Saturday, September 28, 2024
Saturday, September 28, 2024

International Women’s Day ಮಹಿಳೆ ಅಪಾರ ಶಕ್ತಿಯುಳ್ಳ ಚೇತನ-ಡಾ.ಶುಭಾ ಮರವಂತೆ

Date:

International Women’s Day ಪದಾರ್ಥಗಳನ್ನು ರುಚಿಕರ ಅಡಿಗೆಯಾಗಿ , ಮನೆಯನ್ನು ಗೃಹವಾಗಿ , ಒಂದು ಜೀವವನ್ನು ಶಕ್ತಿಯಾಗಿ ಮಾರ್ಪಡಿಸುವ ಅಪಾರ ಶಕ್ತಿ ಕೇವಲ ಒಬ್ಬ ಮಹಿಳೆಗೆ ಮಾತ್ರ ಎಂದು ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು ಹಾಗು ಪ್ರಬಲ ವಾಗ್ಮಿಯಾದ ಡಾ .ಶುಭಾ ಮರವಂತೆಯವರು ಹೇಳಿದರು.

ಮಾರ್ಚ್ 8 ರಂದು ಐಎಂಎ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಭಾರತೀಯ ವೈದ್ಯಕೀಯ ಸಂಘ (ಐಎಂಎ ) ಶಿವಮೊಗ್ಗ ಶಾಖೆಯ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ಆರೋಗ್ಯ ಕ್ಷೇತ್ರದಲ್ಲಿ ಮಹಿಳೆ ವಿಷಯ ಮಂಡಿಸುತ್ತಾ , ಸಾಹಿತ್ಯ ಲೋಕಕ್ಕೆ ಕಾಲಿಟ್ಟ ಶಿವಮೊಗ್ಗೆಯ ಬಹಳಷ್ಟು ಮಹಿಳಾ ವೈದ್ಯರ ಸಮಯ ಪಾಲನೆಯಿಂದ ವಿಸ್ಮಯ ಹುಟ್ಟಿಸುತ್ತಿದ್ದಾರೆ . ಮಹಿಳಾ ವೈದ್ಯರೆಂದರೆ ದಶಭುಜ ಸ್ವರೂಪ ದೇವಿ ಸಮಾನರಾಗಿ ಕಾಣುತ್ತೀರ ಎಂದು ಹೇಳುತ್ತಾ , ನಮ್ಮ ದೇಶದ ಮೊದಲ ಮಹಿಳಾ ವೈದ್ಯರಾದ ಡಾ. ಆನಂದಿ ಬಾಯಿ , ಡಾ . ಕದಂಬಿನಿ ಗಂಗೂಲಿಯವರ ಜೀವನ ಚರಿತ್ರೆಯನ್ನು ಮೆಲುಕು ಹಾಕಿದರು.

ಮತ್ತೊಬ್ಬ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಪ್ರಸೂತಿ ಹಾಗು ಸ್ತ್ರೀರೋಗ ತಜ್ಞೆ ಡಾ . ಉಷಾ ರಮೇಶ್ ಅವರು ಮಹಿಳಾ ವೈದ್ಯರ ಕೆಲಸ-ಮನೆ ನಿರ್ವಹಣೆ ಗೆ ಸುಲಭ ಸೂತ್ರಗಳ ಬಗ್ಗೆ ಮಾತನಾಡುತ್ತ ಮಹಿಳಾ ವೈದ್ಯರ ಸವಾಲುಗಳು , ಮಕ್ಕಳು ಹಾಗು ಕುಟುಂಬ ಮತ್ತು ವೈಯುಕ್ತಿಕ ಬದುಕಿನ ಒತ್ತಡವನ್ನು ಸರಿಯಾದ ಶಿಸ್ತಿನ ಬದುಕು , ಸಮಯದ ಯೋಜನೆಯಿಂದ ಯಶಸ್ವಿಯಾಗಿ ಎದುರಿಸಿ ಸುಖಕರ ಬಾಳ್ವೆ ಮಾಡಿ , ಇತರ ಹವ್ಯಾಸಗಳ ಕೃಷಿಗೂ ಅವಕಾಶ ಕಲ್ಪಿಸಿಕೊಳ್ಳಬಹುದೆಂದು ಹುರಿದುಂಬಿಸಿದರು .

ಐಎಂಎ ಸದಸ್ಯರಾದ ಡಾ . ಜಯಕುಮಾರ್ ಶೆಟ್ಟಿಯವರ ಪತ್ನಿ ಶ್ರೀಮತಿ ಶ್ರೀಕಲಾ ಶೆಟ್ಟಿಯವರು ತಮ್ಮ ಆಪ್ತರಿಗೆ ಯಕೃತ್ತು ಅಂಗಾಂಗ ದಾನ ಮಾಡಿ ಹೃದಯತೆ ಮೆರೆದಿದ್ದಕ್ಕೆ ಗೌರವಿಸಲಾಯಿತು .

ಐಎಂಎ ಅಧ್ಯಕ್ಷರಾದ ಡಾ. ಅರುಣ್ ಎಂ .ಎಸ್ ಮಾತನಾಡಿ ಕಟ್ಟು ಪಾಡುಗಳು , ಸಾಮಾಜಿಕ ನಿರೀಕ್ಷೆಗಳಿಂದ ನಮ್ಮ ಸಮಾಜ ಮಹಿಳೆಯರನ್ನು ಶೋಷಣೆ ದೌರ್ಜನ್ಯಗಳಿಗೆ ಗುರಿಪಡಿಸುತ್ತಲೇ ಇದೆ . ಮಹಿಳಾ ಶಿಕ್ಷಣ , ಬದಲಾದ ಹಕ್ಕುಗಳು , ಲಿಂಗ ಸಮತೋಲನ ಇವೆಲ್ಲವುಗಳ ಬಗ್ಗೆ ನಾವಿಂದು ಮಾತನಾಡುತ್ತಿರುವುದು ಸ್ವಾಗತಾರ್ಹ ಅನಿಸಿದರೂ , ನಿಜವಾದ ಬದಲಾವಣೆ ಅವಳನ್ನು ಇದ್ದ ಹಾಗೆ ಒಪ್ಪಿಕೊಂಡು , ಯಾವುದೇ ಸ್ವಾರ್ಥ -ಅಹಂಕಾರಕ್ಕೆ ಬಳಸದೆ , ಸಹಜೀವಿ ತರಹ ನೋಡುವುದರಿಂದ ಶುರುವಾಗಲಿ ಎಂಬ ಸಂದೇಶ ನೀಡಿದರು .

International Women’s Day ಐಎಂಎ ಮಹಿಳಾ ವೈದ್ಯರ ವಿಭಾಗದ ಅಧ್ಯಕ್ಷೆ ಡಾ . ವಿನಯಾ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಖಜಾಂಚಿ ಡಾ. ಶಶಿಧರ್ , ಹಿರಿಯ ವೈದ್ಯರಾದ ಡಾ . ನಂದಿನಿ , ಡಾ . ನಿರ್ಮಲ , ಡಾ . ಚಿತ್ರಾ ಶ್ರೀನಿವಾಸ್ , ಡಾ. ವಿಮಲಬಾಯಿ ಹಾಗೂ ಹಲವಾರು ಮಹಿಳಾ ವೈದ್ಯರು , ಐಎಂಎ ಸದಸ್ಯರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...