ಕಂಡಾಗ ಮಾತ್ರ ಈ ದಿನಾಚರಣೆಗೆ ಅರ್ಥ ಬರುವಂತಾಗುತ್ತದೆ. ಹೆಣ್ಣು ಸಮಾಜದ ಕಣ್ಣಾಗಿದ್ದಾಳೆ. ಸಮಾಜದಲ್ಲಿ ಹೆಣ್ಣನ್ನು ಉನ್ನತ ಸ್ಥಾನದಲ್ಲಿ ಕಾಣುತ್ತಿದ್ದೇವೆ ಎಂದರು.

ಸ್ಟೈಲ್ ಡ್ಯಾನ್ಸ್ ನೃತ್ಯ ಸಂಸ್ಥೆಯಲ್ಲಿರುವ ಮಹಿಳಾ ಪೋಷಕರು, ಯುವತಿಯರಿಗೆ ನಮ್ಮ ಸಾಧಕರು ಎಂಬ ಪ್ರಶಸ್ತಿ ಕೊಟ್ಟು ಸಂಸ್ಥೆಯ ಮೂಲಕ ಗುರುತಿಸುತ್ತಿರುವುದು ನಿಜಕ್ಕೂ ಹೆಮ್ಮೆ ಪಡಬೇಕಾದ ವಿಷಯ ಎಂದು ಹೇಳಿದರು.

“ಯುವ ಸಾಧಕ ಅವಾರ್ಡ್ ಮತ್ತು “ನಮ್ಮ ಸಾಧಕರು” ಎಂಬ ಪ್ರಶಸ್ತಿಗಳನ್ನು ಪುರಸ್ಕೃತರಿಗೆ ಸಂಸ್ಥೆಯ ಅಧ್ಯಕ್ಷ ಕೆ .ಈ ಕಾಂತೇಶ್ ಅವರು ನೀಡಿ ಗೌರವಿಸಿದರು.

Women’s Achievement  ಮಹಿಳೆಯರ ಆತ್ಮರಕ್ಷಣೆಗಾಗಿ ” ಸೆಲ್ಫ್ ಡಿಫೆನ್ಸ್” ತರಗತಿಯನ್ನು ಅಂತರಾಷ್ಟೀಯ ಕರಾಟೆ ಪಟು “ಮೀನಾ” ಅವರು ನಡೆಸಿ ಮಹಿಳಾ ಆತ್ಮರಕ್ಷಣೆಯ ಕೆಲವು ಕೌಶಲ್ಯತೆ ಮತ್ತು ಭಂಗಿಯನ್ನು ಕಲಿಸಿಕೊಟ್ಟರು.
ಈ ಮೂಲಕ ಪ್ರಶಸ್ತಿ ಪಡೆದ ಫಿಟ್ನೆಸ್ ವಿಭಾಗದ ವಿದ್ಯಾರ್ಥಿನಿಯರಿಗೆ , ಡಾನ್ಸ್ ವಿಭಾಗ ವಿದ್ಯಾರ್ಥಿನಿಯರಿಗೆ ಮತ್ತು ಭಾಗವಹಿಸಿದ ಪ್ರತಿಯೊಬ್ಬ ಪೋಷಕಿಯರು ಸಂಸ್ಥೆಯ ಅಧ್ಯಕ್ಷರಾದ ಕೆ ಈ ಕಾಂತೇಶ್ ಮತ್ತು ಸಂಸ್ಥೆಯ ಸಂಸ್ಥಾಪಕ ಶಶಿಕುಮಾರ್ ಎನ್ ಅವರು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ನೃತ್ಯ ನಿರ್ದೇಶಕರುಗಳಾದ ವಿನಯ್ , ಜೀತೇಂದ್ರ, ದರ್ಶನ್ ಮತ್ತು ಅಕ್ಷಯ್ ಕುಮಾರ್ , ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...